ಉಡುಪಿ: ಇಲ್ಲಿನ ಪೆರ್ಡೂರು ಅನಂತಪದ್ಮನಾಭನಿಗೆ ನಟ ರಕ್ಷಿತ್ ಶೆಟ್ಟಿ (Rakshit Shetty) ಮುಷ್ಟಿ ಕಾಣಿಕೆ ಅರ್ಪಿಸಿದ್ದಾರೆ.
ಉಡುಪಿಯ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ (Shree Ananthapadmanabha Temple) ಶತಮಾನಗಳ ಇತಿಹಾಸವಿರುವ ಧಾರ್ಮಿಕ ಕೇಂದ್ರ. ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭೇಟಿ ನೀಡಿದರು. ಇದನ್ನೂ ಓದಿ: ರಶ್ಮಿಕಾ ಡಿಮ್ಯಾಂಡ್ ಕಮ್ಮಿಯಾಯ್ತಾ? ಸಂಭಾವನೆನೂ ಕಮ್ಮಿಯಾಯ್ತಾ?
ಸದ್ಯ ಸಿನಿಮಾವೊಂದರ ಕೆಲಸದಲ್ಲಿ ಪೆರ್ಡೂರು ಆಸುಪಾಸು ತಂಗಿರುವ ರಕ್ಷಿತ್, ದೇಗುಲಕ್ಕೆ ತೆರಳಿ ಮುಷ್ಟಿ ಕಾಣಿಕೆ ಸಮರ್ಪಿಸಿದರು. ದೇವಾಲಯದ ಜೀರ್ಣೋದ್ಧಾರದ ವೇಳೆ ಮುಷ್ಟಿ ಕಾಣಿಕೆ ಸಮರ್ಪಿಸಿ ಕೈಜೋಡಿಸುವ ಪರಿಪಾಠ ಇದೆ. ಅದರಂತೆ ರಕ್ಷಿತ್ ನಡೆದುಕೊಂಡಿದ್ದಾರೆ.