ಬೆಂಗಳೂರು: ಜಯನಗರದ ಸೌತ್ ಎಂಡ್ ಸರ್ಕಲ್ನಲ್ಲಿ ನಡೆದ ಆಕ್ಸಿಡೆಂಟ್ ವೇಳೆಯಲ್ಲಿ ಸ್ಯಾಂಡಲ್ವುಡ್ನ ಯುವ ನಟರಾದ ದಿಗಂತ್ ಮತ್ತು ಪ್ರಜ್ವಲ್ ಅವರು ಕಾರಿನಲ್ಲಿದ್ದರು. ಘಟನೆ ನಡೆದ ನಂತರ ಎಸ್ಕೇಪ್ ಆಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಟ ದಿಗಂತ್ ವಿಡಿಯೋ ರಿಲೀಸ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಇಬ್ಬರು ನಟರು ಅಪಘಾತದ ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ ಎಂದು ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಶುಕ್ರವಾರ ಮತ್ತೊಬ್ಬ ಯುವ ನಟ ನೆನಪಿರಲಿ ಪ್ರೇಮ್ ಸಹ ಗೆಳೆಯರಿಗೆ ಬೆನ್ನೆಲುಬಾಗಿ ನಿಂತು ಸ್ಪಷ್ಟೀಕರಣ ನೀಡಿದ್ದರು. ಈಗ ಮತ್ತೊಮ್ಮೆ ದೂದ್ ಪೇಡ ದಿಗಂತ್ ಮತ್ತೊಮ್ಮೆ ವಾಟ್ಸಪ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ.
ದಿಗಂತ್ ಹೇಳಿದ್ದೇನು?:
ಅಪಘಾತದ ಪ್ರಕರಣದಲ್ಲಿ ನಾವು ಭಾಗಿಯಾಗಿದ್ದರ ಬಗ್ಗೆ ಯಾವುದೇ ಒಂದು ಸಾಕ್ಷಿಗಳಿಲ್ಲ. ಆದರೂ ನಮ್ಮ ಹೆಸರನ್ನು ಪದೇ ಪದೇ ಎಳೆದು ತರಲಾಗುತ್ತಿದೆ. ಒಂದೇ ಒಂದು ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿಯಾಗಿ ಯಾರ ಬಳಿಯೂ ಇಲ್ಲ. ಈಗ ಇರುವ ಟೆಕ್ನಾಲಜಿಯಿಂದ ಮೊಬೈಲ್ ನೆಟ್ವರ್ಕ್ ಮೂಲಕ ಅಪಘಾತದ ವೇಳೆ ನಾನು ಎಲ್ಲಿದ್ದೆ ಎಂಬುದನ್ನು ತಿಳಿದುಕೊಳ್ಳಹುದು. ಆದರೆ ಈ ಪ್ರಯತ್ನವನ್ನು ಯಾರು ಮಾಡುತ್ತಿಲ್ಲ. ಅಪಘಾತದ ವೇಳೆ ನಾವುಗಳು ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದೇವೆ ಎಂಬುದರ ಬಗ್ಗೆ ನಮ್ಮ ಬಳಿ ಸಾವಿರ ಸಾಕ್ಷಿಗಳಿವೆ. ನಮ್ಮ ಮೇಲಿನ ಆರೋಪ ಮಾಡುತ್ತಿರುವ ಬಗ್ಗೆ ಯಾವುದೇ ಒಂದು ಸಾಕ್ಷಿಯೂ ಸಹ ಇಲ್ಲ.
ನಾನು ಮತ್ತು ಪ್ರಜ್ವಲ್ ಇಬ್ಬರೂ ಘಟನೆ ಬಳಿಕ ಮಾಧ್ಯಮಗಳಿಗೆ ಫೋನ್ ಮಾಡಿ ಸ್ಪಷ್ಟೀಕರಣವನ್ನು ನೀಡಿದ್ದೇವೆ. ಆದರೂ ಕೆಲ ಮಾಧ್ಯಮಗಳು ನಮ್ಮ ಹೆಸರನ್ನು ಅನಾವಶ್ಯಕವಾಗಿ ಬಳಸಿಕೊಳ್ಳಲಾಗುತ್ತಿದೆ. ಹಾಗಾಗಿ ಇದರಿಂದ ಎಲ್ಲರಿಗೂ ದುಃಖವಾಗಿದ್ದು, ವಿಶೇಷವಾಗಿ ನನ್ನ ತಂದೆ-ತಾಯಿಗಳಿಗೂ ಮತ್ತು ನನ್ನ ಹತ್ತಿರದ ಸಂಬಂಧಿಗಳಿಗೂ ಬೇಸರವಾಗಿದೆ. ಎರಡು ದಿನಗಳಿಂದ ಶೂಟಿಂಗ್ ಸರಿಯಾಗಿ ಮಾಡುವುದಕ್ಕೆ ಆಗುತ್ತಿಲ್ಲ. ಸಿನಿಮಾಗೆ ಬಂಡವಾಳ ಹಾಕಿದ ನಿರ್ಮಾಪಕರಿಗೂ ತೊಂದರೆಯಾಗುತ್ತಿದೆ.
ಒಬ್ಬ ವ್ಯಕ್ತಿಗೆ ಬಗ್ಗೆ ಸುಳ್ಳ ಆರೋಪ ಮಾಡಿದರೆ ತುಂಬಾ ನೋವಾಗುತ್ತದೆ. ನಾಳೆ ಸತ್ಯ ಖಂಡಿತ ಹೊರಗೆ ಬರುತ್ತೆ, ಅದು ಬರಲೇ ಬೇಕು. ಸತ್ಯ ಹೊರಗೆ ಬಂದ ಮೇಲೆ ಎಲ್ಲರೂ ಕ್ಷಮೆ ಕೇಳುತ್ತಾರೆ. ಕಳೆದ ಕೆಲವು ದಿನಗಳಿಂದ ಸರಿಯಾಗಿ ಶೂಟಿಂಗ್ ಮಾಡುದಕ್ಕೆ ಆಗುತ್ತಿಲ್ಲ. ನಿದ್ದೆ ಮಾಡುವುದಕ್ಕೂ ಆಗುತ್ತಿಲ್ಲ. ಇದಕೆಲ್ಲ ಯಾರು ಹೊಣೆ ಎಂಬುದಕ್ಕೆ ಉತ್ತರವಿಲ್ಲ. ಹಾಗಾಗಿ ನನಗೆ ಸಾಮಾಜಿಕ ಜಾಲತಾಣ ಮಾತ್ರ ನನ್ನ ಸಹಾಯಕ್ಕೆ ಉಳಿದಿದೆ. ನಿಮ್ಮೆಲ್ಲರ ಸಪೋರ್ಟ್ ನನಗೆ ಬೇಕು, ಆದಷ್ಟೂ ಈ ವಿಡಿಯೋವನ್ನು ಶೇರ್ ಮಾಡಿ. ಈ ಸುಳ್ಳು ಆರೋಪಗಳಿಂದ ಸಾಕಷ್ಟು ದುಃಖವಾಗಿದೆ ಎಂದು ದಿಗಂತ್ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
https://youtu.be/r8LzpepuIio