ಬೆಂಗ್ಳೂರಲ್ಲಿ ಮುಂದುವರೆದ ಸಾವಿನ ರಸ್ತೆಗುಂಡಿಗಳ ವ್ಯಥೆ-ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ

Public TV
1 Min Read
Path Hole 6

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಕಥೆ-ವ್ಯಥೆ ಮುಗಿಯುವಂತೆ ಕಾಣುತ್ತಿಲ್ಲ. ಸೋಮವಾರ ರಾತ್ರಿ ಬೈಕ್ ಸವಾರರೊಬ್ಬರು ರಸ್ತೆ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಣ್ಣೂರಿನ ಮೂರನೇ ಕ್ರಾಸ್‍ನಲ್ಲಿ ಈ ಘಟನೆ ನಡೆದಿದೆ.

ಸೋಮವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಬೈಕ್ ನಲ್ಲಿ ಬಂದ ವ್ಯಕ್ತಿ ಸುಮಾರು ಎರಡು ಆಡಿ ಆಳದ ಗುಂಡಿಗೆ ಬಿದ್ದು ಪ್ರೆಜ್ಞೆ ಕಳೆದುಕೊಂಡಿದ್ದರು. ಈ ವೇಳೆ ಸ್ಥಳೀಯರು ಬೈಕ್ ಸವಾರನನ್ನು 108 ಅಂಬ್ಯುಲೆನ್ಸ್ ಗೆ ಕರೆ ಮಾಡಿ ಖಾಸಗಿ ಆಸ್ಪತ್ರೆ ಸೇರಿಸಿದ್ದಾರೆ.

ದುರಂತ ಅಂದರೆ ಅಪಘಾತ ಆದ ಜಾಗ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ಪ್ರತಿನಿಧಿಸುವ ಕ್ಷೇತ್ರ. ಇದೇ ರಸ್ತೆಯಲ್ಲಿ ಸ್ಕೂಲ್, ಕಾಲೇಜ್‍ಗಳಿವೆ. ಪ್ರತಿದಿನ ಐದಾರು ಜನವಾದರೂ ಇದೇ ಹಳ್ಳಕ್ಕೆ ಬಿದ್ದು ಗಾಯಮಾಡಿಕೊಂಡು ಹೋಗ್ತಿದ್ದಾರೆ. ಈ ಬಗ್ಗೆ ಸಚಿವ ಜಾರ್ಜ್ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Path Hole 2

Path Hole 4

Path Hole 5

Path Hole 1

Share This Article