Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

Cinema

ಡಿ. 26ರಿಂದ ‘ರಂಗಪಯಣ’ ತಂಡದಿಂದ ನಟ ಶಂಕರ್ ನಾಗ್ ಹೆಸರಿನಲ್ಲಿ ನಾಟಕೋತ್ಸವ

Public TV
Last updated: December 19, 2022 6:10 pm
Public TV
Share
3 Min Read
FotoJet 6 15
SHARE

ರಂಗಕರ್ಮಿ, ನಾಡಿನ ಹೆಸರಾಂತ ಸಿನಿಮಾ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಹೆಸರಿನಲ್ಲಿ ರಂಗಪಯಣ ತಂಡವು ‘ಶಂಕರ್ ನಾಗ್ ನಾಟಕೋತ್ಸವ’ವನ್ನು ಆಯೋಜನೆ ಮಾಡಿದೆ. ಡಿಸೆಂಬರ್ 26 ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ನಾಟಕೋತ್ಸವದಲ್ಲಿ ಹಲವು ತಂಡಗಳು ಭಾಗಿಯಾಗಲಿವೆ.

FotoJet 7 9

ನಾಟಕೋತ್ಸವಕ್ಕೆ ಡಿ.26ರಂದು ಚಾಲನೆ ಸಿಗಲಿದ್ದು, ಅಂದು ಸಂಜೆ 6 ಗಂಟೆಗೆ ಸಾತ್ವಿಕ ರಂಗತಂಡದವರಿಂದ ರಂಗಗೀತೆ ಹೇಳುವ ಮೂಲಕ ಚಾಲನೆ ನೀಡಲಾಗುತ್ತಿದೆ. ಅವತ್ತು ಸಂಜೆ 6:30ಕ್ಕೆ ‘ನೀನಾರಿಗಲ್ಲಾದವಳು ಬಿದಿರು’ ಕಾರ್ಯಕ್ರಮವನ್ನು ಪ್ರಸ್ತುತಿ ಪಡಿಸಲಾಗುತ್ತಿದೆ. ನಂತರ ನರಸಿಂಹ ಮೂರ್ತಿ, ಉಮಾ ವೈ.ಜಿ ಹಾಗೂ ತಾಯಿ ಲೋಕೇಶ್ ಅವರಿಗೆ ಶಂಕರ್ ನಾಗ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಬನಶಂಕರಿ ಅಂಗಡಿ, ಬಲವಂತ್ ರಾವ್ ಪಾಟೀಲ್, ಸಂದೇಶ ಜವಳಿ, ಕೆ.ಎಸ್.ಡಿ.ಎಲ್ ಚಂದ್ರು, ಗಂಗಾಧರ್, ರಮೇಶ್ ಭಟ್ ಮತ್ತು ಮಂಡ್ಯ ರಮೇಶ್ ಅವರು ಅಂದು ವೇದಿಕೆಯ ಮೇಲೆ ಇರಲಿದ್ದಾರೆ. ಸಂಜೆ 7:30ಕ್ಕೆ ಭೂಮಿಕ ತಂಡದ, ಮಾಲತೇಶ್ ಬಡಿಗೇರ್ ನಿರ್ದೇಶನ ಮಾಡಿರುವ ನಿರಂಜನರ ‘ಚಿರಸ್ಮರಣೆ’ ನಾಟಕದ ಪ್ರದರ್ಶನ ಕೂಡ ಇರಲಿದೆ.

FotoJet 8 7

ಡಿಸೆಂಬರ್ 27ರಂದು ಸಂಜೆ 5 ಗಂಟೆಗೆ ಮಕ್ಕಳ ರಂಗಭೂಮಿ ಕುರಿತಾದ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಸುಷ್ಮಾ ಎಸ್.ವಿ ಮತ್ತು ಚಂದ್ರಕೀರ್ತಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮನಸ್ವಿನಿ ಮತ್ತು ದಕ್ಷ ಮಂಜುನಾಥ್ ಗೌಡ ಮಕ್ಕಳಿಂದ ‘ಕಥೆ ಹೇಳುವ ಮಕ್ಕಳು’ ಕಾರ್ಯಕ್ರಮ ಕೂಡ ಇದೆ. ಸಂಜೆ 6:05ಕ್ಕೆ ಕಥನವಾದ ಸಂಕಥನ ಕಾರ್ಯಕ್ರಮ ಕೂಡ ಆಯೋಜನೆಗೊಂಡಿದ್ದು ಡಾ.ಲಕ್ಷ್ಮಿ ಬಿ ಪ್ರಸಾದ್ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅಂದು ಸಂಜೆ 7:15ಕ್ಕೆ ದೃಶ್ಯಕಾವ್ಯ ತಂಡದಿಂದ, ನಂಜುಂಡೇ ಗೌಡ ಸಿ ನಿರ್ದೇಶನ ಮಾಡಿರುವ, ಡಿ.ಕೆ.ಚೌಟ ರಚನೆಯ ‘ಹುಲಿ ಹಿಡಿದ ಕಡಸು’ ನಾಟಕವನ್ನು ಪ್ರದರ್ಶಿಸಲಾಗುತ್ತದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

FotoJet 12 2

ಡಿಸೆಂಬರ್ 28 ರಂದು ಸಂಜೆ 5ಕ್ಕೆ ಮನಜನ ಅರ್ಪಿಸುವ ಪದ್ಯ ಕಾರ್ಯಕ್ರಮವಿದ್ದು, ಎಂ.ಆರ್. ಕಮಲ, ಮೌಲ್ಯ ಸ್ವಾಮಿ, ಚೇತನ ಪ್ರಸಾದ್, ವಸಂತ ಕೃಷ್ಣಮೂರ್ತಿ, ಅಮೃತಾ ಹೆಗಡೆ, ಮುರಳಿ ಮೋಹನ ಕಾಟಿ, ಅರಕಲಗೂಡು ಜಯರಾಮ್, ಗಿರೀಶ್ ಹಂದಲಗೆರೆ, ಅಶ್ವಿನಿ ಕೋಟ್ಯಾನ್, ಸಂಯುಕ್ತ ಪುಲಿಗಲ್ ಇವರುಗಳು ಕವಿತೆಯನ್ನು ವಾಚಿಸಲಿದ್ದಾರೆ. ಸಂಜೆ 6ಕ್ಕೆ ಜ್ಯೋತಿ ಹಿಟ್ನಾಳ್ ಅವರ ಮುಟ್ಟು ಮತ್ತು ಆರೋಗ್ಯ ಪುಸ್ತಕ ಬಿಡುಗಡೆಗೊಳ್ಳಲಿದೆ. ವಸುಂಧರಾ ಭೂಪತಿ ಅವರು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಮೂಗ್ ಸುರೇಶ್ ಅವರಿಂದ ನಾಗರಕಟ್ಟೆ ಹೆಸರಿನ ಕಾರ್ಯಕ್ರಮ ಕೂಡ ನಡೆಯಲಿದೆ. ಸಂಜೆ 7 ಗಂಟೆಗೆ ರೂಪಾಂತರ ತಂಡದ, ಆರ್.ನಾಗೇಶ್ ರಂಗರೂಪ ಮಾಡಿರುವ, ಕೆ.ಎಸ್.ಡಿ.ಎಲ್ ಚಂದ್ರು ನಿರ್ದೇಶನದ, ಕೆ.ಶಿವರಾಮ್ ಕಾರಂತರ ‘ಚೋಮನ ದುಡಿ’ ನಾಟಕ ಪ್ರದರ್ಶನವಾಗಲಿದೆ.

FotoJet 10 2

ಡಿಸೆಂಬರ್ 29 ರಂದು ಸಂಜೆ 5ಕ್ಕೆ ಕಾರ್ಮಿಕ ರಂಗಭೂಮಿ ಕುರಿತಾದ ಕಾರ್ಯಕ್ರಮವಿದ್ದು, ರಾಮಸ್ವಾಮಿ ಆರ್ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಮೈಕೋ ಸೋಮಶೇಖರ್, ಮೈಕೋ ಶಿವಶಂಕರ್, ಮೈಕೋ ಮುರುಡಯ್ಯ ಅವರಿಂದ ರಾಷ್ಟಕವಿ ಕುವೆಂಪು ಅವರ ರಚನೆಯ ಜಲಗಾರ ನಾಟಕದ ತುಣುಕು ಪ್ರದರ್ಶನ ಕೂಡ ಇದೆ. ಸಂಜೆ 6:05ಕ್ಕೆ ಜಗದ ಕವಿ ಕುವೆಂಪು ಅವರ ಜನ್ಮದಿನಾಚರಣೆ ಪ್ರಯುಕ್ತ ಕುವೆಂಪು ಅವರ ಮೋಡಣ್ಣನ ತಮ್ಮ, ನನ್ನ ಗೋಪಾ ನಾಟಕಗಳನ್ನು ಓದಲಾಗುತ್ತದೆ. ಓಹಿಲೇಶ್ ಮತ್ತು ನಯನ ಸೂಡ್ ಈ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಶಿವ ಪ್ರಸಾದ್ ಪಟ್ಟಣಗೆರೆ ಮತ್ತು ಪುನೀತ್ ತಥಾಗತ ಅವರಿಂದ ಕುವೆಂಪು ಅವರ ಆಯ್ದ ಪದ್ಯಗಳನ್ನು ಓದಲಾಗುತ್ತದೆ. ನಂತರ ಮುತ್ತಮ್ಮ  ಅವರು ಕುವೆಂಪು ಅವರ ಆಯ್ದ ಹಾಡುಗಳಿಗೆ ನೃತ್ಯ ಮಾಡಲಿದ್ದಾರೆ. ಸಂಜೆ 7ಕ್ಕೆ ರಂಗಪಯಣ ತಂಡದ, ರಾಜ್ ಗುರು ನಿರ್ದೇಶನ ಮಾಡಿರುವ ‘ಪೂಲನ್ ದೇವಿ’ ನಾಟಕದ ಪ್ರದರ್ಶನವಿದೆ.

FotoJet 9 5

ಡಿಸೆಂಬರ್ 30ರಂದು ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6ಕ್ಕೆ ರಂಗ ಗೀತೆಯೊಂದಿಗೆ ಕಾರ್ಯಕ್ರಮ ಶುರುವಾಗಲಿದೆ. ಬಿ.ಸುರೇಶ್, ಮೈಮ್ ರಮೇಶ್, ಪಾಪಣ್ಣ,  ಅರೆಹೊಳೆ ಸದಾಶಿವ, ಮಂಜುನಾಥ್, ಸುಧಾಕರ್, ನರೇಂದ್ರ ಬಾಬು, ಬಿ.ಟಿ.ಮಂಜುನಾಥ್ ಕೋಮಣ್ಣ, ವೀರಕಪುತ್ರ ಶ್ರೀನಿವಾಸ್ ಸೇರಿದಂತೆ ಹಲವರು ಗಣ್ಯರು ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅಂದು ಸಂಜೆ 7ಕ್ಕೆ ಅರೆಹೊಳೆ ಪ್ರತಿಷ್ಠಾನ ಮತ್ತು ಕಲಾಬಿ ಥಿಯೇಟರ್ ಪ್ರಸ್ತುತಿ ಪಡಿಸುವ, ಪ್ರಶಾಂತ್ ಉದ್ಯಾವರ ನಿರ್ದೇಶನದ ‘ದ್ವಯ’ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

TAGGED:BangaloreKuvempuNatakotsavaRajagurushankar nagಕುವೆಂಪುನಾಟಕೋತ್ಸವಬೆಂಗಳೂರುರಾಜಗುರುಶಂಕರ್ ನಾಗ್
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

Dr. K.Sudhakar Chandan Kumar
Bengaluru Rural

ಕೆನಡಾದಿಂದ ಚಂದನ್ ಕುಮಾರ್ ಪಾರ್ಥಿವ ಶರೀರ ಫೆ.16 ಕ್ಕೆ ತಾಯ್ನಾಡಿಗೆ: ಸಂಸದ ಡಾ.ಕೆ.ಸುಧಾಕರ್

Public TV
By Public TV
26 minutes ago
Ashok Pattan
Karnataka

ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ: ಅಶೋಕ್‌ ಪಟ್ಟಣ್

Public TV
By Public TV
59 minutes ago
siddaramaiah sunil kumar
Bengaluru City

ಸಿಎಂ ವಿರುದ್ಧ ಶಾಸಕ ಸುನಿಲ್ ಕುಮಾರ್ ಲೆಟರ್ ಬಾಂಬ್ – ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ಶಿಫಾರಸ್ಸು ಮಾಡಿದ್ರಾ!?

Public TV
By Public TV
1 hour ago
Accident 4
Bengaluru City

ಹೊಸಕೋಟೆ ಡೆಡ್ಲಿ ಆಕ್ಸಿಡೆಂಟ್ – ಬದುಕಿ ಬಾಳಬೇಕಿದ್ದ, ಮನೆಗೆ ಆಧಾರ ಸ್ತಂಭವಾಗಿದ್ದ ಮಕ್ಕಳು ಬೀದಿ ಹೆಣ

Public TV
By Public TV
1 hour ago
Lucknow Accident
Crime

ಫೇರ್‌ವೆಲ್‌ ಪಾರ್ಟಿ ಮುಗಿಸಿ ವಾಪಸ್‌ ಆಗ್ತಿದ್ದ ವಿದ್ಯಾರ್ಥಿ ಕಾರು ಡಿಕ್ಕಿ; 6 ವರ್ಷದ ಬಾಲಕ ಸಾವು

Public TV
By Public TV
1 hour ago
DK Shivakumar 1
Bengaluru City

ಅಕ್ಕಪಕ್ಕದಲ್ಲಿ ಕುಳಿತರೂ ಮಾತನಾಡದ ಸಿಎಂ-ಡಿಸಿಎಂ; ʻಕುರ್ಚಿ ಕದನʼ ಮುನಿಸು ಜೋರಾಯ್ತಾ?

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?