Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಎಷ್ಟು ಮಳೆ ಬಿದ್ರೆ ಮೇಘಸ್ಫೋಟ ಎಂದು ಕರೆಯಲಾಗುತ್ತೆ?

Public TV
Last updated: July 21, 2023 3:53 pm
Public TV
Share
3 Min Read
2 1
SHARE

ಹಿಮಾಚಲಪ್ರದೇಶದ (Himachalpradesh) ಕುಲುವಿನಲ್ಲಿ ಸೋಮವಾರ ಮೇಘಸ್ಫೋಟ (CloudBurst) ಸಂಭವಿಸಿ ಭಾರೀ ಹಾನಿಯಾಗಿದೆ. ಒಮ್ಮಿಂದೊಮ್ಮೆಲೆ ಬಂದ ರಭಸವಾದ ಭಾರೀ ನೀರಿನಿಂದ ಜನ ಮನೆ-ಮಠ ಕಳೆದಕೊಂಡು ದಿಕ್ಕಾಪಾಲಾಗಿದ್ದಾರೆ. ಇದರ ವೀಡಿಯೋಗಳನ್ನು ನೋಡಿದರೆ ನಿಜಕ್ಕೂ ಮೈಜುಂ ಅನ್ನುತ್ತದೆ. ಕಲ್ಲು, ಮಣ್ಣು ಮಿಶ್ರಿತ ನೀರು ಅತ್ಯಂತ ರಭಸದಿಂದ ಬರುವಾಗ ಎದುರಿಗಿದ್ದ ಗಿಡ-ಮರಗಳು-ಮನೆಗಳು ಹೇಳಹೆಸರಿಲ್ಲದಂತೆ ಕೊಚ್ಚಿ ಹೋಗುವುದನ್ನು ನೋಡಿದರೆ ಅಯ್ಯೋ ಎಂದೆನಿಸುತ್ತದೆ. ಹಾಗಾದರೆ ಮೇಘಸ್ಫೋಟ ಅಂದರೆ ಏನು? ಯಾವ ಪ್ರದೇಶದಲ್ಲಿ ಇದು ಬೀಳುತ್ತದೆ? ಎಷ್ಟು ಮಿ.ಮಿ ಮಳೆ ಬಿದ್ರೆ ಮೇಘಸ್ಫೋಟ ಎಂದು ಕರೆಯಲಾಗುತ್ತದೆ ಎಂಬುದರ ಡೀಟೈಲ್ ವರದಿ ಇಲ್ಲಿದೆ.

ಮೇಘಸ್ಫೋಟ ಅಂದರೆ ಏನು?: 
ಅತಿ ದೊಡ್ಡ ಗಾತ್ರದ ನೀರಿನ ಮೋಡಗಳು ವಾತಾವರಣದಲ್ಲಿ ಶೇಖರಣೆಯಾಗಿ ಅದು ಒಮ್ಮಿಂದೊಮ್ಮೆಲೆ ಭೂಮಿಯ ಮೇಲೆ ಸುರಿಯುತ್ತದೆ. ಒಂದು ಸೀಮಿತ ಪ್ರದೇಶದಲ್ಲಿ ಸ್ವಲ್ಪ ಕಾಲ ಬೀಳುತ್ತದೆ. ಇದರ ಜೊತೆ ಭಯಂಕರ ಗುಡುಗು, ಸಿಡಿಲು ಇರುವುದಲ್ಲದೆ ಆಲಿಕಲ್ಲು ಸಹ ಬೀಳುವುದು. ಇಂತಹ ಧಿಡೀರ್ ಮಳೆಯಿಂದ ಪ್ರವಾಹ ಹಾಗೂ ಅನೇಕ ರೀತಿಯ ನಾಶ ಉಂಟಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಮಳೆಯಾಗುವುದೇ ಕೆಲವೇ ನಿಮಿಷಗಳು ಆದರೂ ಪರಿಣಾಮ ಮಾತ್ರ ರಣಭೀಕರವಾಗಿರುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ ಅನಿರೀಕ್ಷಿತವಾಗಿ ಬರುವ ಹಾಗೂ ಸ್ವಲ್ಪವೇ ಕಾಲ ಇರುವ, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೀಳುವ ಮಳೆಗೆ ಮೇಘಸ್ಫೋಟ ಎಂದು ಕರೆಯಲಾಗುತ್ತಿದೆ.

1 1

ಮಳೆ, ಮೇಘಸ್ಫೋಟ ನಡುವಿನ ವ್ಯತ್ಯಾಸವೇನು?:
ಮೇಘಸ್ಫೋಟ ಹಾಗೂ ಸಾಮಾನ್ಯವಾಗಿ ಬೀಳುವ ಮಳೆಗೂ (Rain) ವ್ಯತ್ಯಾಸವಿದೆ. ಮಳೆಯು ಮೋಡದಿಂದ ಬೀಳುವ ಘನೀಕೃತ ನೀರು ಆಗಿದೆ. ಆದರೆ ಒಂದು ಸೀಮಿತ ಪ್ರದೇಶದಲ್ಲಿ ಸ್ವಲ್ಪ ಕಾಲ ಬಿದ್ದರೂ ಭಾರೀ ಹಾನಿ ಉಂಟುಮಾಡುವುದು ಮೇಘಸ್ಫೋಟ. ಗಂಟೆಗೆ 100 ಮಿ.ಮೀ ಗಿಂತ ಹೆಚ್ಚಿನ ಮಳೆಯನ್ನು ಮೇಘಸ್ಫೋಟ ಎಂದು ವರ್ಗೀಕರಿಸಲಾಗಿದೆ.

ಈ ಮಳೆ ಸುರಿಸುವ ಮೋಡದ ಎತ್ತರ ಭೂಮಿಯಿಂದ 14 ಕಿ.ಲೋ ಮೀಟರ್‍ವರೆಗೂ ಇರುತ್ತದೆ. ಕೆಲವೊಮ್ಮೆ ಕೆಲವೇ ನಿಮಿಷಗಳಲ್ಲಿ 20 ಮಿ.ಮೀ ಗಿಂತ ಹೆಚ್ಚಿನ ಮಳೆ ಸುರಿಯುತ್ತದೆ. ಇದರಿಂದಾಗಿ ನಿಮಿಷಗಳಲ್ಲೇ ಭಾರೀ ಪ್ರವಾಹ ಉಂಟಾಗುತ್ತದೆ. ಭಾರತದಲ್ಲಿ ಇಂತಹ ಮಳೆಗಳು ಸಾಮಾನ್ಯವಾಗಿ ಬೆಟ್ಟದ ಮೇಲೆ ಅಥವಾ ಪರ್ವತದ ಮೇಲೆ ಬೀಳುತ್ತವೆ.

ಪರ್ವತಗಳಲ್ಲೇ ಯಾಕೆ ಉಂಟಾಗುತ್ತದೆ?:
ಗುಡ್ಡಗಾಡು ಪ್ರದೇಶಗಳು ಮೇಘ ಸ್ಫೋಟಕ್ಕೆ ಜಾಸ್ತಿ ಒಳಗಾಗುತ್ತದೆ. ಯಾಕೆಂದರೆ ಕಡಿದಾದ ಬೆಟ್ಟಗಳಂತಹ ಸ್ಥಳದ ಪರಿಸ್ಥಿತಿಗಳು ಈ ಮೋಡಗಳ ರಚನೆಗೆ ಅನುಕೂಲಕರವಾಗಿವೆ. ಕಡಿದಾದ ಇಳಿಜಾರುಗಳಲ್ಲಿ ನೀರು ಹರಿಯುವುದರಿಂದ ಅದು ಹೆಚ್ಚಿನ ವೇಗದಲ್ಲಿದ್ದು, ಎದುರು ಸಿಕ್ಕ ಬಂಡೆಗಳು ಮತ್ತು ಬೇರುಸಹಿತ ಮರಗಳು ಹೀಗೆ ದಾರಿಯಲ್ಲಿ ಬರುವ ಯಾವುದೇ ವಸ್ತುಗಳಾದರೂ ಸರಿ ಕೊಚ್ಚಿಕೊಂಡು ಹೋಗುತ್ತದೆ.

ಪರಿಣಾಮಗಳು ಏನು?:
ಮೇಘಸ್ಫೋಟಗಳು ಆಗವುದು ತುಂಬಾ ವಿರಳ. ಆದರೆ ಇದು ಸಂಭವಿಸಿದರೆ ಮಾತ್ರ ಭಾರೀ ಹಾನಿ ಕಟ್ಟಿಟ್ಟ ಬುತ್ತಿ. ಹಠಾತ್ ಪ್ರವಾಹ, ಭೂಕುಸಿತ, ಮಣ್ಣಿನ ಹರಿವು ಮತ್ತು ಭೂಮಿ ಇಳುವರಿ ಮುಂತಾದ ಪ್ರದೇಶದಲ್ಲಿ ಮೇಘಸ್ಫೋಟದ ಪರಿಣಾಮಗಳಾಗಿವೆ. ಪ್ರವಾಹದ ಪರಿಣಾಮವಾಗಿ ಮನೆಗಳಲ್ಲಿ ನೀರು ತುಂಬಿ, ಹಲವಾರು ಸಾವುಗಳಿಗೆ ಕಾರಣವಾಗುತ್ತದೆ. ತಾತ್ಕಾಲಿಕ ನಷ್ಟ ಮತ್ತು ಜಲಾಶಯದ ಶೇಖರಣೆಯಿಂದಾಗಿ ನದಿಗಳ ಮಾರ್ಗವನ್ನು ನಿರ್ಬಂಧಿಸುವುದು, ಕುಸಿತಕ್ಕೆ ಕಾರಣವಾಗುತ್ತದೆ. ಇವುಗಳು ಭಾರೀ ಮಳೆಯ ಪರಿಣಾಮವಾಗಿದೆ. ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ, ಇದು ಸಾವು ಮತ್ತು ವಿನಾಶಕ್ಕೆ ಕಾರಣವಾಗುತ್ತದೆ.

ಅತಿ ದೊಡ್ಡ ಮೇಘಸ್ಫೋಟ ಸಂಭವಿಸಿದ್ದು ಎಲ್ಲಿ? ಯಾವಾಗ?:
2005 ರ ಜುಲೈ 26 ರಂದು ಮುಂಬೈನಲ್ಲಿ ಮೇಘಸ್ಫೋಟ ಸಂಭವಿಸಿತ್ತು. ಈ ವೇಳೆ ಸರಿಸುಮಾರು 950 ಮಿಲಿಮೀಟರ್ (37 ಇಂಚು) ಮಳೆಯನ್ನು ಉಂಟುಮಾಡಿತು. ಅಂದು 8 ರಿಂದ 10 ಗಂಟೆಗಳ ಕಾಲ ಮಳೆ ಸುರಿದು, ಭಾರತದ ಅತಿದೊಡ್ಡ ನಗರ ಮತ್ತು ಆರ್ಥಿಕ ರಾಜಧಾನಿಯಾದ ಮುಂಬೈ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿತು. ಇದರಲ್ಲಿ ಸುಮಾರು 1,000 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಮುಂಬೈನ ಹಲವೆಡೆ ಚರಂಡಿಗಳು ಮುಚ್ಚಿಹೋಗಿದ್ದರಿಂದ ಅರ್ಧದಷ್ಟು ಪ್ರವಾಹ ಉಂಟಾಗಿತ್ತು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]


follow icon

TAGGED:Cloudburstrainಮಳೆಮೇಘಸ್ಫೋಟ
Share This Article
Facebook Whatsapp Whatsapp Telegram

Cinema Updates

Shankar Mahadevan
IPL 2025 ಸಮಾರೋಪ ಸಮಾರಂಭದಲ್ಲಿ ʻಆಪರೇಷನ್ ಸಿಂಧೂರʼ ವಿಜಯೋತ್ಸವ – ಏನೆಲ್ಲಾ ವಿಶೇಷತೆ ಇರಲಿದೆ?
4 hours ago
anant nag
ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ
50 minutes ago
shine shetty
ಯಶಸ್ಸಿಗಾಗಿ ‘ವಿಲನ್’ ಆದ ‘ಬಿಗ್ ಬಾಸ್’ ಶೈನ್ ಶೆಟ್ಟಿ
6 hours ago
Kamal Haasan
ತಮಿಳಿನಿಂದ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರ ಆಕ್ರೋಶ
7 hours ago

You Might Also Like

Jitesh Sharma
Cricket

IPL 2025 | ಜಿತೇಶ್‌ ನಾಯಕನ ಆಟಕ್ಕೆ ಲಕ್ನೋ ಧೂಳಿಪಟ – ಕ್ವಾಲಿಫೈಯರ್-1ಗೆ ಲಗ್ಗೆಯಿಟ್ಟ ಆರ್‌ಸಿಬಿ

Public TV
By Public TV
3 minutes ago
mangaluru murder
Crime

ಮಂಗಳೂರು| ತಲ್ವಾರ್‌ನಿಂದ ದಾಳಿ ನಡೆಸಿ ಯುವಕನ ಬರ್ಬರ ಹತ್ಯೆ

Public TV
By Public TV
20 minutes ago
Amandeep Kaur
Crime

ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

Public TV
By Public TV
36 minutes ago
virat kohli 6
Cricket

9,000 ರನ್‌; ಆರ್‌ಸಿಬಿ ಪರ ಐತಿಹಾಸಿಕ ದಾಖಲೆ ಬರೆದ ಕಿಂಗ್ ಕೊಹ್ಲಿ

Public TV
By Public TV
56 minutes ago
Sharan Pumpwell
Crime

ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಬಂಧನ – ಜಾಮೀನು

Public TV
By Public TV
1 hour ago
income tax returns
Latest

ತೆರಿಗೆದಾರರೇ ಗಮನಿಸಿ: IT Returns ಸಲ್ಲಿಕೆಗೆ ಜುಲೈ 31 ಅಲ್ಲ, ಸೆ.15 ಕೊನೆ ದಿ‌ನ..!

Public TV
By Public TV
1 hour ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?