ಬೆಂಗಳೂರು: ಪರಪ್ಪನ ಅಗ್ರಹಾರದಲ್ಲೇ ಕೊಲೆ ಆರೋಪಿಯೊಬ್ಬ ಟಿಕ್ ಟಾಕ್ ಮಾಡಿದ ಘಟನೆ ನಡೆದಿದೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಫಯಾಜ್ ಆ್ಯಂಡ್ ಟೀಂ ಶಾಹಿದ್ ಎಂಬಾತನನ್ನು ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು
ಜೈಲು ಸೇರಿದ ಮೇಲಾದರು ಆರೋಪಿಗಳು ಬುದ್ಧಿ ಕಲಿಯುತ್ತಾರೆ ಎನ್ನುವ ಪೊಲೀಸರ ನಂಬಿಕೆ ಸುಳ್ಳಾಗಿದೆ. ಜೈಲಿನ ತಮ್ಮ ಸೆಲ್ನಲ್ಲೇ ಕುಳಿತು ಫಯಾಜ್ ಆ್ಯಂಡ್ ಟೀಂ ಟಿಕ್ ಟಾಕ್ ಮಾಡಿ ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡಿದ್ದಾರೆ.
ಶಿವರಾಜ್ ಕುಮಾರ್ ಸಿನಿಮಾವೊಂದರ ಡೈಲಾಗ್ಗೆ ಸೆಲ್ ನಲ್ಲೇ ಕೂತು ಸಿಗರೇಟ್ ಹಿಡಿದುಕೊಂಡು ಗ್ರೂಪ್ ಫೋಟೋಗೆ ಪೋಸು ಕೊಟ್ಟಿದ್ದಾರೆ. ಇದೇ ವಿಡಿಯೋದಲ್ಲಿ ಎರಡು ಚಾಕುಗಳು ಕೂಡ ಇರುವುದು ಕಾಣುತ್ತೆ.
ಅಪರಾಧ ಚಟುವಟಿಕೆ ಮಾಡಿ ಜೈಲಿಗೆ ಹೋಗುವ ಅಪರಾಧಿಗಳಿಗೆ ಈ ರೀತಿಯ ಚಾಕು, ಸಿಗರೇಟ್ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳು ಆರೋಪಿಗಳ ಕೈಗೆ ಹೇಗೆ ಸಿಗುತ್ತವೆ. ಸಂಬಂಧಪಟ್ಟ ಜೈಲಾಧಿಕಾರಿಗಳು ಏನ್ ಮಾಡುತ್ತಿದ್ದಾರೆ ಎನ್ನುವ ಅನುಮಾನ ಎಲ್ಲರಿಗೂ ಶುರುವಾಗಿದೆ.