ಪುಟ್ಟಗೌರಿ ಖ್ಯಾತಿಯ ನಟಿ ರಂಜನಿಯಿಂದ ಎಡವಟ್ಟು

Public TV
1 Min Read
RANJINI

ಬೀದರ್: ಬಸವಣ್ಣನ ಕರ್ಮಭೂಮಿಯಲ್ಲಿ ನಡೆದ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಪಾದರಕ್ಷೆ ಹಾಕಿಕೊಂಡು ವೇದಿಕೆ ಏರಿ ಪುಟ್ಟಗೌರಿ ಧಾರವಾಹಿ ಖ್ಯಾತಿಯ ನಾಯಕಿ ರಂಜನಿ ರಾಘವನ್ ಎಡವಟ್ಟು ಮಾಡಿಕೊಂಡಿದ್ದಾರೆ.

ಇಂದು ಬಸವಣ್ಣನ ಕರ್ಮ ಭೂಮಿ ಬಸವಕಲ್ಯಾಣದಲ್ಲಿ 17ನೇ ಕಲ್ಯಾಣ ಪರ್ವ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರದಲ್ಲಿ ಕಲ್ಯಾಣ ಪರ್ವ ಪವಿತ್ರ ವೇದಿಕೆಯಲ್ಲಿ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಸೇರಿದಂತೆ ಶರಣರು ಇದ್ದರು. ಆದರೆ ಈ ವೇದಿಕೆಯ ಮೇಲೆ ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್ ಚಪ್ಪಲಿ ಹಾಕಿಕೊಂಡು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

BDR 3 1

ರಂಜನಿ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಹಿಳಾ ಪೊಲೀಸರು ಮತ್ತು ಶರಣರು ಅವರನ್ನು ವೇದಿಕೆಯ ಮೇಲೆ ಕರೆದುಕೊಂಡು ಬರುತ್ತಿದ್ದರು. ವೇದಿಕೆಯ ಮೆಟ್ಟಿಲು ವರೆಗೂ ಪೊಲೀಸರು ಬಂದಿದ್ದಾರೆ. ಆದರೆ ಅಲ್ಲಿಂದ ಪೊಲೀಸರು ಬಂದಿಲ್ಲ. ಬಳಿಕ ರಂಜನಿ ಅವರು ಪಾದರಕ್ಷೆಯ ಸಮೇತ ವೇದಿಕೆಯ ಮೇಲೆ ಹೋಗಿದ್ದಾರೆ.

BDR copy 1

ಅಷ್ಟೇ ಅಲ್ಲದೇ ರಂಜನಿ ಅವರ ಕೈಯಿಂದ ವೇದಿಕೆಯ ಮೇಲಿದ್ದವರಿಗೆ ಹಾರ ಹಾಕಿಸಲು ಶರಣರು ಮುಂದಾಗಿದ್ದರು. ಈ ಸಂದರ್ಭದಲ್ಲಿ ಅವರು ಹಾರ ಹಾಕಲು ಮುಂದಾಗುತ್ತಿದ್ದರು. ಆಗ ಅವರ ಪಕ್ಕದಲ್ಲಿದ್ದರು ಬಂದು ಪಾದರಕ್ಷೆ ಬಿಡುವಂತೆ ಸೂಚಿಸಿದ್ದಾರೆ. ಬಳಿಕ ರಂಜನಿಯವರು ಪಾದರಕ್ಷೆಯನ್ನು ಬಿಟ್ಟು ವೇದಿಕೆಯ ಮೇಲೆ ಆಸೀನರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *