ಬೆಂಗ್ಳೂರಲ್ಲೇ ವಿಷ್ಣು ಸ್ಮಾರಕ್ಕೆ ಪಟ್ಟು – ಡೆಡ್‍ಲೈನ್ ಒಳಗಡೆ ತೀರ್ಮಾನ ಕೈಗೊಳ್ಳದಿದ್ರೆ ಬಂದ್ ಎಚ್ಚರಿಕೆ

Public TV
1 Min Read
vishnu

ಬೆಂಗಳೂರು: ನಟ, ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸಂಬಂಧ ಬೆಂಗಳೂರಿನ ಭಾರತಿ ವಿಷ್ಣುವರ್ಧನ್ ಮನೆಯಲ್ಲಿ ವಿಷ್ಣು ಅಭಿಮಾನಿಗಳು ಸಭೆ ಸೇರಿದ್ದರು. ಈ ವೇಳೆ ನಗರದಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಬೇಕೆಂಬ ಒತ್ತಾಯ ಕೇಳಿ ಬಂತು.

ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಷ್ಣು ಸ್ಮಾರಕವನ್ನು ಅಭಿಮಾನ್ ಸ್ಟುಡಿಯೋದಲ್ಲೇ ನಿರ್ಮಾಣ ಮಾಡಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡಿದರು. ಆದರೆ ಇದಕ್ಕೆ ಒಪ್ಪದೇ ಕೆಲ ಅಭಿಮಾನಿಗಳು, ಮೈಸೂರಿನಲ್ಲಿ ಮಾಡಿ ಎಂದು ಆಗ್ರಹಿಸಿದರು. ಈ ನಡುವೆ ಸಭೆಯಲ್ಲಿ ಮಾತಿನ ಚಕಮಕಿ ನಡೆದು, ಕೆಲವರು ಸಭೆಯ ಅರ್ಧದಲ್ಲೇ ಹೊರನಡೆದರು.

vishnu bng

ಸಭೆ ಬಳಿಕ ಮಾತನಾಡಿದ ನಟ ಅನಿರುದ್ಧ್, ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡುವುದಾದರೆ ಎರಡು ಎಕರೆ ಸ್ಥಳ ನೀಡಬೇಕು. ಇಲ್ಲ ಅಂದರೆ ಮೈಸೂರಿನಲ್ಲಿ ಕೊಡಿ ಎಂದರು. ಈ ವೇಳೆ ಮಾತನಾಡಿದ ಅಭಿಮಾನಿಯೊಬ್ಬರು ಸರ್ಕಾರಕ್ಕೆ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಡಿಸೆಂಬರ್ 25 ರ ತನಕ ಸರ್ಕಾರಕ್ಕೆ ಗಡುವು ನೀಡುತ್ತೇವೆ. ಅಷ್ಟರಲ್ಲಿ ನಿರ್ಧಾರ ಕೈಗೊಳ್ಳದಿದ್ದರೆ, ಡಿ.30 ರಂದು ಬೆಂಗಳೂರು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *