ಜಗಳ ಬಿಡಿಸಲು ಹೋದ ವ್ಯಕ್ತಿಯೇ ಕುಸಿದು ಬಿದ್ದು ಸಾವು

Public TV
1 Min Read
dharwad Conflict

ಧಾರವಾಡ: ಇಬ್ಬರ ಜಗಳದಲ್ಲಿ (Conflict) ಮೂರನೇ ವ್ಯಕ್ತಿ ಬಲಿಯಾದ ಘಟನೆ ಧಾರವಾಡ (Dharwad) ಹೊಸ ಬಸ್ ನಿಲ್ದಾಣದ ಎದುರಿನ ಹೋಟೆಲ್‌ನಲ್ಲಿ ನಡೆದಿದೆ.

ಶ್ರೀಸಾಯಿ ಎಂಬ ಹೋಟೆಲ್‌ನಲ್ಲಿ (Hotel) ಈ ಘಟನೆ ನಡೆದಿದೆ.  ರಾಮಲಿಂಗಪ್ಪ ಎಂಬಾತ ಜಗಳ ಬಿಡಿಸಲು ಬಂದು ಜೀವ ಕಳೆದುಕೊಂಡ ವ್ಯಕ್ತಿ. ರಾಮಲಿಂಗಪ್ಪನ ಏಟು ತಿಂದ ಕೆಲವೇ ಕ್ಷಣಗಳಲ್ಲಿ ಹಠಾತ್ತನೇ ಬಿದ್ದು ಸಾವನ್ನಪ್ಪಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಪರಸ್ಪರ ಕಿತ್ತಾಡಿ ಮಕ್ಕಳೊಂದಿಗೆ ಬಾವಿಗೆ ಜಿಗಿದ ಓರಗಿತ್ತಿಯರು – ಗರ್ಭಿಣಿ ಸಾವು

ಹೋಟೆಲ್‌ಗೆ ಬಂದಿದ್ದ ಎರಡು ಗುಂಪುಗಳ ಮಧ್ಯೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಾಮಲಿಂಗಪ್ಪ ಜಗಳ ಬಿಡಿಸಲು ಹೋಗಿದ್ದ. ಈ ವೇಳೆ ರಾಮಲಿಂಗಪ್ಪ ಬುದ್ಧಿವಾದ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡು ಒಂದು ಗುಂಪು ಆತನ ಮೇಲೆ ಹಲ್ಲೆ ನಡೆಸಿದೆ. ಹಲ್ಲೆ ನಡೆದು ಕೆಲವು ಕ್ಷಣಗಳ ನಂತರ ಕುಸಿದು ಬಿದ್ದ ರಾಮಲಿಂಗಪ್ಪ, ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾನೆ. ಸದ್ಯ ಉಪನಗರ ಠಾಣೆ ಪೊಲೀಸರು ಘಟನೆ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯದಲ್ಲಿ 150 ಕ್ಷೇತ್ರ ಗೆಲ್ಲುತ್ತೇವೆ: ಡಿಕೆಶಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *