ಬೆಂಗಳೂರು: ನಟ ಜಗ್ಗೇಶ್ ಅವರ ಮಗ ಗುರುರಾಜ್ ಅವರಿಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದಾರೆ.
ಭಾನುವಾರ ಸಂಜೆ ಗುರುರಾಜ್ಗೆ ಚಾಕು ಇರಿದಿದ್ದು, ಸದ್ಯ ಗುರು ಅವರನ್ನು ಆರ್.ಟಿ.ನಗರದ ಪೂರ್ಣಿಮಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಗುರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
- Advertisement 2
- Advertisement 3
ಭಾನುವಾರ ಸಂಜೆ ತಮ್ಮ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರುವ ವೇಳೆ ಈ ಘಟನೆ ನಡೆದಿದೆ. ಜಗ್ಗೇಶ್ ಹಾಗೂ ಗುರು ಪತ್ನಿ ಆಸ್ಪತ್ರೆಯಲ್ಲಿದ್ದಾರೆ. ದಾರಿಯಲ್ಲಿ ಹೋಗುವ ಕಿಡಿಗೇಡಿಗಳು ಹಣಕ್ಕಾಗಿ ಗುರು ಮೇಲೆ ದಾಳಿ ನಡೆಸಿ ತೊಡೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಲಾಗುತ್ತಿದೆ.
- Advertisement 4
ಈ ಸಂಬಂಧ ಈಗಾಗಲೇ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಶುಕ್ರವಾರ ತೆರೆಕಂಡ ಶಿವರಾಜ್ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರದಲ್ಲಿ ಗುರುರಾಜ್ ಕಾಣಿಸಿಕೊಂಡಿದ್ದಾರೆ .
With #ದಂದೆಬಾಯ್ #gururajjaggesh.. pic.twitter.com/u0JkK2A4P1
— ನವರಸನಾಯಕ ಜಗ್ಗೇಶ್ (@Jaggesh2) March 28, 2017
https://t.co/ee8l4uH38X#DandheyBoys #Naveen different take on questions @Jaggesh2 #GururajJaggesh #CornerSeat pic.twitter.com/ba50i9hWH0
— Parimala Jaggesh (@27parims) March 30, 2017
https://twitter.com/OnlyShivanna/status/895309003529441283