ಬೆಂಗಳೂರು: ಬಾಲಕನ ತಲೆಯ ಮೇಲೆ ಟಾಟಾ ಏಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಚಾಮರಾಜಪೇಟೆಯ (Chamarajapete) ಗುಡ್ಡಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Advertisement
ಆಟವಾಡುತ್ತಾ ಓಡುತ್ತಿದ್ದ ಬಾಲಕ ನಿಲ್ಲಿಸಿದ್ದ ಸ್ಕೂಟಿಗೆ ಅಕಸ್ಮಾತಾಗಿ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಈ ವೇಳೆ ಪಕ್ಕದಲ್ಲೇ ಬರುತ್ತಿದ್ದ ಟಾಟಾ ಏಸ್ ಬಾಲಕ ತಲೆಯ ಮೇಲೆ ಹರಿದಿದೆ, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಇದನ್ನೂ ಓದಿ: ಮಡಿಕೇರಿ ದಸರಾಕ್ಕೆ ಅದ್ದೂರಿ ತೆರೆ – ಮಂಜಿನ ನಗರಿಯಲ್ಲಿ ಧರೆಗಿಳಿದ ದೇವಲೋಕ!
Advertisement
Advertisement
ಏನಿದು ಘಟನೆ?
ಬಾಲಕ ತನ್ನ ಪಾಡಿಗೆ ಮನೆಯ ಎದುರುಗಡೆ ಓಡಾಡಿಕೊಂಡಿದ್ದ. ಯಾರನ್ನೂ ಕೂಗಿಕೊಂಡು ಓಡಿ ಹೋಗ್ತಿದ್ದ ಬಾಲಕನ ಕೈಗೆ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ತಾಗಿದೆ. ಈ ವೇಳೆ ಆಯತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಪಕ್ಕದಲ್ಲೇ ಬರುತ್ತಿದ್ದ ಟಾಟಾ ಏಸ್ ಬಾಲಕನ ತಲೆ ಮೇಲೆ ಹರಿದಿದೆ. ಸ್ಥಳದಲ್ಲೇ ಬಾಲಕ ಪ್ರಾಣ ಬಿಟ್ಟಿದ್ದು, ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಇದನ್ನೂ ಓದಿ: ಟೀಂ ಇಂಡಿಯಾ ಆರ್ಭಟಕ್ಕೆ ದಾಖಲೆಗಳು ಧೂಳಿಪಟ – ನಿಜಕ್ಕೂ ಇದು ಬೆಂಕಿ ಟೀಂ ಎಂದ ಸೂರ್ಯ!