ಬೀದಿ ನಾಯಿಗಳ ದಾಳಿಗೆ ಬಾಲಕ ಬಲಿ!

Public TV
1 Min Read
DOGS ATTACK

ಚಿಕ್ಕಬಳ್ಳಾಪುರ: ಬೀದಿನಾಯಿಗಳ ದಾಳಿಯಿಂದಾಗಿ ಬಾಲಕ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣದ ಸಂತೋಷ ನಗರದಲ್ಲಿ ನಡೆದಿದೆ.

BOY DEAD

ಕಲಂದರ್ ಖಾನ್ (11) ನಾಯಿಗಳ ದಾಳಿಗೆ ಬಲಿಯಾದ ಬಾಲಕ. ಇದನ್ನೂ ಓದಿ: ಫಿಶ್ ಕರಿ ಬೇಕು ಎಂದ ಸ್ನೇಹಿತನ ಬರ್ಬರ ಹತ್ಯೆ

ತಂದೆ ಬಾಬಾಜಾನ್ ಖಾನ್ ಬಳಿಗೆ ಹೋಗುತ್ತಿದ್ದಾಗ ಬಾಲಕನ ಮೇಲೆ ಏಕಾಏಕಿ 20-30 ನಾಯಿಗಳ ಹಿಂಡು ದಾಳಿ ನಡೆಸಿವೆ. ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಪುನೀತ್ ನೆನಪು ಮಗಳಿಗೆ ಕಾಡುತ್ತಿದೆ: ರಮೇಶ್ ಅರವಿಂದ್

DOGS ATTACK

ಸಂತೋಷ ನಗರದ ಚಿಕನ್, ಮಟನ್ ಅಂಗಡಿಗಳ ತ್ಯಾಜ್ಯಕ್ಕಾಗಿ ಬಿಡಾಡಿ ನಾಯಿಗಳು ಹಿಂಡು ಹಿಂಡಾಗಿ ಗುಂಪು ಸೇರಲಿವೆ. ಮಾಂಸದಂಗಡಿಗಳಲ್ಲಿ ಆಹಾರಕ್ಕಾಗಿ ಬಂದು ಸೇರಿದ್ದ ನಾಯಿಗಳು ಭಾನುವಾರ ಬಾಲಕನನ್ನು ಬಲಿ ಪಡೆದಿವೆ. ಮಾಂಸದಂಗಡಿಗಳನ್ನು ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *