ಹ್ಯಾಟ್ರಿಕ್ ಹೀರೋ ಶಿವಣ್ಣಗೆ (Shivarajkumar) ಸಿನಿಮಾ ಮಾತ್ರವಲ್ಲ ಕ್ರಿಕೆಟ್ ಅಂದರೆ ಪಂಚಪ್ರಾಣ. ಹೀಗಾಗಿ ನೆಚ್ಚಿನ ತಂಡ ಆರ್ಸಿಬಿ ಬಗ್ಗೆ ನಟ ಗುಣಗಾನ ಮಾಡಿದ್ದಾರೆ. RCB ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಎಂದು ಶಿವಣ್ಣ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ.ಇದನ್ನೂ ಓದಿ:‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಐಪಿಎಲ್ ಪ್ರಾರಂಭವಾಗಿ ಇದೀಗ ಹದಿನೆಂಟು ವರ್ಷ. ಈ 18 ವರ್ಷಗಳಲ್ಲಿ ಆರ್ಸಿಬಿ ಹೇಗೇ ಆಡಲಿ ನಾವು ಬೆಂಬಲಿಸಿದ್ದೇವೆ. ಆರ್ಸಿಬಿ ಕಂಡರೆ ಅದೇನೋ ಜೋಶ್, ಒಂದು ಉತ್ಸಾಹ ಬರುತ್ತದೆ. ಅದೇನೋ ಗೊತ್ತಿಲ್ಲ ಆರ್ಸಿಬಿ ಎಂದರೆ ನಮಗೆ ಜೀವ, ನಮ್ಮ ಪ್ರಾಣ ಎಂದಿದ್ದಾರೆ. ಬೆಂಗಳೂರನ್ನು, ನಮ್ಮ ಭಾಷೆ, ನಮ್ಮ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತದೆ. ಮತ್ತೆ ಆರ್ಸಿಬಿಯವರು ಯಾವಾಗ ಆಡಿದರೂ ಒಂದು ಜೋಶ್ನಲ್ಲಿ ಆಡುತ್ತಾರೆ. ಹೀಗಾಗಿ 18ನೇ ಸೀಸನ್ನಲ್ಲಿ ಆರ್ಸಿಬಿಗೆ ಒಳ್ಳೆಯದಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ನೀವು ಹೋಗಿ ಮ್ಯಾಚ್ ಅನ್ನು ಎಂಜಾಯ್ ಮಾಡಿ ಎಂದು ಅಭಿಮಾನಿಗಳಿಗೆ ಶಿವಣ್ಣ ಕರೆ ನೀಡಿದ್ದಾರೆ. ನಟನಿಗೆ ಆರ್ಸಿಬಿ ಮೇಲಿರುವ ಅಭಿಮಾನ ಕಂಡು ಫ್ಯಾನ್ಸ್ಗೆ ಖುಷಿಯಾಗಿದೆ. ಇದನ್ನೂ ಓದಿ:ರಾಮ್ ಚರಣ್ ಬರ್ತ್ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ
ನಮ್ಮ ಪ್ರೀತಿಯ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ, ಡಾ. ಶಿವರಾಜ್ ಕುಮಾರ್ ಅವರ ಮಾತು ಕೇಳಿ! 🙌
Renowned Actor, Sandalwood King, Dr. Shivarajkumar shares his love towards RCB and wishes us all the best for Season 18. ❤️@NimmaShivanna | #PlayBold #ನಮ್ಮRCB pic.twitter.com/nb7tw69j1I
— Royal Challengers Bengaluru (@RCBTweets) April 10, 2025
ರಾಮ್ ಚರಣ್ ಜೊತೆಗಿನ ಸಿನಿಮಾ, ಘೋಸ್ಟ್ ನಿರ್ದೇಶಕನ ಜೊತೆ ಸಿನಿಮಾ, ತಮಿಳು ಡೈರೆಕ್ಟರ್ ಕಾರ್ತಿಕ್ ಅದ್ವೈತ್ ಜೊತೆಗೊಂದು ಸಿನಿಮಾ ಸೇರಿದಂತೆ ಶಿವಣ್ಣ ಬಳಿ ಹಲವು ಪ್ರಾಜೆಕ್ಟ್ಗಳಿವೆ.