ರಾಯಚೂರು: ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ಮಸ್ಕಿ ಪಟ್ಟಣದ ಮುದಬಾಳ ಕ್ರಾಸ್ನಲ್ಲಿ ನಡೆದಿದೆ.
- Advertisement 2
ಆಂಧ್ರ ಮೂಲದ ತ್ರಿಪಾಲ್ (28) ಮೃತ ಚಾಲಕ. ಮತ್ತೋರ್ವ ಚಾಲಕ ಲಿಂಗಸಗೂರು ತಾಲೂಕಿನ ಕೆಂಬಾವಿ ಗ್ರಾಮದ ದಶರಥ ಎಂಬವರು ಒಂದು ಕಾಲನ್ನು ಕಳೆದುಕೊಂಡು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
- Advertisement 3
- Advertisement 4
ಬೆಳಗಿನ ಜಾವ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು ಎರಡೂ ಲಾರಿಗಳು ಸಂಪೂರ್ಣ ಜಖಂಗೊಂಡಿವೆ. ಲಾರಿಗಳು ಅಪ್ಪಚ್ಚಿಯಾಗಿದ್ದರಿಂದ ಪೊಲೀಸರು ಚಾಲಕನ ಮೃತದೇಹವನ್ನ ಜೆಸಿಬಿ ಮೂಲಕ ಹೊರತೆಗೆದಿದ್ದಾರೆ. ಎರಡೂ ಲಾರಿಗಳ ಕ್ಲೀನರ್ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಹಿನ್ನೆಲೆ ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.