ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ

Public TV
1 Min Read
spicejet

ಕರಾಚಿ: ಮಂಗಳವಾರ ಗುಜರಾತ್‍ನ ಕಾಂಡ್ಲಾದಿಂದ ಬಂದ ಸ್ಪೈಸ್‍ಜೆಟ್ ವಿಮಾನದ ವಿಂಡ್‌ಶೀಲ್ಡ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಸುರಕ್ಷಿತವಾಗಿ ಮುಂಬೈನಲ್ಲಿ ಲ್ಯಾಂಡ್ ಮಾಡಲಾಗಿದೆ.

ಜುಲೈ 5 ರಂದು, ಸ್ಪೈಸ್‍ಜೆಟ್ ಕ್ಯೂ400 ವಿಮಾನವು 23,000 ಕಿ.ಮೀ ಎತ್ತರದಲ್ಲಿ ಹಾರಾಟದಲ್ಲಿದ್ದಾಗ ವಿಂಡ್‍ಶೀಲ್ಡ್ ಹೊರ ಫಲಕವು ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ. ಈ ಹಿನ್ನೆಲೆ ಸಿಬ್ಬಂದಿ ವರ್ಗಕ್ಕೆ ಒತ್ತಡ ಹೆಚ್ಚಾಗಿ ಮುಂಬೈನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ ಎಂದು ಸ್ಪೈಸ್‌ಜೆಟ್ ವಕ್ತಾರರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಜನರನ್ನು ಲೂಟಿ ಮಾಡಲು ನೆರವಾಗುವಂತೆ ಸಂವಿಧಾನವನ್ನು ಬರೆಯಲಾಗಿದೆ: ಸಾಜಿ ಚೆರಿಯನ್ 

SpiceJet plane returns to Mumbai after pilot notices cracks on windshield

ಅಲ್ಲದೇ ಕಳೆದ ವಾರವು ಇದೇ ರೀತಿ ನಡೆದಿದ್ದು, ದೆಹಲಿಯಿಂದ ದುಬೈಗೆ ತೆರಳುತ್ತಿದ್ದ ಬೋಯಿಂಗ್ 737 ಮ್ಯಾಕ್ಸ್ ವಿಮಾನದಲ್ಲಿ ಇಂಧನ ಕಡಿಮೆಯಾದ ಹಿನ್ನೆಲೆ ಕರಾಚಿಯಲ್ಲಿ ಲ್ಯಾಂಡ್ ಮಾಡಬೇಕಾಯಿತು. ಈ ವಿಮಾನದಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು.

Prajavani

ಕಳೆದ 17 ದಿನಗಳಲ್ಲಿ ಕಡಿಮೆ ವೆಚ್ಚದ ವಿಮಾನಯಾನವು ತಾಂತ್ರಿಕ ದೋಷದ ಏಳನೇ ಪ್ರಕರಣ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಎಲ್ಲ ಪ್ರಕರಣಗಳ ಕುರಿತು ಸರಿಯಾಗಿ ತನಿಖೆಯಾಗಬೇಕು ಎಂದು ಡಿಜಿಸಿಪಿ ತನಿಖೆ ನಡೆಸುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಇದನ್ನೂ ಓದಿ: ಬಕ್ರೀದ್ ಹಬ್ಬದಲ್ಲಿ ಅನಧಿಕೃತವಾಗಿ ಗೋಹತ್ಯೆಗೆ ಮುಂದಾದ್ರೆ ಕಾನೂನು ಕ್ರಮ: ಡಿಸಿ ಎಚ್ಚರಿಕೆ 

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *