Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ನಡುಬೀದಿಯಲ್ಲೇ 25 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ: ಸಾವು-ಬದುಕಿನ ನಡ್ವೆ ಹೋರಾಡ್ತಿದ್ದಾಗ ಅರ್ಪಿತ್ ಹೇಳಿದ್ದೇನು..?

Public TV
Last updated: April 7, 2022 4:53 pm
Public TV
Share
2 Min Read
son
SHARE

ಬೆಂಗಳೂರು: ತಮ್ಮ ಮಕ್ಕಳಿಗೆ ಪೋಷಕರು ಬುದ್ಧಿ ಹೇಳೋದು, ಹೊಡೆಯುವುದು ಸಾಮಾನ್ಯವಾಗಿ ನೋಡಿದ್ದೇವೆ. ಆದರೆ ಇಲ್ಲೊಬ್ಬ ತಂದೆ, ತಮ್ಮ ಮಗನ ಮೇಲೆ ಸಿಟ್ಟುಗೊಂಡು ಹಾಡಹಗಲೇ ಆತನಿಗೆ ಬೆಂಕಿ ಹಚ್ಚಿ ಕೊಂದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಆಜಾದ್‌ನಗರದ ನಿವಾಸಿ ಬಾಬು ಯಾನೇ ಸುರೇಂದ್ರ ಕುಮಾರ್(53) ತನ್ನ 25 ವರ್ಷದ ಮಗನನ್ನು ಕೊಂದ ಆರೋಪಿ. ಅರ್ಪಿತ್(25) ತಂದೆಯಿಂದಲೇ ಕೊಲೆಯಾದ ಮಗ. ಏಪ್ರಿಲ್ ೧ರಂದು ತಂದೆ ಮಗನಿಗೆ ಬೆಂಕಿ ಹಚ್ಚಿದ್ದು, ಇದೀಗ ಇಂದು ಮಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಹಿಜಬ್, ಕುಂಕುಮ ಇಟ್ಟಿದ್ದಕ್ಕೆ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕ ಹಲ್ಲೆ

crime

ಸುರೇಂದ್ರ ಕುಮಾರ್ ತಮ್ಮ ಮಗನ ಹೆಸರಿನಲ್ಲೇ ಸಾಲ ಪಡೆದು ವ್ಯವಹಾರ ಮಾಡುತ್ತಿದ್ದ. ಆದರೆ ಮಗ ಸರಿಯಾಗಿ ಲೆಕ್ಕ ನೀಡಲಿಲ್ಲವೆಮದು ರೊಚ್ಚಿಗೆದ್ದು ನಡುಬೀದಿಯಲ್ಲೇ ಬೆಂಕಿ ಹಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ತಂದೆಯನ್ನು ರಕ್ಷಣೆ ಮಾಡುವ ಹೇಳಿಕೆ ನೀಡಿದ್ದನು. ತನ್ನ ತಂದೆಗಾಗಿ ತಾನೇ ಬೆಂಕಿಹಚ್ಚಿ ಕೊಂಡಿದ್ದೇನೆ ಅಂತ ಹೇಳಿದ್ದಾನೆತಿತ್ತ ಘಡನೆಯ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ತಂದೆಯೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಸಾಲ ವಸೂಲಾತಿ ಮಾಡುತ್ತಿದ್ದ ಸುರೇಂದ್ರಕುಮಾರ್ ಫ್ಯಾಬ್ರಿಗೇಷನ್ ಬ್ಯುಸಿನೆಸ್ ಸಹ ಮಾಡುತ್ತಿದ್ದನು. ಅರ್ಪಿತ್ ಸಿ.ಎ (ಚಾರ್ಟರ್ಡ್ ಅಕೌಂಟೆನ್ಸಿ) ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಮಗನ ಹೆಸರಿನಲ್ಲೇ ಒಂದೂವರೆ ಕೋಟಿ ರೂ.ನಷ್ಟು ಸಾಲ ಪಡೆದು ವ್ಯವಹಾರ ನಡೆಸುತ್ತಿದ್ದ. ವ್ಯವಹಾರದ ಜವಾಬ್ದಾರಿಯನ್ನೂ ಮಗನಿಗೆ ನೀಡಿದ್ದ. ಆದರೆ ಲೆಕ್ಕದಲ್ಲಿ ಕೊಂಚ ಏರುಪೇರಾಗಿದ್ದು, ಯುಗಾದಿಹಬ್ಬಕ್ಕೂ ಮುನ್ನಾದಿನವೇ ಅಪ್ಪ-ಮಗನ ನಡುವೆ ಗಲಾಟೆ ನಡೆದಿದೆ. ಸಾಮಗ್ರಿಗಳಿದ್ದ ಗೋಡೌನ್‌ನಲ್ಲಿ ಶುರುವಾಗಿದ್ದ ಗಲಾಟೆ ಬೀದಿಗೆ ಬಂದಿದ್ದು, ಈ ಅನಾಹುತ ಜರುಗಿದೆ. ಇದನ್ನೂ ಓದಿ: 12 ಸಾವಿರಕ್ಕಾಗಿ ನಡುರಸ್ತೆಯಲ್ಲೇ ಪೆಟ್ರೋಲ್ ಸುರಿದು ಮಗನನ್ನೇ ಕೊಂದ ತಂದೆ

ಸುರೇಂದ್ರಕುಮಾರ್ ೧.೫ ಕೋಟಿ ಲೆಕ್ಕ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ಅರ್ಪಿತ್ ‘ಸಾಯಿಸ್ತೀಯಾ ಸಾಯಿಸು ಬಾ ನೋಡೋಣ, ಲೆಕ್ಕ ಕೊಟ್ರು ಸಾಯಿಸ್ತೀಯಾ, ಕೊಡದಿದ್ದರೂ ಸಾಯಿಸ್ತೀಯಾ, ನಾನು ಲೆಕ್ಕ ಕೊಡೋದೇ ಇಲ್ಲ’ ಎಂದು ಪಟ್ಟು ಹಿಡಿದಿದ್ದಾನೆ. ಇದರಿಂದ ಕೋಪಗೊಂಡ ಸುರೇಂದ್ರ, ಗೋಡೌನ್‌ನಲ್ಲೇ ಇದ್ದ ಥಿನ್ನರ್ ಅನ್ನು ಅರ್ಪಿತ್ ಮೇಲೆ ಎರಚಿದ್ದಾನೆ. ಬಳಿಕ ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಅರ್ಪಿತ್ ಕೈ ಕೆಳಗೆ ಹಿಡಿದುಕೊಂಡಿದ್ದರಿಂದ ಬೆಂಕಿ ತಗುಲಿ ಬಟ್ಟೆಗೆ ನಂತರ ದೇಹಕ್ಕೆ ಹೊತ್ತಿಕೊಂಡಿದೆ. ಇದರಿಂದ ಅರ್ಪಿತ್ ‘ನಮ್ಮಪ್ಪ ಬೆಂಕಿ ಹಚ್ಬಿಟ್ಟ’ ಎಂದು ಚೀರಿಕೊಂಡು ಓಡಿಹೋಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಬೆಂಕಿ ಆರಿಸಿ, ಅರ್ಪಿತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

crime

ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲಿಸರ ಮುಂದೆ ಹೇಳಿಕೆ ನೀಡಿದ್ದ ಅರ್ಪಿತ್, ತಂದೆಗಾಗಿ ತಾನೇ ಬೆಂಕಿ ಹಚ್ಚಿಕೊಂಡಿರುವುದಾಗಿ ಹೇಳಿದ್ದರು. ಸಿಸಿಟಿವಿ ಪರಿಶೀಲಿಸಿದಾಗ ತಂದೆಯೇ ಕೃತ್ಯ ಎಸಗಿರುವುದಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ. ಅರ್ಪಿತ್ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಚಾಮರಾಜಪೇಟೆಯ ಪೊಲೀಸರು ತೀವ್ರ ವಿಚಾರಣೆ ನಡೆಸಿ ಸುರೇಂದ್ರನನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಯಾರಿದು ಸುರೇಂದ್ರ?
ಮೂಲತಃ ರಾಜಾಸ್ಥಾನದ ಸುರೇಂದ್ರ, ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ. ಇಲ್ಲಿಯೇ ಫ್ಯಾಬ್ರಿಕೇಶನ್ ಬ್ಯುಸಿನೆಸ್ ಮಾಡಿಕೊಂಡಿದ್ದು, ಮಗನಿಗೂ ಜವಾಬ್ದಾರಿ ವಹಿಸಿದ್ದರು. ವ್ಯವಹಾರದಲ್ಲಿ ನಷ್ಟವಾಗಿ, ಮಗನ ಹೆಸರಿನಲ್ಲೇ ಇತ್ತೀಚೆಗೆ ಒಂದೂವರೆ ಕೋಟಿ ಸಾಲ ಮಾಡಿ ಕೆಲಸ ಮಾಡಿಸುತ್ತಿದ್ದ.

TAGGED:AzadnagarbengalurufirepoliceSurendrakumarvictoria hospitalಆಜಾದ್‌ನಗರಪೊಲೀಸ್ಬೆಂಕಿಬೆಂಗಳೂರುವಿಕ್ಟೋರಿಯಾಆಸ್ಪತ್ರೆಸುರೇಂದ್ರಕುಮಾರ್
Share This Article
Facebook Whatsapp Whatsapp Telegram

You Might Also Like

Shalini Rajneesh Ravi Kumar
Bengaluru City

ಶಾಲಿನಿ ರಜನೀಶ್‌ ವಿರುದ್ಧ ಅಸಭ್ಯ ಹೇಳಿಕೆ – ರವಿಕುಮಾರ್‌ ವಿರುದ್ಧ ಕೇಸ್‌ ದಾಖಲು

Public TV
By Public TV
25 minutes ago
Gill
Cricket

ಟೆಸ್ಟ್‌ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ ಗಿಲ್‌ ಚೊಚ್ಚಲ ದ್ವಿಶತಕ – ಗವಾಸ್ಕರ್‌, ಕೊಹ್ಲಿ ಸೇರಿ ಹಲವು ದಿಗ್ಗಜರ ದಾಖಲೆ ಪುಡಿ ಪುಡಿ

Public TV
By Public TV
26 minutes ago
Stampede
Bengaluru City

Public TV Explainer | ಕಾಲ್ತುಳಿತ ದುರಂತದ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ – ಇನ್ಮುಂದೆ ಸಭೆ, ಸಮಾರಂಭಗಳಿಗೆ ಹೊಸ `SOP’

Public TV
By Public TV
1 hour ago
Kartik Aaryan and Sreeleela step out for dinner
Cinema

ಕಾರ್ತಿಕ್ ಜೊತೆ ಮತ್ತೆ ಸಿಕ್ಕಿಬಿದ್ದ ಶ್ರೀಲೀಲಾ!

Public TV
By Public TV
1 hour ago
Basavaraj Horatti
Latest

ಎಂಎಲ್‌ಸಿ ರವಿಕುಮಾರ್ ಮೇಲೆ ನಿಯಮಾವಳಿಗಳ ಪ್ರಕಾರ ಕ್ರಮ – ಹೊರಟ್ಟಿ

Public TV
By Public TV
1 hour ago
Prahlad Joshi 1
Bengaluru City

ದಾವಣಗೆರೆ ಬಿಜೆಪಿ ಸಂಘರ್ಷಕ್ಕೆ ಮದ್ದು – ರೇಣುಕಾಚಾರ್ಯ ಅಂಡ್ ಟೀಮ್‌ಗೆ ಬುಲಾವ್

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?