ದೀಪಾವಳಿಗೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ

Public TV
1 Min Read
GDG POLICE THALITHA

ಗದಗ: ದೀಪಾವಳಿ ಹಬ್ಬಕ್ಕೆ ಕಬ್ಬು ಮಾರಾಟ ಮಾಡಲು ಬಂದ ರೈತನಿಗೆ ಪೊಲೀಸರು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.

ಜೂಲಕಟ್ಟಿ ಗ್ರಾಮದ ಶ್ರೀಕಾಂತ ಗುಳದಾಳಿ ಎಂಬ ರೈತ ಗಜೇಂದ್ರಗಡ ಪಟ್ಟಣದ ಡಬಲ್ ರೋಡ್ ಪಕ್ಕ ಕಬ್ಬು ಮಾರಾಟ ಮಾಡುತ್ತಿದ್ದರು. ಸಾಕಷ್ಟು ಜನರು ಸೇರಿರುವುದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಏಕಾಏಕಿ ಬಂದ ಪೊಲೀಸರು ಕಬ್ಬನ್ನು ರಸ್ತೆಗೆ ಎಸೆದು ರೈತನ ತೊಡೆ, ಬೆನ್ನು, ಹಾಗೂ ಕೈಗೆ ಬಾಸುಂಡೆ ಬರುವ ಹಾಗೆ ಹೊಡೆಯುವ ಮೂಲಕ ರೈತನ ಮೇಲೆ ದರ್ಪ ತೋರಿದ್ದಾರೆ.

ನಿಂಗಪ್ಪ ಹಲವಾಗಲಿ ಹಾಗೂ ಸಿ.ಎಸ್ ಹಾದಿಮನಿ ರೈತನಿಗೆ ಹಿಗ್ಗಾಮುಗ್ಗಾ ಹೊಡೆದ ಪೊಲೀಸ್ ಸಿಬ್ಬಂದಿ ಎಂದು ಹೇಳಲಾಗಿದ್ದು, ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

vlcsnap 2017 10 19 15h08m04s244

vlcsnap 2017 10 19 15h07m35s215

vlcsnap 2017 10 19 15h08m56s8

Share This Article
Leave a Comment

Leave a Reply

Your email address will not be published. Required fields are marked *