ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಯಂಬಳೆ ವಡ್ಡರಹಟ್ಟಿ ಗ್ರಾಮದಲ್ಲಿ ಮನೆಯವರು ಮದುವೆ ಮಾಡಲು ವಿಳಂಬ ಮಾಡಿದ್ದಕ್ಕೆ ಮನನೊಂದ ಯುವಕನೊಬ್ಬ ಮರವೇರಿ ಕುಳಿತು ವಿಚಿತ್ರವಾಗಿ ಪ್ರತಿಭಟನೆ ನಡೆಸುತ್ತಿದ್ದಾನೆ.
ಬಸವರಾಜ್ ಮರವೇರಿ ಕುಳಿತ ಯುವಕ. ತನಗೆ 32 ವರ್ಷವಾದರೂ ಮನೆಯವರು ಮದುವೆ ಮಾಡಿಲ್ಲವೆಂದು ಮನನೊಂದು ಬಸವರಾಜ್ ಕಳೆದ ಮೂರು ದಿನಗಳಿಂದ 60 ಅಡಿ ಎತ್ತರದ ಬೃಹತ್ ಮರವೇರಿ ಕುಳಿತು ಪ್ರತಿಭಟನೆ ಮಾಡುತ್ತಿದ್ದಾನೆ.
ಮರವೇರಿ ಕುಳಿತ ನಂತರ ಮನೆಯವರು, ಗ್ರಾಮಸ್ಥರು, ಎಷ್ಟೇ ಮನವೊಲಿಸಿದರೂ ಬಸವರಾಜ್ ಮಾತ್ರ ಮರದಿಂದ ಕೆಳಗೆ ಇಳಿದಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಖಾನಾಹೊಸಹಳ್ಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸವರಾಜನ ಮನವೊಲಿಸಿ ಮರದಿಂದ ಕೆಳಗೆ ಇಳಿಸಿದ್ದಾರೆ.