ಕಾವೇರಿ ನೀರು ಹಂಚಿಕೆ (Cauvery Protest) ವಿಚಾರವಾಗಿ ಪದೇ ಪದೇ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ಕನ್ನಡದ ಪರ ಹೋರಾಟಗಾರರು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ಸ್ಯಾಂಡಲ್ವುಡ್ ನಟ-ನಟಿಯರು ಸಾಥ್ ನೀಡಿದ್ದಾರೆ. ಈ ವೇಳೆ, ಡಾ.ರಾಜ್ ಕಾವೇರಿ ಹೋರಾಟಕ್ಕೆ ಈ ಹಿಂದೆ ಸಾಥ್ ನೀಡಿದ್ದರ ಬಗ್ಗೆ ಹಿರಿಯ ನಟ ಶ್ರೀನಾಥ್ (Actor Srinath) ಸ್ಮರಿಸಿದ್ದಾರೆ.ಇದನ್ನೂ ಓದಿ:‘ಕೆಂಡ’ದಂತಹ ಸಿನಿಮಾ ಮಾಡಿದ ಸಹದೇವ್-ರೂಪಾ ರಾವ್
ಈ ಕಾವೇರಿ ಹೋರಾಟ ರೈತರ ಜೀವನಾಡಿಗಾಗಿ ಮಾಡುತ್ತಿರುವ ಹೋರಾಟವಾಗಿದ್ದು, ನಮ್ಮೆಲ್ಲರಿಗೂ ಜೀವನಾಡಿಯಾಗಿದೆ. ಯಾಕೆ ಇಂದಿಗೂ ನಮ್ಮ ಕಾವೇರಿ ಸಮಸ್ಯೆ ಬಗೆಹರಿಯುತ್ತಿಲ್ಲ. ಇದು ದೊಡ್ಡವರು ತೀರ್ಮಾನ ಮಾಡಬೇಕು. ಕಾವೇರಿ ನಮ್ಮ ಹಕ್ಕು, ನಮ್ಮ ಜೀವನಾಡಿಯಿಂದ ನಮ್ಮನ್ನ ಬದುಕಿಸುವ ಜೊತೆ ರೈತರನ್ನು ಬದುಕಿಸಿ ಎಂದು ಶ್ರೀನಾಥ್ ಕೇಳಿಕೊಂಡಿದ್ದಾರೆ.
ನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ಎಂದು ಶ್ರೀನಾಥ್ ಪ್ರಶ್ನಿಸಿದ್ದಾರೆ. ರೈತರು ಇಲ್ಲದೇ ಹೋದರೆ ನಾವಿಲ್ಲ. ಆ ರೈತರು ಉಳಿಸೋದಕ್ಕಾಗಿ ಹೋರಾಟ ಮಾಡಬೇಕು. ಇವತ್ತು ಕಾವೇರಿ ನದಿ ಉತ್ತರ ಕರ್ನಾಟಕದಲ್ಲಿ ಇಲ್ಲದೇ ಹೋದರೂ, ತುಂಬು ಮನಸ್ಸಿನಿಂದ ಈ ಹೋರಾಟಕ್ಕೆ ಅವರೆಲ್ಲರೂ ಸಾಥ್ ನೀಡಿದ್ದಾರೆ.
ಯಾವಾಗೂ ನಮಗೆ ತೊಂದರೆಯಾಗುತ್ತದೆ. ಆದರೆ ನಾವು ಯಾರಿಗೂ ತೊಂದರೆ ಕೊಡಲ್ಲ. ಈ ಸಮಯದಲ್ಲಿ ಡಾ.ರಾಜ್ಕುಮಾರ್ ಅವರನ್ನ ನೆನಪು ಸ್ಮರಿಸುತ್ತೇನೆ. ಅಂದು ಕಾವೇರಿ ಸಮಸ್ಯೆಯಿದ್ದಾಗ ಮುನ್ನುಗ್ಗಿ ಡಾ.ರಾಜ್ ಸಾಥ್ ನೀಡಿದ್ದರು. ಕನ್ನಡಿಗರಿಗೆ ನಮ್ಮ ಹಕ್ಕಿನ ಬಗ್ಗೆ ಅವರು ಪಾಠ ಮಾಡಿದ್ದರು ಎಂದು ಶ್ರೀನಾಥ್ ಸ್ಮರಿಸಿದ್ದಾರೆ.
ಈ ಹೋರಾಟದಲ್ಲಿ ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಪೂಜಾ ಗಾಂಧಿ, ಲೂಸ್ ಮಾದ, ಪ್ರಮೀಳಾ ಜೋಷಾಯ್, ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದಾರೆ.