ಬೆಂಗಳೂರು: ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಸೊಸೆ ತನ್ನ ಅತ್ತೆಯನ್ನೇ ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಸುಗುಣ ತನ್ನ ಅತ್ತೆ ರಾಣಿ (76) ಅವರನ್ನ ಹೊಡೆದು ಕೊಲೆ (Murder) ಮಾಡಿದ್ದು, ಶ್ರೀರಾಮ್ಪುರ ಠಾಣಾ ಪೊಲೀಸರು (Police) ಆರೋಪಿಯನ್ನ ಬಂಧಿಸಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 15 ರಂದು ಜೀ ಕನ್ನಡ ವಾಹಿನಿಯಲ್ಲಿ ‘ವಿಕ್ರಾಂತ್ ರೋಣ’
ರಾಣಿ ಅವರು ಎಲ್ಲ ಆಸ್ತಿಯನ್ನೂ ತನ್ನ ಮೂವರು ಗಂಡು ಮಕ್ಕಳಿಗೆ ಹಂಚಿದ್ದರು. ಒಂದು ಮನೆಯಲ್ಲಿ ತಾನು ವಾಸಿಸುತ್ತಿದ್ದರು. ಆ ಮನೆಯನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ 2ನೇ ಪುತ್ರನ ಪತ್ನಿ ಸುಗುಣ ಪೀಡಿಸುತ್ತಲೇ ಇದ್ದಳು. ಮನೆ ಕೊಡಲು ನಿರಾಕರಿಸಿದ್ದರಿಂದ ಸುಗುಣ ಹಲ್ಲೆಗೆ ಮುಂದಾಗಿದ್ದಾಳೆ. ಹಲ್ಲೆ ನಡೆಸುವಾಗ ಕತ್ತು ಮುರಿದು ಅತ್ತೆ ರಾಣಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬದರಿನಾಥ್, ಕೇದಾರನಾಥಕ್ಕೆ ಮುಖೇಶ್ ಅಂಬಾನಿ ಭೇಟಿ – ದೇಗುಲದ ಟ್ರಸ್ಟ್ಗೆ 5 ಕೋಟಿ ದೇಣಿಗೆ
ಘಟನೆ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.