ನೀನು ರಾಜ್ಯಕ್ಕೆ ಬೆಂಕಿ ಹಚ್ಚಿದವನು, ಕೂತ್ಕೊಳಲೇ- ಜಮೀರ್ ವಿರುದ್ಧ ಈಶ್ವರಪ್ಪ ಕಿಡಿ..!

Public TV
1 Min Read
ESHA ZAMEER BYTE 22 23

ಬೆಂಗಳೂರು: ನಿನಗೆ ಏನು ಗೊತ್ತಿದೆ ಕೂತ್ಕೊಳ್ಳಲೇ..ಕೂತ್ಕೊಳಲೇ ಸುಮ್ಮನೆ, ಇಡೀ ರಾಜ್ಯಕ್ಕೆ ನೀನು ಬೆಂಕಿ ಹಚ್ಚಿದವನು. ಬರೀ ಕಾಂಗ್ರೆಸ್ ಗೆ ಬೆಂಕಿ ಹಾಕಿದವನು ಅಲ್ಲ, ರಾಜ್ಯಕ್ಕೆ ಬೆಂಕಿ ಹಾಕಿದವನು. ಹೀಗೆ ಜಮೀರ್ ವಿರುದ್ಧ ಈಶ್ವರಪ್ಪ ಕಿಡಿಕಾರಿದರು.

Araga jnanendra Bangalore Assembly Siddaramaiah 4

ವಿಧಾನಸಭೆಯಲ್ಲಿ ನಿಯಮ 68ರಡಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡುವಾಗ ಅವರ ಬೆಂಬಲಕ್ಕೆ ನಿಂತು ಜಮ್ಮೀರ್ ಮಧ್ಯಪ್ರವೇಶಿಸಿದರು. ಈ ವೇಳೆ ಜಮ್ಮೀರ್ ಗೆ ಏಕವಚನದಲ್ಲೇ ಈಶ್ವರಪ್ಪ ತಿರುಗೇಟು ಕೊಟ್ಟರು. ಸುಮ್ಮನೆ ಕೂತ್ಕೊಳ್ಳೋ, ಕೂತ್ಕಳಲೇ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ರು. ಇದನ್ನೂ ಓದಿ: ಹಿಜಬ್ ಬದಲು ದುಪಟ್ಟಾ ಹಾಕಲು ಅವಕಾಶ ಕೊಡಿ ಎಂದು ಶಲ್ಯ ಹಿಂದೆ, ಮುಂದೆ ಮಾಡಿ ತೋರಿಸಿದ ಸಿದ್ದು

KS Eshwarappa 2

ಈಶ್ವರಪ್ಪ ಮಾತಿಗೆ ಶಾಸಕ ಜಮೀರ್ ಆಕ್ರೋಶ ವ್ಯಕ್ತಪಡಿಸಿದರು. 144 ಸೆಕ್ಷನ್ ಉಲ್ಲಂಘನೆ ಮಾಡಿದ್ದಾರೆ, ಮಂತ್ರಿಯಾಗಿ ಅವರಿಗೆ ಮಾತನಾಡಲು ನೈತಿಕ ಹಕ್ಕಿಲ್ಲ ಅಂತಾ ಕಿಡಿಕಾರಿದ್ರು. ಈ ವೇಳೆ ಈಶ್ವರಪ್ಪ ಏಕವಚನ ಮಾತಿಗೆ ಕಾಂಗ್ರೆಸ್ ಸದಸ್ಯರ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಮೀರ್ ಮುಂದೊಂದು ದಿನ ನೀವು ಆರ್‌ಎಸ್‍ಎಸ್‍ ಒಪ್ಪಿಕೊಳ್ಳಬೇಕಾಗುತ್ತೆ: ಸ್ಪೀಕರ್ ಮಾತಿನ ತಿವಿತ

ZAMEER 4

ಸದನದಲ್ಲಿ ಮಾತಿನ ಚಕಮಕಿ ನಡೆದು ಕೆಲಕಾಲ ಗದ್ದಲದ ವಾತಾವರಣ ಉಂಟಾಯ್ತು. ಸಿದ್ದರಾಮಯ್ಯ ಮಾತನ್ನ ಡೈವರ್ಟ್ ಮಾಡಲು ಹೀಗೆ ಮಾಡ್ತಿದ್ದಾರೆ ನೀವು ಮಾತಾಡಿ ಸರ್ ಎಂದು ಸಿದ್ದರಾಮಯ್ಯಗೆ ಜಮೀರ್ ಹೇಳಿದ್ರು. ಬಳಿಕ ಗದ್ದಲ ಕಡಿಮೆ ಆಯ್ತು. ಇದನ್ನೂ ಓದಿ: ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧಿಸುವವರ ವಿರುದ್ಧ ಕ್ರಮ ಇಲ್ಲ: ಮಾಧುಸ್ವಾಮಿ

Share This Article
Leave a Comment

Leave a Reply

Your email address will not be published. Required fields are marked *