ಅತ್ಯಾಚಾರಿ ಆರೋಪಿಗಳನ್ನು ಕೊಂದವರಿಗೆ 1 ಲಕ್ಷ ರೂ.ಬಹುಮಾನ: ಅರ್ಚಕರಿಂದ ಘೋಷಣೆ

Public TV
1 Min Read
money

ಲಕ್ನೋ: ಅತ್ಯಾಚಾರಿ ಆರೋಪಿಗಳನ್ನು ಕೊಲೆ ಮಾಡಿದರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಅರ್ಚಕರೊಬ್ಬರು ಘೋಷಿಸಿದ್ದಾರೆ.

ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜನತೆ ಪೊಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ ಅತ್ಯಾಚಾರಿ ಆರೋಪಿಗಳಿಗೆ ತಾವೇ ಶಿಕ್ಷೆ ನೀಡಬೇಕೆಂಬ ಉದ್ದೇಶದಿಂದ ಈ ಇಂತಹ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ. ಇಲ್ಲೊಬ್ಬ ಅರ್ಚಕರು ಇದೇ ರೀತಿ ಆಫರ್ ನೀಡಿದ್ದು, ಯಾವುದೇ ಪ್ರಕರಣದ ಅತ್ಯಾಚಾರಿಯನ್ನು ಕೊಲೆ ಮಾಡಿದವರಿಗೆ ಒಂದು ಲಕ್ಷ ರೂ.ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

rape

ಅಯೋಧ್ಯೆಯ ಹನುಮಾನ್ ಗಿರಿ ದೇವಸ್ಥಾನದ ಅರ್ಚಕರೊಬ್ಬರು ಅತ್ಯಾಚಾರಿಗಳನ್ನು ಕೊಲೆ ಮಾಡಿದವರಿಗೆ 1 ಲಕ್ಷ ರೂ.ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೆ ಒಂದು ವೇಳೆ ಪೊಲೀಸರೇ ಆರೋಪಿಗಳನ್ನು ಕೊಲೆ ಮಾಡಿದಲ್ಲಿ ಪೊಲೀಸರ ಕುಟುಂಬಕ್ಕೆ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

ತಮ್ಮ ಘೋಷಣೆ ಕುರಿತು ಸ್ಪಷ್ಟೀಕರಣ ನೀಡಿರುವ ಅರ್ಚಕರು, ಅತ್ಯಾಚಾರದಂತಹ ಗಂಭೀರ ಪ್ರಕರಣಗಳಲ್ಲಿ ಆರೋಪಿಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಅಲ್ಲದೆ ಇಂತಹ ಕೃತ್ಯಗಳು ಮಕ್ಕಳ ಮೇಲೆಯೇ ನಡೆಯುತ್ತಿದ್ದು ಆಘಾತಕಾರಿ ಸಂಗತಿಯಾಗಿದೆ. ಈ ಕುರಿತು ಸಮಾಜವೇ ಎಚ್ಚೆತ್ತುಕೊಳ್ಳದಿದ್ದರೆ, ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಅರ್ಚಕರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅರ್ಚಕರ ಘೋಷಣೆ ಕುರಿತು ಈ ವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಯೋಧ್ಯೆಯ ಹಿರಿಯ ಪೊಲೀಸ್ ಅಧಿಕಾರಿ ಅಮರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, ಇಂತಹ ಹೇಳಿಕೆ ಕುರಿತು ನಮ್ಮ ಅರಿವಿಗೆ ಬಂದಿಲ್ಲ. ಒಂದು ವೇಳೆ ಸಾರ್ವಜನಿಕವಾಗಿ ಈ ರೀತಿಯಾಗಿ ಹೇಳಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

uttar pradesh police jpg 1575793938

ಈ ಹಿಂದೆ ಶಿವಸೇನಾ ನಾಯಕ ಅರುಣ್ ಪಾಠಕ್ ಇದೇ ರೀತಿ ಹೇಳಿಕೆ ನೀಡಿ, ಹಿಂದೂ ಮಹಾಸಭಾದ ಕಮಲೇಶ್ ತಿವಾರಿಯವರನ್ನು ಕೊಲೆ ಮಾಡಿ ಬಂಧನಕ್ಕೊಳಗಾಗಿರುವ ಆರೋಪಿಗಳನ್ನು ಕೊಲೆ ಮಾಡಿದವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ವಿಡಿಯೋ ಹೇಳಿಕೆಯಲ್ಲಿ ಯಾರಾದರೂ ಕಮಲೇಶ್ ತಿವಾರಿಯವರನ್ನು ಕೊಲೆ ಮಾಡಿದ ಆರೋಪಿಗಳನ್ನು ಕೊಲೆ ಮಾಡಿದರೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *