ಪ್ರಾಣಿ ರಕ್ಷಣೆಗೆ ನಟಿ ಸಂಯುಕ್ತಾ ಅಂಬುಲೆನ್ಸ್‌ ಹೆಲ್ಪ್‌ಲೈನ್‌ಗೆ ಚಾಲನೆ

Public TV
2 Min Read
samyuktha 4

ಲೈಫು ಇಷ್ಟೇನೆ, ಒಗ್ಗರಣೆ (Oggarane)  ಸಿನಿಮಾ ಖ್ಯಾತಿಯ ಸಂಯುಕ್ತಾ ಹೊರನಾಡ (Samyuktha Horanad) ಇದೀಗ ಸಾಮಾಜಿಕ ಕಾರ್ಯದ ಮೂಲಕ ಸುದ್ದಿಯಲ್ಲಿದ್ದಾರೆ. ಪ್ರಾಣ ಅನಿಮಲ್ ಫೌಂಡೇಶನ್ (Prana Animal Foundation)  ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಚಾಲನೆ ನೀಡುವ ಮೂಲಕ ಸಂಯುಕ್ತಾ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

sam

ಬೆಂಗಳೂರಿನಲ್ಲಿ (Bengalore) ನಡೆದ ಕಾರ್ಯಕ್ರಮದಲ್ಲಿ ನಟಿ ಸಂಯುಕ್ತಾ ಹೊರನಾಡ (Samyuktha Horanad) ಸಾರಥ್ಯದ ಪ್ರಾಣ ಅನಿಮಲ್ ಫೌಂಡೇಶನ್ ನೂತನವಾಗಿ ಆರಂಭಿಸಿರುವ ಪ್ರಾಣಿಗಳ ಆ್ಯಂಬುಲೆನ್ಸ್ ಮತ್ತು ಪ್ರಾಣಿಗಳ ರಕ್ಷಣೆಗೆ ಹೆಲ್ಪ್‌ಲೈನ್ ಸೇವೆಯನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಉದ್ಘಾಟಿಸಿದರು. ಪ್ರಕಾಶ್ ಬೆಳವಾಡಿ, ಸುಧಾ ನಾರಾಯಣ್, ಅನಿರುದ್ಧ, ಸುಧಾ ಬೆಳವಾಡಿ ಅವರು ಹಾಜರಿದ್ದರು.

sam 1

ಪ್ರಾಣಿಗಳ ಕುರಿತು ಅಂತಃಕರಣದಿಂದ ಮಾತನಾಡಿದಾಗ ಕೆಲವರು ಹುಚ್ಚರು ಎಂಬಂತೆ ನೋಡಬಹುದು. ಆದರೆ ಪ್ರಾಣಿ ಪ್ರೀತಿ ನಮ್ಮ ಬದುಕಿನ ಭಾಗವಾಗಿತ್ತು. ಈ ಮಧ್ಯೆ ಹೊಸ ಪೀಳಿಗೆಯ ಹುಡುಗ- ಹುಡುಗಿಯರಲ್ಲಿ ಸಂವೇದನೆ ಬೆಳೆಯುತ್ತಿದೆ. ಪ್ರಾಣಿಗಳ ಮೇಲಿನ ಪ್ರೀತಿ ಜಾಗೃತವಾಗುತ್ತಿದೆ. ಅದು ನನಗೆ ಖುಷಿ ಕೊಟ್ಟಿದೆ ಎಂದು ಈ ವೇಳೆ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಹೇಳಿದರು.

samyuktha 3ಸಂಯುಕ್ತಾ ಹೊರನಾಡು ಸಾರಥ್ಯದ ಪ್ರಾಣ ಅನಿಮಲ್ ಫೌಂಡೇಶನ್ ಬೆಂಗಳೂರಿನಲ್ಲಿ ನೂತನವಾಗಿ ಆರಂಭಿಸಿರುವ ಪ್ರಾಣಿಗಳ ಅಂಬುಲೆನ್ಸ್‌ ಮತ್ತು ಪ್ರಾಣಿಗಳ ರಕ್ಷಣೆಗೆ ವಾರದ 24 ಗಂಟೆ ಹೆಲ್ಪ್‌ಲೈನ್‌ಗೆ ಸೇವೆ ಉದ್ಘಾಟಿಸಿ ಪ್ರಕಾಶ್ ರೈ ಅವರು ಹಳ್ಳಿಗಳಲ್ಲಿ ನಾಯಿಗಳು ಆರೋಗ್ಯವಾಗಿರುತ್ತವೆ. ಆದರೆ ನಗರಗಳಲ್ಲಿ ನಾಗರಿಕತೆಯಿಂದಾಗಿ ಸಮಸ್ಯೆ ಆಗುತ್ತಿದೆ. ಮೊದಲೆಲ್ಲಾ ಪ್ರಾಣಿ, ಪಕ್ಷಿ ಪ್ರಕೃತಿ ನಮ್ಮ ಬದುಕಾಗಿತ್ತು. ವಾಯುಮಾಲಿನ್ಯದಿಂದ ಪ್ರಾಣಿಗಳು ಸಾಯುತ್ತಿವೆ. ಅವುಗಳನ್ನು ನಾವೇ ಇಂಜೆಕ್ಷನ್ ಕೊಟ್ಟು ಕೊಲ್ಲುವ ಪರಿಸ್ಥಿತಿ ಬಂದಿದೆ. ಎಲ್ಲದರ ಜೊತೆ ಬದುಕೋದು ಕಲಿಯಬೇಕಾಗಿದೆ ಎಂದು ಮಾತನಾಡಿದ್ದಾರೆ.

prakash rai raj

ಪ್ರಾಣ ಅನಿಮಲ್ ಫೌಂಡೇಷನ್ ಸ್ಥಾಪಕಿ, ನಟಿ ಸಂಯುಕ್ತಾ ಹೊರನಾಡು, ಅಜ್ಜಿ ಭಾರ್ಗವಿ ನಾರಾಯಣ್ (Bhargavi Narayan) ತೀರಿಕೊಂಡಿದ್ದು ಫೆ.14ರಂದು. ಅಜ್ಜಿಯ ನೆನಪಿನಲ್ಲಿ ಪ್ರೇಮಿಗಳ ದಿನ ಆಚರಿಸಲು ಅವರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಾಣಿಗಳು ವಿನಾಕಾರಣ ಪ್ರೀತಿ ಕೊಡುತ್ತವೆ. ಅವುಗಳ ನೋವನ್ನು ಕಡಿಮೆ ಮಾಡುವುದರ ಕಡೆಗೆ ಪ್ರಾಣ ಫೌಂಡೇಶನ್ ಕೆಲಸ ಮಾಡಲಿದೆ. ಪ್ರಸ್ತುತ ಬೆಂಗಳೂರಿನಲ್ಲಿ ಪ್ರಾಣ ಅಂಬುಲೆನ್ಸ್‌ ಕೆಲಸ ಮಾಡುತ್ತದೆ. ಅದರೊಂದಿಗೆ ಪ್ರಾಣಿಗಳ ನೆರವಿಗೆ ಹೆಲ್ಪ್‌ಲೈನ್‌ ಸ್ಥಾಪಿಸಿದ್ದೇವೆ. ಮುಂದೆ ನಮ್ಮ ಕನಸು ವಿಸ್ತರಿಸುವ ಹಂಬಲ ಇದೆ. ಪ್ರಾಣ ಫೌಂಡೇಶನ್ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದು‌ ಸಂಯುಕ್ತಾ ಹೇಳಿದರು.

samyuktha 5

ವಿಲಾಸ್‌ಕುಮಾರ್ ನಾಯಕ್ ಚಿತ್ರ ಬಿಡಿಸುವ ಮೂಲಕ ಪ್ರಾಣ ಫೌಂಡೇಶನ್ ಉದ್ದೇಶವನ್ನು ಸಾರಿದರು. ಕೇರ್ ಟ್ರಸ್ಟ್‌ ಸ್ಥಾಪಕಿ ಸುಧಾ ನಾರಾಯಣ್, ಅನಿರುದ್ಧ, ಸುಧಾ ಬೆಳವಾಡಿ (Sudha Belavadi) ಮತ್ತಿತರರು ಇದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *