ಮಂಡ್ಯ: ಆದಿಚುಂಚನಗಿರಿಯಲ್ಲಿ ಪ್ರತಿ ಮಾತಿಗೂ ಅಭಿಷೇಕ್ ತನ್ನ ತಂದೆ, ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಭಾವುಕರಾಗಿದ್ದಾರೆ.
ಫೆಬ್ರವರಿ 14 ಒಳ್ಳೆಯ ದಿನ. ಆ ದಿನ ಚಿತ್ರದ ಆಡಿಯೋ ಅಥವಾ ಟೀಸರ್ ಏನಾದರೂ ರಿಲೀಸ್ ಮಾಡಬೇಕು ಎಂದು ಅಪ್ಪನಿಗೆ ಆಸೆ ಇತ್ತು. ಅವರ ನಿಧನದ ನಂತರ 2 ತಿಂಗಳು ಶೂಟಿಂಗ್ಗೆ ನಾನು ಹೋಗಲಿಲ್ಲ. ಇಂದು ರಾತ್ರಿಯಿಂದ ಮತ್ತೆ ಒಂದು ವಾರ ಶೂಟಿಂಗ್ ಇದೆ. ನಾನು ಶೂಟಿಂಗ್ಗಾಗಿ ಮಲೇಶಿಯಾಗೆ ಹೋಗುತ್ತಿದ್ದೇನೆ. ಟೀಸರ್ ರಿಲೀಸ್ ಆಗುವ ದಿನ ನಾನು ಭಾರತದಲ್ಲಿ ಇರುವುದಿಲ್ಲ. ನನ್ನ ಚಿತ್ರ ಬಿಡುಗಡೆ ಯಾವಾಗ ಎಂದು ಎಲ್ಲರು ಕೇಳುತ್ತಿದ್ದಾರೆ. ಹಾಗಾಗಿ ಟೀಸರ್ ರಿಲೀಸ್ ಮಾಡುತ್ತಿದ್ದೇವೆ ಎಂದು ಅಭಿಷೇಕ್ ಹೇಳಿದ್ದಾರೆ.
ಅಂಬರೀಶ್ ನನ್ನ ಸಿನಿಮಾದಲ್ಲಿ ಇರುತ್ತಾರೆ. ಇನ್ನು ಮುಂದೆ ನಾನು ಯಾವ ಸಿನಿಮಾ ಮಾಡಿದರೂ ಅದರಲ್ಲಿ ಅಪ್ಪಾಜಿ ಇರುತ್ತಾರೆ. ಈ ಸಿನಿಮಾವನ್ನು ನಾನು ಅಪ್ಪನಿಗಾಗಿ ಮಾಡಿದೆ. ಅವರೇ ಈ ಸಿನಿಮಾವನ್ನು ಸೆಲೆಕ್ಟ್ ಮಾಡಿದ್ದಾರೆ. ಅವರ ಸಿನಿಮಾದಲ್ಲೇ ಅವರು ಇಷ್ಟು ಇನ್ವಾಲ್ ಆಗಿರಲಿಲ್ಲ. ಅಂಬರೀಶ್ ಅಷ್ಟು ನನ್ನ ಸಿನಿಮಾಗೆ ಇನ್ವಾಲ್ ಆಗಿದ್ದಾರೆ. ಇದು ಅವರಿಂದ ನನಗೆ ಗಿಫ್ಟ್ ಎಂದರು.
ಸುಮಲತಾ ಅವರು ರಾಜಕೀಯದಲ್ಲಿ ಸ್ಪರ್ಧೆ ಮಾಡುವ ವಿಚಾರ ಬಗ್ಗೆ ಮಾತನಾಡಿದ ಅಭಿಷೇಕ್, “ನನ್ನ ತಾಯಿ ಎಲ್ಲೇ ಹೋದರೂ ಸಪೋರ್ಟ್ ಮಾಡ್ತೀನಿ. ಅಭಿಮಾನಿಗಳು ಹೇಳುವ ಮಾತಿಗೆ ನಾವು ಸ್ಪಂದಿಸುತ್ತೇವೆ. ಆದರೆ ಅಂತಿಮವಾಗಿ ಅಮ್ಮ ತೀರ್ಮಾನಿಸುತ್ತಾರೆ” ಎಂದರು. ಇದೇ ವೇಳೆ ಸುಮಲತಾ ಅವರು ಕೂಡ ಮಾತನಾಡಿ ಅಭಿಮಾನಿಗಳು ಪ್ರೀತಿಯಿಂದ ಆಸೆ ಪಡುತ್ತಿದ್ದಾರೆ. ಅಭಿಮಾನಿಗಳ ಆಸೆ ಸೋಲಬಾರದು. ಅವರ ಆಸೆ ಗೆಲ್ಲಬೇಕು ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv