ಎಷ್ಟು ದಿನ ಇರ್ತೀನೋ ಗೊತ್ತಿಲ್ಲ, ಮಾತಾಡೋಕೆ ಅವಕಾಶ ಕೊಡಿ: ಪರಿಷತ್‍ನಲ್ಲಿ ಸಿ.ಎಂ. ಇಬ್ರಾಹಿಂ ಅಳಲು!

Public TV
1 Min Read
IBRAHIM

ಬೆಂಗಳೂರು: ಎಷ್ಟು ದಿನ ಸದನದಲ್ಲಿ ನಾನು ಸದನದಲ್ಲಿ ಇರ್ತೀನೋ ಗೊತ್ತಿಲ್ಲ. ನನಗೆ ಮಾತಾಡಲು ಅವಕಾಶ ಕೊಡಿ ಅಂತ ಕಾಂಗ್ರೆಸ್‍ನ ರೆಬೆಲ್ ಸದಸ್ಯ ಸಿ.ಎಂ. ಇಬ್ರಾಹಿಂ ಸದನದಲ್ಲಿ ಪಟ್ಟು ಹಿಡಿದ ಘಟನೆ ಇಂದು ನಡೀತು.

CM IBRAHIM 3

ಶೂನ್ಯ ವೇಳೆ ಮುಗಿದ ಕೂಡಲೇ ಎದ್ದು ನಿಂತ ಇಬ್ರಾಹಿಂ, ಇಲ್ಲಿ ಎಷ್ಟು ದಿನ ನಾನು ಇಲ್ಲಿಯೇ ಇರ್ತೀನೋ ನನಗೆ ಗೊತ್ತಿಲ್ಲ. ನನಗೆ ಅವಕಾಶ ಕೊಡಿ ಎಂದು ಪಟ್ಟು ಹಿಡಿದರು. ಇದನ್ನೂ ಓದಿ: ನೀನು ಜಮೀರ್ ಥರಾ ಆಡ್ತೀಯಲ್ಲೋ – ರೇಣುಕಾಚಾರ್ಯಗೆ ಮಾತಿನಿಂದ ತಿವಿದ ಬಿಎಸ್‍ವೈ

ಹಿಜಬ್ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಲು ಸಿಎಂ ಇಬ್ರಾಹಿಂ ಮುಂದಾಗಿದ್ದರು. ಆದರೆ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಅವಕಾಶ ಕೊಡಲಿಲ್ಲ. ಇದಕ್ಕೆ ಸಿಟ್ಟಿಗೆದ್ದು ಸಿಡಿಮಿಡಿಗೊಂಡ ಸಿಎಂ ಇಬ್ರಾಹಿಂ, ಯಾಕೆ ಈ ತರಹ ತಾರತಮ್ಯ ಮಾಡ್ತಿದ್ದೀರಿ..? ಯಾವಾಗ ನನಗೆ ಅವಕಾಶ ಕೊಡ್ತೀರಿ ಎಂದು ಪ್ರಶ್ನೆ ಮಾಡಿದರು.

CM IBRAHIM 2

ನನ್ನ ಸುದ್ದಿ ಸೆನ್ಸೇಷನ್ ಕ್ರಿಯೇಟ್ ಆಗುತ್ತೆ ಅಂತ ನನಗೆ ಶೂನ್ಯವೇಳೆ ಅವಕಾಶ ಕೊಡ್ತಿಲ್ವಾ? ನಾಳೆ ಕೊಡ್ತೀರೋ, ನಾಡಿದ್ದು ಕೊಡ್ತೀರೋ ಹೇಳಿ. ಇಲ್ಲಿ ಇದ್ದಾಗಲೇ ನಾನು ಮಾತಾಡಬೇಕು ಎಂದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಭಾಪತಿಗಳು ಇವತ್ತು ಅಜೆಂಡಾದಲ್ಲಿ ಸೇರಿಸಿಲ್ಲ, ಅವಕಾಶ ಇಲ್ಲ ಅಂತಾ ತಿಳಿಸಿದರು. ಸಭಾಪತಿಗಳ ಮಾತಿನಿಂದ ಸಿಟ್ಟಿಗೆದ್ದು ಇಬ್ರಾಹಿಂ ಕಲಾಪದಿಂದ ಹೊರ ನಡೆದರು.

Share This Article
Leave a Comment

Leave a Reply

Your email address will not be published. Required fields are marked *