ಬೆಂಗಳೂರು: ರಾತ್ರಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ನಡೆಯಬೇಕಿದ್ದ ದೊಡ್ಡ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿದೆ.
ಆಸ್ಪತ್ರೆಯ ಗೋದಾಮಿನಲ್ಲಿ ತುಂಬಿದ್ದ ಕಸಕ್ಕೆ ಬೆಂಕಿ ಆವರಿಸಿದ ಪರಿಣಾಮ ಕೆಲಕಾಲ ಆಸ್ಪತ್ರೆಯಲ್ಲಿದ್ದ ರೋಗಿಗಳು ಆತಂಕಕ್ಕೊಳಗಾದ್ರು. ಮಧ್ಯರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಆಸ್ಪತ್ರೆಯ ಗೋಡೌನ್ನಲ್ಲಿ ಶೇಖರಿಸಿಟ್ಟಿದ್ದ ಕಸಕ್ಕೆ ಇದ್ದಕಿದ್ದಂತೆ ಬೆಂಕಿ ತಗುಲಿದೆ.
ಕಸಕ್ಕೆ ಬೆಂಕಿ ಆವರಿಸಿದ್ದಂತೆ ತಕ್ಷಣ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ, ಫೈರ್ ಕಂಟ್ರೋಲ್ ರೂಂಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿ ನಡೆಯಬೇಕಿದ್ದ ದೊಡ್ಡ ದುರಂತವೊಂದನ್ನು ತಪ್ಪಿಸಿದ್ದಾರೆ.
ಸದ್ಯ ಘಟನೆ ಬಗ್ಗೆ ಮಾತನಾಡಿದ ಆಸ್ಪತ್ರೆಯ ಸೂಪರಿಡೆಂಟ್ ಡಾ. ರವಿ, ಯಾರೋ ಬೀಡಿ ಸೇದಿ ಬಳಿಕ ಶೇಖರಣೆ ಮಾಡಿಟ್ಟಿದ್ದ ಕಸದ ರಾಶಿಗೆ ಎಸೆದಿದ್ದಾರೆ. ಇದ್ರಿಂದ ಪರಿಣಾಮ ಈ ರೀತಿಯ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.