ಬೆಂಗಳೂರು: ತನ್ನ ಕನಸಿನಂತೆ ಪ್ರಮೋಷನ್ ದೊರೆತಿಲ್ಲ ಎನ್ನುವ ಕಾರಣಕ್ಕಾಗಿ ಮಹಿಳೆಯೊಬ್ಬರು ವಿದ್ಯಾರಣ್ಯಪುರ ತಿಂಡ್ಲುವಿನ ವಿಘ್ನೇಶ್ವರ ನಗರದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಆರ್.ಟಿ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾ ದಮಯಂತಿ (26) ಎಂಬವರು ಆತ್ಮಹತ್ಯೆಗೆ ಶರಣಾದ ಮಹಿಳೆ.
ದಿವ್ಯಾ ಅವರು ಕೆಲದಿನಗಳಿಂದ ಫ್ಲೋರ್ ಮ್ಯಾನೇಜರ್ ಹುದ್ದೆಯ ಪ್ರಮೋಷನ್ ನಿರೀಕ್ಷೆಯಲ್ಲಿದ್ದರು. ಆದರೆ ಇವರಿಗೆ ಪ್ರಮೋಷನ್ ನೀಡದೇ ಬೇರೊಬ್ಬ ಮಹಿಳೆಗೆ ಕಂಪನಿ ಪ್ರಮೋಷನ್ ನೀಡಿತ್ತು. ಈ ವಿಚಾರ ತಿಳಿದು ದಿವ್ಯಾ ಖಿನ್ನತೆ ಒಳಗಾಗಿದ್ದರು. ಈಗ ಈ ವಿಚಾರಕ್ಕೆ ಮನನೊಂದು ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ.
ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.