Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bollywood

ಮಣಿರತ್ನಂ ಸಿನಿಮಾದಲ್ಲಿ ನಾಯಕಿ ಆಗಲು ನಾನು ಚಿತ್ರರಂಗಕ್ಕೆ ಬಂದಿದ್ದೆ : ಅದಿತಿ ರಾವ್

Public TV
Last updated: February 1, 2022 5:32 pm
Public TV
Share
2 Min Read
Aditi Rao Hydari
SHARE

ಮುಂಬೈ: ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು ಎಂದು ಪ್ಯಾನ್ ಇಂಡಿಯಾ ನಟಿ ಅದಿತಿ ರಾವ್ ಹೈದರಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅದಿತಿ ತಮ್ಮ ಸಿನಿ ಜರ್ನಿ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ನಾನು ಹಲವು ಭಾಷೆಗಳಲ್ಲಿ ನಟಿಸುವುದರಿಂದ ನನಗೆ ಕೆಲವೊಮ್ಮೆ ಗೊಂದಲವಾಗುತ್ತೆ. ನಾನು ಯಾವ ಭಾಷೆಯ ಸಿನಿಮಾ ಮಾಡಲು ಸೆಟ್ ಗೆ ಹೋಗುತ್ತೇನೂ ಆ ಭಾಷೆ ನಡುವೆ ನಾನು ಬೆರೆಯುತ್ತೇನೆ. ನಾನು ತೆಲುಗು ಮಾತನಾಡಬೇಕು ಎಂದುಕೊಂಡಾಗ, ನಾನು ತಮಿಳು ಮಾತನಾಡಲು ಪ್ರಾರಂಭಿಸುತ್ತೇನೆ. ಶೂಟಿಂಗ್ ಸೆಟ್ ಗೆ ಹೋದಾಗ ನಾನು ಆ ಭಾಷೆಯಲ್ಲಿ ಮಾತನಾಡುತ್ತೇನೆ. ನಾನು ಇದನ್ನು ನಿಜವಾಗಿಯೂ ಆನಂದಿಸುತ್ತೇನೆ ಎಂದು ನಗುತ್ತಾ ಉತ್ತರಿಸಿದರು. ಇದನ್ನೂ ಓದಿ: ತಂದೆಯ `ಧಡ್ಕನ್’ ಸಿನಿಮಾ ರಿಮೇಕ್‍ನಲ್ಲಿ ನಟಿಸಲು ಬಯಸುತ್ತೇನೆ: ಅಹಾನ್ ಶೆಟ್ಟಿ

 

View this post on Instagram

 

A post shared by Aditi Rao Hydari (@aditiraohydari)

ಅದಿತಿ ಮಣಿರತ್ನಂ, ಸಂಜಯ್ ಲೀಲಾ ಬನ್ಸಾಲಿ ಮತ್ತು ಸುಧೀರ್ ಮಿಶ್ರಾ ಅವರಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಚಿತ್ರರಂಗಕ್ಕೆ ಬಂದಿದ್ದೆ ಮಣಿರತ್ನಂ ಸಿನಿಮಾಗಳಲ್ಲಿ ನಾಯಕಿಯಾಗಲು. ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ನನ್ನ ಕನಸಗಿತ್ತು. ಮುಂದೊಂದು ದಿನ ಅವನೊಂದಿಗೆ ಕೆಲಸ ಮಾಡುವ ಆಸೆಯಿಂದ ಸಿನಿಮಾ ಪ್ರವೇಶಿಸಿದ್ದೆ ಎಂದು ಬಹಿರಂಗಪಡಿಸಿದರು.

ನಾನು ಮಣಿರತ್ನಂ ಸಿನಿಮಾದಲ್ಲಿ ನಾಯಕಿಯಾಗಬೇಕೆಂದು ಬಯಸಿದ್ದೆ ಮತ್ತು ಅದೇ ನನ್ನನ್ನು ಚಲನಚಿತ್ರಗಳಿಗೆ ಸೇರುವಂತೆ ಮಾಡಿತು. ಆದರೆ ಇದು ಕೇವಲ ಕನಸು. ಆದರೂ ನಾನು ಇದನ್ನು ಮಾಡಲು ಬಯಸಿದೆ. ನಾನು ಮೊದಲು ಮಣಿ ಸರ್ ಅವರ ಮೊದಲ ಭಾಷೆ ಕಲಿತೆ. ನನ್ನ ಶ್ರಮಕ್ಕೆ ತಕ್ಕಂತೆ ನಾನು ಅವರ ಜೊತೆ ಕೆಲಸ ಮಾಡಿದೆ ಎಂದು ಖುಷಿ ವ್ಯಕ್ತಪಡಿಸಿದರು.

MANIRATNAM

ನಾನು 2010-11 ರ ಸುಮಾರಿಗೆ ಮುಂಬೈಗೆ ಹೋಗಿ ಹಿಂದಿ ಸಿನಿಮಾ ಮಾಡಲು ಪ್ರಾರಂಭಿಸಿದೆ. ನಾನು ಸಹ ತುಂಬಾ ಎಡವುತ್ತಿದ್ದೆ. ಆದರೆ ಎಲ್ಲದಕ್ಕಿಂತ ನನ್ನ ಕನಸು ನನಗೆ ತುಂಬಾ ಮುಖ್ಯವಾಗಿತ್ತು. ಅಂತಿಮವಾಗಿ ನಾನು 2016 ರಲ್ಲಿ ಮಣಿ ಸರ್ ಅವರೊಂದಿಗೆ ಕೆಲಸ ಮಾಡಿದೆ ಎಂದು ನಗುತ್ತಾ ಹೇಳಿದರು.

ನಾನು ಮೊದಲ ದಿನ ಚಿತ್ರದ ಸೆಟ್‍ಗೆ ಕಾಲಿಟ್ಟಾಗ, ನನಗೆ ಏನೂ ತಿಳಿದಿರಲಿಲ್ಲ. ನಾನು ನಟನೆಯನ್ನು ಆನಂದಿಸುತ್ತಿದ್ದೆ. ಏಕೆಂದರೆ ನಾವು ಸೆಟ್‍ನಲ್ಲಿ ಇದ್ದಾಗ ನಮಗೆ ಪ್ರತಿಯೊಂದು ಅಂಶವು ಹೊಸದನ್ನು ಕಲಿಸುತ್ತಿರುತ್ತೆ. ನಾವು ಎಲ್ಲವನ್ನು ಸರಿಯಾಗಿ ನೋಡಿ ಕಲಿಯಬೇಕು ಎಂದು ವಿವರಿಸಿದರು. ಇದನ್ನೂ ಓದಿ: ‘ನಾವು ಬಿಗ್‍ಬಿ ಅಭಿಮಾನಿಗಳು’ ಎಂದ ಸುಜೋಯ್ ಘೋಷ್ – ಕುರ್ತಾ ಬಗ್ಗೆ ಪ್ರಶ್ನಿಸಿದ ಅಭಿಷೇಕ್ ಬಚ್ಚನ್

 

View this post on Instagram

 

A post shared by Aditi Rao Hydari (@aditiraohydari)

ಅದಿತಿ ಇಲ್ಲಿಯವರೆಗೆ ಮಣಿರತ್ನಂ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅವು ‘ಕಾಟ್ರು ವೆಲಿಯಿದೈ'(2017) ಮತ್ತು ‘ಚೆಕ್ಕ ಚಿವಂತ ವಾನಂ'(2018). 2021 ರಲ್ಲಿ ದಿ ಗರ್ಲ್ ಆನ್ ದಿ ಟ್ರೈನ್, ಸರ್ದಾರ್ ಕಾ ಗ್ರ್ಯಾಂಡ್‍ಸನ್, ಮಹಾ ಸಮುದ್ರಂ(ತೆಲುಗು) ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ಯಾನ್-ಇಂಡಿಯಾ ನಟಿ ಅದಿತಿ ಹಿಂದಿ, ತಮಿಳು, ತೆಲುಗು, ಮರಾಠಿ ಮತ್ತು ಇತರ ಭಾಷೆಗಳಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಆಕೆಯ ಜನಪ್ರಿಯ ಹಿಂದಿ ಸಿನಿಮಾ ‘ಯೇ ಸಾಲಿ ಜಿಂದಗಿ’, ‘ವಜೀರ್’, ದಕ್ಷಿಣ ಭಾರತದಲ್ಲಿ ‘ಸಮ್ಮೋಹನಂ’, ‘ವಿ’ ಮತ್ತು ‘ಸೈಕೋ’ಗಳನ್ನು ಸಿನಿಮಾಗಳಲ್ಲಿ ನಟಿಸಿದ್ದಾರೆ.

TAGGED:Aditi Rao HydariMani Ratnammumbaiಅದಿತಿ ರಾವ್ ಹೈದರಿಮಣಿರತ್ನಂಮುಂಬೈ
Share This Article
Facebook Whatsapp Whatsapp Telegram

Cinema Updates

Timmana Mottegalu
ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
32 seconds ago
Karisma Kapoor Sunjay Kapur
ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ
10 hours ago
Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
1 day ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
1 day ago

You Might Also Like

Anju Sharma
Crime

ಅಹಮದಾಬಾದ್ ವಿಮಾನ ದುರಂತ – ಮಗಳ ಸೇರುವ ತವಕದಲ್ಲಿದ್ದ ತಾಯಿ ಸಾವಿನ ಮನೆಗೆ!

Public TV
By Public TV
8 minutes ago
dentist Nirali patel died in plane crash
Latest

ಅಹಮದಾಬಾದ್ ವಿಮಾನ ದುರಂತ – ದಂತವೈದ್ಯೆಯಾಗಿದ್ದ ಭಾರತೀಯ ಮೂಲದ ಕೆನಡಾ ಪ್ರಜೆ ಸಾವು

Public TV
By Public TV
41 minutes ago
Foreign woman arrested for smuggling drugs worth Rs 10 crore in Bengaluru
Bengaluru City

ಬೆಂಗಳೂರು | 10 ಕೋಟಿ ಮೌಲ್ಯದ ಮಾದಕವಸ್ತು ಸಾಗಾಟ – ವಿದೇಶಿ ಮಹಿಳೆ ಅರೆಸ್ಟ್

Public TV
By Public TV
50 minutes ago
Arjun Patolia
Crime

Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

Public TV
By Public TV
1 hour ago
Team India Tribute to Plane crash in london
Cricket

ಏರ್ ಇಂಡಿಯಾ ವಿಮಾನ ದುರಂತ – ಕಪ್ಪು ಪಟ್ಟಿ ಧರಿಸಿ ಟೀಂ ಇಂಡಿಯಾ ಆಟಗಾರರಿಂದ ಮೌನಾಚರಣೆ

Public TV
By Public TV
2 hours ago
wild elephant crops destroys
Chamarajanagar

ಚಾ.ನಗರ| ಜಮೀನಿಗೆ ನುಗ್ಗಿ ತೆಂಗು ಬೆಳೆ ನಾಶಪಡಿಸಿದ ಕಾಡಾನೆಗಳ ಹಿಂಡು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?