ಮಿಂಚುಳ್ಳಿಗಾಗಿ 3 ಗಂಟೆ ಕಾಲ ಕಾವೇರಿ ನದಿ ತೀರದಲ್ಲಿ ದರ್ಶನ್!

Public TV
1 Min Read
MND DARSHAN copy

ಮಂಡ್ಯ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಆದ್ದರಿಂದ ಆಗಾಗ ಕಾಡಿಗೆ ಹೋಗಿ ಪ್ರಾಣಿ ವೀಕ್ಷಣೆ ಮಾಡಿ ಬರುತ್ತಾರೆ. ಆದರೆ ಪ್ರಾಣಿ ಪ್ರೀತಿಯ ಜೊತೆ ಈಗ ಪಕ್ಷಿಯ ಮೇಲೂ ದರ್ಶನ್ ಪ್ರೀತಿ ತೋರಿಸಿದ್ದಾರೆ.

ಹೌದು.. ನಟ ದರ್ಶನ್ ಇತ್ತೀಚೆಗಷ್ಟೆ ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಸಕ್ಕರೆನಾಡಿಲ್ಲಿ ಸಂಚಾರ ನಡೆಸಿದ್ದಾರೆ. ನಗುವನಹಳ್ಳಿಯಲ್ಲಿ ಮಿಂಚುಳ್ಳಿ ಪಕ್ಷಿಗಳು ಅಧಿಕವಾಗಿದೆ. ಆದ್ದರಿಂದ ದರ್ಶನ್ ಈ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಹೋಗಿದ್ದ ದರ್ಶನ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಹರಿದಾಡುತ್ತಿವೆ.

MND DARSHAN AV 6
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಗುವನಹಳ್ಳಿಯ ಕಾವೇರಿ ನದಿ ದಂಡೆಯಲ್ಲಿ ಪಕ್ಷಿಗಳ ಫೋಟೋ ಶೂಟ್‍ಗೆ ದರ್ಶನ್ ಹೋಗಿದ್ದರು. ಅಲ್ಲಿ ಬಣ್ಣದ ಮಿಂಚುಳ್ಳಿ ಪಕ್ಷಿಗಳ ವೀಕ್ಷಣೆಗಾಗಿ ಸುಮಾರು ಮೂರು ಗಂಟೆಯ ಕಾಲ ಕಾವೇರಿ ನದಿ ತೀರದಲ್ಲಿ ಚಳಿಯಲ್ಲಿ ಕಾದು ಕುಳಿತ್ತಿದ್ದರು. ಬಳಿಕ ಮಿಂಚುಳ್ಳಿ ಪಕ್ಷಿಗಳು ಬಂದ ನಂತರ ಕ್ಯಾಮೆರಾದಲ್ಲಿ ವೀಕ್ಷಣೆ ಮಾಡಿದ್ದಾರೆ.

ನಟ ದರ್ಶನ್ ಸ್ಥಳಕ್ಕೆ ಬಂದಿದ್ದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾವೇರಿ ಪಕ್ಷಿಪ್ರೇಮಿ ವಿನಯ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ. ಇತ್ತ ಯಜಮಾನ ಪಕ್ಷಿ ಪ್ರೀತಿ ಕಂಡು ವೃತ್ತಿಪರ ಪಕ್ಷಿ ಪ್ರೇಮಿಗಳು ದರ್ಶನ್ ಅವರಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *