ಯಡಿಯೂರಪ್ಪಗೆ ಬಹಳ ವಯಸ್ಸೇನು ಆಗಿಲ್ಲ – ದೈಹಿಕ, ಮಾನಸಿಕವಾಗಿ ಸದೃಢರಾಗಿದ್ದಾರೆ: ಸುಧಾಕರ್

Public TV
1 Min Read
BJP Yediyurappa Sudhakar Assembly Constituency Chikkaballapur 1

ಚಿಕ್ಕಬಳ್ಳಾಪುರ: ರಾಜಕೀಯದಿಂದ ಮಾಜಿ ಸಿಎಂ ಯಡಿಯೂರಪ್ಪ ನಿವೃತ್ತಿ ಆಗೋದು ಸಾಧ್ಯವಿಲ್ಲ. ಯಡಿಯೂರಪ್ಪ ಅವರಿಗೆ ಬಹಳ ವಯಸ್ಸೇನು ಆಗಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಹೊಸೂರು ಗ್ರಾಮದಲ್ಲಿ ಆರೋಗ್ಯ ಸಚಿವ ಸುಧಾಕರ್ ಹೇಳಿದರು.

yediyurappa and Vijayendra 1

ಶಿಕಾರಿಪುರವನ್ನು ಯಡಿಯೂರಪ್ಪ ಅವರು ಮಗ ವಿಜಯೇಂದ್ರ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಅವರು ರಾಜಕೀಯ ವಲಯದಿಂದ ನಿವೃತ್ತಿ ಹೊಂದಿದ್ರಾ ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರಿಗೆ ಬಹಳ ವಯಸ್ಸೇನು ಆಗಿಲ್ಲ. ಅವರು ದೈಹಿಕವಾಗಿ ಮಾನಸಿಕವಾಗಿ ಈಗಲೂ ಸಾಕಷ್ಟು ಸದೃಢರಾಗಿದ್ದಾರೆ. ಅವರ ಮಾರ್ಗದರ್ಶನ ಕ್ರಿಯಾಶೀಲತೆ ಮುಂದುವರಿದರೆ ನಮಗೆ ಒಳ್ಳೆಯದು ಅಂತ ಇನ್ನೂ ಯಡಿಯೂರಪ್ಪ ಅವರು ಮೊನ್ನೆ ನಡೆದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ:  ಯಡಿಯೂರಪ್ಪ ಡಿಕ್ಷನರಿಯಲ್ಲಿ ನಿವೃತ್ತಿ ಎನ್ನುವ ಪದವಿಲ್ಲ: ವಿಜಯೇಂದ್ರ 

B.S.Yeddyurappa B.Y.Vijayendra Shimoga Shikaripura 2

ಚುನಾವಣೆ ಹತ್ರ ಬರುತ್ತ ಇದೆ. ನಾವು ಜನರ ಬಳಿ ಹೋಗಬೇಕು. ದೊಡ್ಡ ಸಮಾವೇಶಗಳನ್ನ ಮಾಡಿ ಜನರಿಗೆ ನಮ್ಮ ಸರ್ಕಾರದ ಕೆಲಸಗಳನ್ನ ತಿಳಿಸಬೇಕು. ಹಿಂಗಂತ ಸಿಎಂ ಅವರಿಗೆ ಯಡಿಯೂರಪ್ಪ ಅವರೇ ಸಲಹೆ ನೀಡಿದ್ದಾರೆ. ಹಾಗಾಗಿ ಅವರು ರಾಜಕೀಯದಿಂದ ದೂರ ಉಳಿಯಲ್ಲ ಎಂದರು.

BJP Yediyurappa Sudhakar Assembly Constituency Chikkaballapur

ಬಿಜೆಪಿ ಸಾಧನ ಸಮಾವೇಶ ಯಶಸ್ವಿಗೊಳಿಸಲು ಸಚಿವ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಗೌರಿಬಿದನೂರು, ಅಲ್ಲೀಪುರ, ಹೊಸೂರು, ವಿದುರಾಶ್ವತ್ಥ, ಡಿ.ಪಾಳ್ಯದಲ್ಲಿ ಇಂದು ಸರಣಿ ಸಭೆಗಳನ್ನ ನಡೆಸಿದ್ದಾರೆ. ಇದನ್ನೂ ಓದಿ: ಬ್ಲ್ಯಾಕ್ ಏಲಿಯನ್‍ನಂತೆ ಬದಲಾದ ಇವನನ್ನು ನೋಡಿದವರು ಕೆಲಸವನ್ನೆ ಕೊಡುತ್ತಿಲ್ಲ – ಓದಿ ವಿಚಿತ್ರ ಕಥೆ 

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *