ಬೆಂಗಳೂರು: ಉದ್ಯಮಿ ಆದಿಕೇಶವಲು ಮೊಮ್ಮಗ ವಿಷ್ಣು ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಟ ದೇವರಾಜ್ ಕಿರಿಯ ಪುತ್ರ ಪ್ರಣಾಮ್ ಅವರಿಗೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ದೇವರಾಜ್, ಮನೆಗೆ ಪೊಲೀಸರಿಂದ ನೋಟಿಸ್ ಬಂದಿದೆ. ಆದರೆ ಅಪಘಾತ ಪ್ರಕರಣದಲ್ಲಿ ನನ್ನ ಮಗ ಭಾಗಿಯಾಗಿಲ್ಲ. ಪ್ರಣಾಮ್ ಮತ್ತು ವಿಷ್ಣು ಇಬ್ಬರು ಗೆಳಯರಾಗಿದ್ದಾರೆ. ಅಪಘಾತದ ನಡೆದ ಸ್ಥಳದಲ್ಲಿ ನೀವು ಇದ್ದಿದ್ದೀರಿ. ಹಾಗಾಗಿ ಹೇಳಿಕೆಯನ್ನು ಪಡೆಯಲು ಪೊಲೀಸರಿಂದ ನೋಟಿಸ್ ಬಂದಿದೆ ಅಂತಾ ಹೇಳಿದ್ದಾರೆ.
ಅಪಘಾತದ ವಿಷಯ ತಿಳಿದ ಮೇಲೆ ಗೆಳೆಯನನ್ನು ನೋಡಲು ಪ್ರಣಾಮ್ ಘಟನಾ ಸ್ಥಳಕ್ಕೆ ಹೋಗಿದ್ದರು. ಅಪಘಾತ ನಡೆಯುವ ಮುಂಚೆ ಪ್ರಣಾಮ್ ಅಲ್ಲಿ ಇರಲಿಲ್ಲ. ಅಪಘಾತದ ಯಾವುದೇ ಮಾಹಿತಿ ಗೊತ್ತಿಲ್ಲ, ಫೋನ್ ಬಂದ ಮೇಲೆಯೇ ಪ್ರಣಾಮ್ ಹೋಗಿದ್ದಾನೆ. ಈಗಾಗಲೇ ಪ್ರಣಾಮ್ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ಪೊಲೀಸರಿಗೆ ನೀಡಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ವಿಷ್ಣು ಹೇಳಿಕೆಯನ್ನು ನೀಡಿದಾಗ ಮಾತ್ರ ಎಲ್ಲ ಸತ್ಯ ಬಹಿರಂಗವಾಗಲಿದೆ ಎಂದು ದೇವರಾಜ್ ಅವರು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೂ ನನಗೂ ಸಂಬಂಧವಿಲ್ಲ-ಅಭಿಮಾನಿಗಳಿಗೆ ವಿಡಿಯೋ ಶೇರ್ ಮಾಡಿದ ದಿಗಂತ್
ಘಟನೆ ನಡೆದ ವೇಳೆ ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಸ್ಯಾಂಡಲ್ವುಡ್ ನಟರು ಇದ್ದರು ಎಂದು ತಿಳಿದು ಬಂದಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಕಾರಿನಲ್ಲಿ ಇದ್ದರೆಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದನ್ನು ಅಲ್ಲಗಳೆದಿದ್ದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಉದ್ಯಮಿಯ ಮೊಮ್ಮಗನ ಪುಂಡಾಟ ಪ್ರಕರಣದಲ್ಲಿ ವಿಷ್ಣುವಿಗಾಗಿ ತೀವ್ರ ಶೋಧದ ಬೆನ್ನಲ್ಲೇ ಪೊಲೀಸರು ಈಗ ಫುಲ್ ಆಕ್ಟೀವ್ ಆಗಿದ್ದಾರೆ.
ಇದನ್ನೂ ಓದಿ: ಅಪಘಾತದ ಬಗ್ಗೆ ನಟರಾದ ದಿಗಂತ್, ಪ್ರಜ್ವಲ್ ಹೇಳಿದ್ದು ಹೀಗೆ
https://www.youtube.com/watch?v=XkSGJRHTDEw