ಚುನಾವಣಾ ನಂತರದ ರಾಜಕೀಯದ ಬಗ್ಗೆ ಪತ್ರಿಕ್ರಿಯಿಸಿದ ಉಪೇಂದ್ರ!

Public TV
0 Min Read
upendra 1 1

ಬೆಂಗಳೂರು: ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ. ಆದರೆ ಪ್ರಜಾಕೀಯದಿಂದ ಇದೆಲ್ಲವೂ ಬದಲಾಗಲಿದೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

ಐ ಲವ್ ಯು ಚಿತ್ರದ ಮುಹೂರ್ತದಲ್ಲಿ ಭಾಗವಹಿಸಿ ವಿಧಾನಸಭಾ ಚುನಾವಣಾ ನಂತರದ ರಾಜಕೀಯ ಬೆಳವಣಿಗೆಯ ಬಗ್ಗೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ.

ಇದು ಯಾರದ್ದು ತಪ್ಪಲ್ಲ, ಯಾವುದೇ ಪಕ್ಷ ಮೆಜಾರಿಟಿ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣ. ಈಗ ದುಡ್ಡಿನ ರಾಜಕಾರಣ ಹೈಡ್ರಾಮಾ ನೋಡುತ್ತಿದ್ದೀರಿ. ಸದ್ಯ ಕುಮಾರಸ್ವಾಮಿ ಆಡಳಿತ ಹೇಗಿರಲಿದೆ ಎನ್ನುವುದನ್ನು ನೋಡಬೇಕು ಎಂದರು.

ನಮ್ಮ ಪ್ರಜಾಕೀಯದ ಕೆಲಸಗಳು ನಿರಂತರವಾಗಿ ನಡೆಯಲಿವೆ. ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧೆ ಮಾಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಉಪೇಂದ್ರ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *