ಚಾಮರಾಜನಗರ: ಈಜಲು ಹೋಗಿ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಶಿವನಸಮುದ್ರ ಕಾವೇರಿ ನದಿಯಲ್ಲಿ ನಡೆದಿದೆ.
ಬೆಂಗಳೂರಿನ ಜೆಪಿ ನಗರದ ನಿವಾಸಿ ಸಾಹಿಲ್ ಪಾಷ (23) ಮೃತ ಯುವಕ. 9 ಜನ ಸ್ನೇಹಿತರ ಜೊತೆ ನದಿಯಲ್ಲಿ ಈಜಲು ಹೋಗಿದ್ದ ದಾರುಣ ಅಂತ್ಯ ಕಂಡಿದ್ದಾನೆ.
ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ವೆಸ್ಲಿ ಸೇತುವೆ ಬಳಿಯ ಕಾವೇರಿ ನದಿಯಲ್ಲಿ ಘಟನೆ ನಡೆದಿದೆ. ಬಂಡೆಗಳ ಸಮೀಪ 9 ಜನ ಯುವಕರ ಗುಂಪು ಈಜಲು ಹೋಗಿದ್ದರು. ರಂಜಾನ್ ಹಬ್ಬ ಮುಗಿದ ಹಿನ್ನೆಲೆ ಶಿವನಸಮುದ್ರ ದರ್ಗಾಕ್ಕೆ ಯುವಕ ಬಂದಿದ್ದ. ಪ್ರಾರ್ಥನೆ ಸಲ್ಲಿಸಿ ನಂತರ ವೆಸ್ಲಿ ಸೇತುವೆಯ ಬಳಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.