ಜೈಪುರ: ಸಾಮಾನ್ಯವಾಗಿ ನ್ಯಾಯ ತೀರ್ಮಾನಕ್ಕಾಗಿ ಜನರು ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ ಹಸುವೊಂದ ಮಾಲೀಕತ್ವದ ವಿವಾದಕ್ಕಾಗಿ ನ್ಯಾಯಾಲಯಕ್ಕೆ ಬರುವಂತಾದ ಘಟನೆ ರಾಜಸ್ಥಾನದ ಜೋಧ್ಪುರ್ನಲ್ಲಿ ನಡೆದಿದೆ.
ಈ ಪ್ರಕರಣದಲ್ಲಿ ಹಸು ಯಾರಿಗೂ ಹಾನಿಯನ್ನುಂಟು ಮಾಡಿಲ್ಲ. ಜೊತೆಗೆ ಅದರ ತಪ್ಪೇನೂ ಇರಲಿಲ್ಲ. ಆದರೆ ಹಸುವಿನ ಮಾಲೀಕತ್ವಕ್ಕಾಗಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಓಂ ಪ್ರಕಾಶ್ ಮತ್ತು ಶ್ಯಾಮ್ ಸಿಂಗ್ ಇಬ್ಬರ ನಡುವೆ 2018ರಿಂದಲೂ ಈ ಹಸುವಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ನಡೆಯುತ್ತಲೇ ಇದೆ.
ಈ ಮಾಲೀಕತ್ವದ ವಿಚಾರವಾಗಿ ಇಬ್ಬರು ಕುಳಿತು ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆಯಲ್ಲಿ ಬಗೆಹರಿಯದ ಪರಿಣಾಮ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ನ್ಯಾಯಾಧೀಶರು ಈ ಪ್ರಕರಣ ಕುರಿತು ವಿಚಾರಣೆ ಮಾಡುವ ಸಂದರ್ಭದಲ್ಲಿ ಹಸುವನ್ನು ಕೂಡ ಕೋರ್ಟ್ಗೆ ಕರೆದುಕೊಂಡು ಬನ್ನಿ ಎಂದು ಆದೇಶಿಸಿದ್ದಾರೆ. ಹೀಗಾಗಿ ಹಸುವನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು.
ನ್ಯಾಯಾಧೀಶರು ಎಲ್ಲ ಸಾಕ್ಷ್ಯಗಳನ್ನು ಪರಿಶೀಲನೆ ಮಾಡಿ ಹಸು ಓಂ ಪ್ರಕಾಶ್ ಸೇರಬೇಕಿದೆ ಎಂದು ತೀರ್ಪು ನೀಡಿದ್ದು, ಆತನ ಸುಪರ್ದಿಗೆ ಹಸುವನ್ನು ನೀಡಲಾಗಿದೆ.
Rajasthan: A cow was produced before a local court in Jodhpur y'day in connection with dispute over its ownership. Lawyer says '2 men,Om Prakash&Shyam Singh had dispute over its ownership since '18. Today court said that based on all evidence the cow be handed over to Om Prakash" pic.twitter.com/RL96lNweD4
— ANI (@ANI) June 15, 2019
ವಿಚಾರಣೆ ಸಂದರ್ಭದಲ್ಲಿ ಲಾಯರ್ ಶ್ಯಾಮ್ ಸಿಂಗ್ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆತ ಕೊಟ್ಟ ಉತ್ತರ ಅಸ್ಪಷ್ಟವಾಗಿತ್ತು. ಹೀಗಾಗಿ ಸಾಕ್ಷ್ಯಗಳ ಆಧಾರದ ಮೇಲೆ ಹಸುವನ್ನು ಓಂ ಪ್ರಕಾಶ್ಗೆ ಹಸುವನ್ನು ನೀಡುವಂತೆ ಕೋರ್ಟ್ ತೀರ್ಪು ನೀಡಿದೆ ವಕೀಲರು ತಿಳಿಸಿದ್ದಾರೆ. ಸದ್ಯಕ್ಕೆ ಈ ಪ್ರಕರಣ ರಾಜಸ್ಥಾನದಲ್ಲಿ ಚರ್ಚೆಯಾಗುತ್ತಿದೆ.