ಮಡಿಕೇರಿ: ಕಾರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕಿನಲ್ಲಿದ್ದ ತಾಯಿ-ಮಗು ಜೊತೆಗೆ ಯುವತಿಯೊಬ್ಬಳು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣದಲ್ಲಿ ನಡೆದಿದೆ.
ಭಾನುವಾರ ಸಂಜೆ ಕುಶಾಲನಗರದ ಮಹಾರಾಜ ಹೋಟೆಲ್ ಮುಂಭಾಗ ಈ ಅಪಘಾತ ನಡೆದಿದ್ದು, ನಾಲ್ಕು ವರ್ಷದ ಧನ್ವಿತ್ ಗೌಡ, ತಾಯಿ ಅಶ್ವಿನಿ ಹಾಗೂ ಬೈಕ್ ಓಡಿಸುತ್ತಿದ್ದ ಯುವತಿ ಮಹಾಲಕ್ಷ್ಮಿ ಮೂವರು ಪವಾಡ ಸದೃಶದಲ್ಲಿ ಪಾರಾಗಿದ್ದಾರೆ.
- Advertisement 2
- Advertisement 3
ಕುಶಾಲನಗರದ ಮಹಾರಾಜ ಹೋಟೆಲ್ ಮುಂಭಾಗ ಬೈಕಿನಲ್ಲಿ ಮೂವರು ಹೋಗುತ್ತಿದ್ದರು. ಈ ವೇಳೆ ವಿರುದ್ಧ ದಿಕ್ಕಿನಿಂದ ಒಂದು ಕಾರ್ ವೇಗವಾಗಿ ಬಂದಿದೆ. ಬಳಿಕ ಬೈಕ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಮಗು ಮತ್ತು ತಾಯಿ ಕಾರಿನ ಮೇಲೆ ಬಿದ್ದು ಬಳಿಕ ಕೆಳಗಡೆ ಬಿದ್ದಿದ್ದಾರೆ. ಈ ಎಲ್ಲ ದೃಶ್ಯಗಳು ಅಲ್ಲಿನ ಸಿಸಿಟಿಯಲ್ಲಿ ಸೆರೆಯಾಗಿದೆ.
- Advertisement 4
ಅಪಘಾತ ನೋಡಿದ ಎಲ್ಲರ ಎದೆಯನ್ನ ಒಂದು ಕ್ಷಣ ಝಲ್ ಎನಿಸಿದೆ. ಕಾರು ಬೈಕ್ ನಡುವೆ ನಡೆದ ಅಪಘಾತ ನೋಡಿದ ಸಾರ್ವಜನಿಕರು ಅಬ್ಬಾ ಏನಾಯ್ತೋ ಅಂತಾ ಆತಂಕದಲ್ಲೇ ಕೆಳಗಡೆ ಬಿದ್ದಿದ್ದ ಮೂವರ ರಕ್ಷಣೆಗೆ ಧಾವಿಸಿದ್ದಾರೆ. ಸದ್ಯ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಅಪಘಾತವನ್ನ ಲೈವ್ ಆಗಿ ನೋಡಿದ ಪ್ರತ್ಯಕ್ಷದರ್ಶಿಗಳು ಇವರು ಪ್ರಾಣಪಾಯದಿಂದ ಪಾರಾದ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇವಲ ಪ್ರತ್ಯಕ್ಷದರ್ಶಿಗಳು ಮಾತ್ರವಲ್ಲ ಅಪಫಾತಕ್ಕೀಡಾದವರು ಕೂಡ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್ಬುಕ್ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews