ಬಿಗ್ ಬಾಸ್ ಬೆಡಗಿ (Bigg Boss Kannada) ಸಾನ್ಯ ಅಯ್ಯರ್ (Saanya Iyer) ಅವರು ಅಮರನಾಥ ಯಾತ್ರೆಯಲ್ಲಿದ್ದಾರೆ. ಕಾಶ್ಮೀರದಲ್ಲಿ ವೆಕೇಷನ್ ಮುಗಿಯುತ್ತಿದ್ದಂತೆ ಅಮರನಾಥ (Amarnatha) ಯಾತ್ರೆಗೆ ತೆರಳಿದ್ದಾರೆ. ಈ ಕುರಿತ ಸಾನ್ಯ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:‘ಲಕ್ಷ್ಮಿ ಬಾರಮ್ಮ’ ಸೀರಿಯಲ್ನಿಂದ ಹೊರನಡೆದಿರೋದು ನಿಜಾನಾ? ತನ್ವಿ ರಾವ್ ಸ್ಪಷ್ಟನೆ
ಕಳೆದ ಕೆಲ ದಿನಗಳ ಹಿಂದೆ ಅಮ್ಮನ ಜೊತೆ ಸಾನ್ಯ ಅಯ್ಯರ್ ಅವರು ಟ್ರೆಕ್ಕಿಂಗ್ ಮಾಡಿದ್ದಾರೆ. ಭಾರೀ ಮಳೆ ನಿರಂತರ 5 ಕಿಮೀ ಟ್ರೆಕ್ಕಿಂಗ್. ಹುಲ್ಲುಗಾವಲುಗಳು ಮತ್ತು ತೊರೆಗಳ ಮೂಲಕ ಮೇಲೇರಿದ್ದೇವೆ. ಮೊದಲ ದಿನದ ಅರ್ಧದಲ್ಲೇ ಸಾಕಷ್ಟು ನೋಡಿದ್ದೇವೆ. ಇನ್ನೂ ನೋಡಲು ಬಹಳಷ್ಟಿದೆ ಎಂದು ಅವರು ಬರೆದುಕೊಂಡಿದ್ದರು. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಆಗಿದೆ. ಈಗ ಕಾಶ್ಮೀರದಲ್ಲೂ ಮಳೆ ಆಗುತ್ತಿದೆ. ಹೀಗಾಗಿ ಸಾನ್ಯಾ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಅಭಿಮಾನಿಗಳು ಕೋರಿದ್ದರು.
ಕಾಶ್ಮೀರದ ಪ್ರವಾಸ ಮುಗಿಸಿ, ಇದೀಗ ತಾಯಿ ದೀಪಾ ಅಯ್ಯರ್ ಜೊತೆ ಕಠಿಣವಾದ ಅಮರನಾಥ ಪ್ರವಾಸವನ್ನ ಸಾನ್ಯ ಕೈಗೊಂಡಿದ್ದಾರೆ. ಅಮರನಾಥ ಸ್ಥಳದ ವಿಶೇಷತೆಯನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಾನ್ಯ ವಿಶ್ಲೇಷಣೆ ನೀಡಿದ್ದಾರೆ. ಅಮ್ಮನ ಜೊತೆಗಿನ ಪ್ರವಾಸದ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ.
ಬಾಲನಟಿಯಾಗಿ ಎಂಟ್ರಿ ಕೊಟ್ಟ ಸಾನ್ಯ ಅಯ್ಯರ್ ಅವರು ಬಿಗ್ ಬಾಸ್ ಶೋ ಮೂಲಕ ಗಮನ ಸೆಳೆದರು. ಒಟಿಟಿ ಮತ್ತು ಬಿಗ್ ಬಾಸ್ ಸೀಸನ್ 9ರಲ್ಲಿ ಗಟ್ಟಿ ಸ್ಪರ್ಧಿಯಾಗಿ ಗುರುತಿಸಿಕೊಂಡರು. ದೊಡ್ಮನೆಯಲ್ಲಿ ರೂಪೇಶ್ ಶೆಟ್ಟಿ (Roopesh Shetty) ಜೊತೆಗಿನ ಫ್ರೆಂಡ್ಶಿಪ್ ವಿಷ್ಯವಾಗಿ ಹೈಲೆಟ್ ಆದರು. ಈ ಶೋ ಬಳಿಕ ಬೋಲ್ಡ್ & ಹಾಟ್ ಫೋಟೋಶೂಟ್ ಮೂಲಕ ಮಿಂಚಿದ್ರು ಕೂಡ. ನಟಿಗೆ ಹೇಳಿಕೊಳ್ಳುವಂತಹ ಅವಕಾಶಗಳು ಸಿಗುತ್ತಿಲ್ಲ. ಸೂಕ್ತ ಸಿನಿಮಾ ಚಾನ್ಸ್ಗಾಗಿ ಸಾನ್ಯ ಅಯ್ಯರ್ ಎದುರು ನೋಡ್ತಿದ್ದಾರೆ.