Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅದಮಾರು ಶ್ರೀಗಳಿಗೆ ಸನ್ಯಾಸದಲ್ಲೇ ವೈರಾಗ್ಯ- ಮಠದ ಸಂಪೂರ್ಣ ಅಧಿಕಾರ ಬಿಟ್ಟುಕೊಟ್ರು ಹಿರಿಯ ಯತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಅದಮಾರು ಶ್ರೀಗಳಿಗೆ ಸನ್ಯಾಸದಲ್ಲೇ ವೈರಾಗ್ಯ- ಮಠದ ಸಂಪೂರ್ಣ ಅಧಿಕಾರ ಬಿಟ್ಟುಕೊಟ್ರು ಹಿರಿಯ ಯತಿ

Districts

ಅದಮಾರು ಶ್ರೀಗಳಿಗೆ ಸನ್ಯಾಸದಲ್ಲೇ ವೈರಾಗ್ಯ- ಮಠದ ಸಂಪೂರ್ಣ ಅಧಿಕಾರ ಬಿಟ್ಟುಕೊಟ್ರು ಹಿರಿಯ ಯತಿ

Public TV
Last updated: November 11, 2018 12:48 pm
Public TV
Share
3 Min Read
UDP 1
SHARE

– ಈಶಪ್ರಿಯ ಸ್ವಾಮೀಜಿಗೆ ಮಂತ್ರಾಕ್ಷತೆ ಅಧಿಕಾರ

ಉಡುಪಿ: ಮನುಷ್ಯ ಜೀವನದಲ್ಲಿ ವೈರಾಗ್ಯ ಬಂದಾಗ ಸನ್ಯಾಸಿಯಾಗುತ್ತಾನೆ. ಆದ್ರೆ ಇಲ್ಲಿಯ ಸನ್ಯಾಸಿಗೇ ವೈರಾಗ್ಯ ಬಂದಿದೆ. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಅದಮಾರು ಮಠದ ಎಲ್ಲಾ ಜವಾಬ್ದಾರಿಯನ್ನು ಹಿರಿಯ ಸ್ವಾಮೀಜಿ ಕಿರಿಯ ಯತಿಗಳಿಗೆ ಹಸ್ತಾಂತರಿಸಿ ಶೈಕ್ಷಣಿಕ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

ವರ್ತಮಾನದಲ್ಲಿ ಇದೊಂದು ಅಪರೂಪದ ವಿದ್ಯಮಾನ. ಕರ್ನಾಟಕದ ಪ್ರತಿಷ್ಠಿತ ಮಠವೊಂದರ ಹಿರಿಯ ಯತಿಗಳು ತನ್ನಲ್ಲಿ ಎಲ್ಲಾ ಸಾಮಥ್ರ್ಯಗಳಿದ್ದರೂ ಕಿರಿಯರಿಗೆ ಅಧಿಕಾರ ಬಿಟ್ಟುಕೊಟ್ಟಿರುವುದು ಮಾದ್ವ ಪರಂಪರೆಯಲ್ಲಿ ವಿಶೇಷವೆನಿಸಿದೆ. ರಾಜ್ಯದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಉಡುಪಿಯ ಅದಮಾರು ಮಠದಲ್ಲಿ ಅಪರೂಪದ ವಿದ್ಯಮಾನ ನಡೆದಿದೆ.

UDP 4

ಅರವತ್ತರ ಹರೆಯದಲ್ಲಿರುವ ಹಿರಿಯ ಯತಿಗಳಾದ ವಿಶ್ವಪ್ರಿಯ ತೀರ್ಥರು ತನ್ನ ಕಿರಿಯ ಸ್ವಾಮೀಜಿಗೆ ಮಠದ ಎಲ್ಲಾ ಅಧಿಕಾರವನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಸನ್ಯಾಸ ಸ್ವೀಕಾರ ಮಾಡಿರುವ ಈಶಪ್ರಿಯ ತೀರ್ಥರು ಇನ್ನು ಮುಂದೆ ಅದಮಾರು ಮಠದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ. ಮೂವತ್ತಮೂರರ ಹರೆಯದ ಈಶಪ್ರಿಯರು ಈ ಮೂಲಕ ಮಹತ್ತರ ಜವಾಬ್ದಾರಿ ನಿಭಾಯಿಸಲು ಸಜ್ಜಾಗಬೇಕಾಗಿದೆ. ಎಂಜಿನಿಯರಿಂಗ್ ಪದವೀಧರರಾಗಿರುವ ಕಿರಿಯ ಸ್ವಾಮೀಜಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆದ ಅಪರೂಪದ ಪೀಠಾಧಿಪತಿಯಾಗಿದ್ದಾರೆ. ಆಚಾರ್ಯ ಮಧ್ವರಿಂದ ಪ್ರತಿಷ್ಠಾಪಿತ ಅಷ್ಟಮಠಗಳಲ್ಲಿ ಅದಮಾರು ಮಠವೂ ಒಂದು. 800 ವರ್ಷಗಳ ಪರಂಪರೆಯಲ್ಲಿ ಈಶಪ್ರಿಯರು 33 ನೇ ಯತಿಯಾಗಿದ್ದಾರೆ.

vlcsnap 2018 11 11 12h43m30s146 e1541920475198

ಈ ಬಗ್ಗೆ ಮಾತನಾಡಿದ ಅದಮಾರು ಹಿರಿಯ ಯತಿ ವಿಶ್ವಪ್ರಿಯ ತೀರ್ಥ, ನನಗೆ ಜವಾಬ್ದಾರಿ ಬಹಳ ಹಗುರವಾಗುತ್ತಿದೆ. ಈಶಪ್ರಿಯರಿಗೆ ವೈದಿಕ ವಿದ್ಯೆಯ ಜೊತೆ ಲೌಕಿಕ ವಿದ್ಯೆ ಇದೆ. ಕಿರಿಯ ಶ್ರೀಗಳಿಗೆ ಒಳ್ಳೆಯ ತಿಳುವಳಿಕೆ ಇದೆ. ಅದಮಾರು ಮಠದ ಸಮಸ್ತ ಜವಾಬ್ದಾರಿ ವಹಿಸಿಕೊಡುತ್ತೇನೆ. ಅದಮಾರು ಸಂಸ್ಥಾನ ಚೆನ್ನಾಗಿ ನಿಭಾಯಿಸುತ್ತಾರೆ ಎಂಬ ನಂಬಿಕೆಯಿದ್ದು, ನಾನು ನಿರಾಳವಾಗಿ ಇರಲು ಇಚ್ಚಿಸುತ್ತೇನೆ ಅಂತ ಹೇಳಿದ್ದಾರೆ.

UDP 2

ನಾನು ಪೀಠದಲ್ಲಿ ಇದ್ದು ಕಿರಿಯಶ್ರೀಗೆ ಸಹಕರಿಸುತ್ತೇನೆ. ಮುಂದಿನ ಪರ್ಯಾಯ ಯಾರು ಅಂತ ನಿರ್ಧಾರ ಮಾಡಿಲ್ಲ. ಶಿಕ್ಷಣ ಸಂಸ್ಥೆ ಬಗ್ಗೆ ನಾವು ನೋಡಿಕೊಳ್ಳುತ್ತೇವೆ. ಹಣಕಾಸು, ಪೂಜೆ, ಮಂತ್ರಾಕ್ಷತೆ ಕೊಡುವ ಜವಾಬ್ದಾರಿ ಕಿರಿಯಶ್ರೀಯರದ್ದಾಗಿದೆ. ನಮ್ಮ ಶಿಷ್ಯರು ಪೀಠವನ್ನು ಚೆನ್ನಾಗಿ ನಿಭಾಯಿಸಲಿದ್ದಾರೆ. ಮುಂದಿನ ಪರ್ಯಾಯದಲ್ಲಿ ಕಿರಿಯ ಶ್ರೀ ನಮಗೆ ಸಹಕರಿಸಲಿದ್ದಾರೆ. 2014 ಜೂನ್ 19ಕ್ಕೆ ಶಿಷ್ಯ ಸ್ವೀಕಾರವಾಗಿತ್ತು ಅಂತ ತಿಳಿಸಿದ್ರು.

ಅದಮಾರು ಮಠವು ದೇಶದಲ್ಲಿ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿವೆ. ಬೆಂಗಳೂರಿನ ಪ್ರತಿಷ್ಠಿತ ಪೂರ್ಣಪ್ರಜ್ಞಾ ವಿದ್ಯಾ ಸಂಸ್ಥೆಗಳು ಅದಮಾರು ಮಠದ ಆಡಳಿತ ವ್ಯವಸ್ಥೆಗೆ ಒಳಪಟ್ಟಿದೆ. ಸದ್ಯ ಈ ಸಂಸ್ಥೆಗಳ ಜವಾಬ್ದಾರಿಯನ್ನು ಹಿರಿಯ ಯತಿಗಳೇ ನಿಭಾಯಿಸಲಿದ್ದಾರೆ. ಕಾಲಕ್ರಮೇಣ ಈ ಜವಾಬ್ದಾರಿಯನ್ನು ಕೂಡಾ ಕಿರಿಯ ಯತಿಗಳಿಗೆ ಬಿಟ್ಟುಕೊಡಲಿದ್ದಾರೆ. ಅದಮಾರು ಮಠದ ಎಲ್ಲಾ ಧಾರ್ಮಿಕ ಜವಾಬ್ದಾರಿ ಮತ್ತು ಆರ್ಥಿಕ ನಿರ್ವಹಣೆಯನ್ನು ಈಶ ಪ್ರಿಯರೇ ನಿಭಾಯಿಸಬೇಕಾಗಿದೆ. ಭಕ್ತರಿಗೆ ಅನುಗ್ರಹ ಮಂತ್ರಾಕ್ಷತೆ ನೀಡುವುದು, ಪಟ್ಟದ ದೇವರಿಗೆ ಪೂಜೆ ಮಾಡುವುದು ಈಶಪ್ರಿಯರ ಧಾರ್ಮಿಕ ಜವಾಬ್ದಾರಿಯಾಗಲಿದೆ. ಅಷ್ಟಮಠಗಳ ಸಭೆಗಳಿಗೆ ಕಿರಿಯಶ್ರೀಗಳೇ ಹಾಜರಾಗಲಿದ್ದಾರೆ. ಸದ್ಯ ಪಲಿಮಾರು ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದ್ದು, 2020 ರಲ್ಲಿ ಅದಮಾರು ಮಠಕ್ಕೆ ಕೃಷ್ಣ ದೇವರ ಪೂಜಾಧಿಕಾರ ಸಿಗಲಿದೆ. ಪರ್ಯಾಯ ಪೂಜಾಧಿಕಾರವನ್ನು ಯಾರು ನಿಭಾಯಿಸುತ್ತಾರೆ ಅನ್ನೋದು ಸದ್ಯದ ಕುತೂಹಲವಾಗಿದೆ.

vlcsnap 2018 11 11 12h43m18s13 e1541920604190

ಪೂರ್ಣಪ್ರಮಾಣದ ಜವಾಬ್ದಾರಿ ಕೊಡಲು ಗುರುಗಳು ಮುಂದಾಗಿದ್ದರು. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಸದ್ಯ ನನಗೆ ಭಾರವಾಗುತ್ತದೆ. ಅದಮಾರು ಮಠದ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ನಾನು ಬಹಳ ಚಿಕ್ಕವನಾಗಿದ್ದೇನೆ. ಗುರುಗಳು ನನ್ನ ಕೈಹಿಡಿದು ನಡೆಸಲಿದ್ದಾರೆ. ಸಂಸ್ಥಾನದ ಪೂಜೆ, ಸಂಸ್ಕಾರಗಳು- ಆಚರಣೆಯಲ್ಲಿ ಶ್ರದ್ಧೆಯಿಂದ ಭಾಗಿಯಾಗುತ್ತೇನೆ. ಶಿಕ್ಷಣ ಸಂಸ್ಥೆಗೆ ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ. ಆ ಜವಾಬ್ದಾರಿಯನ್ನು ಕೂಡ ನಿರ್ವಹಣೆ ಮಾಡುತ್ತೇನೆ ಅಂತ ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ನುಡಿದ್ರು.

ಒಂದೋ ಇಳಿವಯಸ್ಸು ಅಥವಾ ಕಾಲಾನಂತರ ಅಧಿಕಾರ ಹಸ್ತಾಂತರ ಮಾಡೋದು ಪದ್ಧತಿ. ಆದ್ರೆ ಅದಮಾರು ಮಠದ ವಿಶ್ವಪ್ರಿಯರು ಅವಧಿಗೂ ಮುನ್ನ ಅಧಿಕಾರ ಹಸ್ತಾಂತರ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂದಿನ ವರ್ಷ ನಡೆಯುವ ಪರ್ಯಾಯ ಪೀಠಕ್ಕೆ ಯಾರು ಉತ್ತರಾಧಿಕಾರಿ ಅನ್ನೋದು ಸದ್ಯದ ದೊಡ್ಡ ಕುತೂಹಲವಾಗಿದೆ.

vlcsnap 2018 11 11 12h43m37s199

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

TAGGED:eshapriyaPublic TVudupivishwa priyaಈಶಪ್ರಿಯ ಸ್ವಾಮೀಜಿಉಡುಪಿಪಬ್ಲಿಕ್ ಟಿವಿವಿಶ್ವಪ್ರಿಯ
Share This Article
Facebook Whatsapp Whatsapp Telegram

Cinema news

ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood

You Might Also Like

asia cup india pakistan toss
Cricket

ಭಾರತ, ಪಾಕ್‌ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ?

Public TV
By Public TV
6 hours ago
Bengaluru Car Seize
Bengaluru City

ಬೆಂಗ್ಳೂರಿನಲ್ಲಿ ಮನಸೋ ಇಚ್ಛೆ ಮಾರ್ಪಡಿಸಿದ ಐಷಾರಾಮಿ ಕಾರು ಸೀಜ್‌

Public TV
By Public TV
6 hours ago
USA Cricket Team
Cricket

ನೆದರ್‌ಲ್ಯಾಂಡ್‌ ವಿರುದ್ಧ 93 ರನ್‌ಗಳ ಭರ್ಜರಿ ಜಯ – ವಿಶ್ವಕಪ್‌ನಲ್ಲಿ ಅಮೆರಿಕಗೆ ಮೊದಲ ಗೆಲುವು

Public TV
By Public TV
6 hours ago
01 7
Big Bulletin

ಬಿಗ್‌ ಬುಲೆಟಿನ್‌ 13 February 2026 ಭಾಗ-1

Public TV
By Public TV
6 hours ago
02 8
Big Bulletin

ಬಿಗ್‌ ಬುಲೆಟಿನ್‌ 13 February 2026 ಭಾಗ-2

Public TV
By Public TV
6 hours ago
03 7
Big Bulletin

ಬಿಗ್‌ ಬುಲೆಟಿನ್‌ 13 February 2026 ಭಾಗ-3

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?