ಬೆಂಗ್ಳೂರಿನಲ್ಲಿ ಬೈಕ್ ಗಳ ನಡುವೆ ಡಿಕ್ಕಿ- ಒಬ್ಬರ ಸಾವು, ಇಬ್ಬರಿಗೆ ಗಂಭೀರ ಗಾಯ

Public TV
1 Min Read
KR MARKET ACCIDENT COLLAGE

ಬೆಂಗಳೂರು: ಬೈಕ್‍ ಗಳ ನಡುವೆ ಡಿಕ್ಕಿಯಾಗಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರಿನ ಕೆಆರ್ ಮಾರುಕಟ್ಟೆಯ ಮೇಲ್ಸೆತುವೆ ಮೇಲೆ ನಡೆದಿದೆ.

ಸತೀಶ್ ಪಂಡಿತ್ ಮೃತ ದುರ್ದೈವಿ. ಸ್ವಾತಿ ಪಂಡಿತ್ ಹಾಗೂ ಇನ್ನೊಬ್ಬ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದೆ. ಬೆಳಗ್ಗೆ ಒಂಭತ್ತು ಗಂಟೆಗೆ ಈ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

KR MARKET ACCIDENT 7

ಸ್ವಾತಿ ತಮ್ಮ ತಂದೆ ಸತೀಶ್ ಜೊತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದಾಗ ಹಿಂಬಂದಿಯಿಂದ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಸತೀಶ್ ಪಂಡಿತ್ ಬೈಕ್ ನಿಯಂತ್ರಣ ಕಳೆದುಕೊಂಡು ಕೆಳಗಡೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ತಂದೆ ಸ್ಥಳದಲ್ಲೇ ಸಾವನಪ್ಪಿದ್ದರೆ ಮಗಳು ಸ್ವಾತಿಯ ಪರಿಸ್ಥಿತಿ ಗಂಭೀರವಾಗಿದೆ.

ಹೊಸಕೆರೆಹಳ್ಳಿ ದ್ವಾರಕ ನಗರ ನಿವಾಸಿಯಾದ ಗೋವಿಂದ ದಿವಾಕರ್ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಸಿಟಿ ಮಾರ್ಕೆಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KR MARKET ACCIDENT 5

KR MARKET ACCIDENT 2

KR MARKET ACCIDENT 6

KR MARKET ACCIDENT 4

KR MARKET ACCIDENT 1

Share This Article
Leave a Comment

Leave a Reply

Your email address will not be published. Required fields are marked *