ಬೆಂಗಳೂರು: ಮಕ್ಕಿಕಾಮಕ್ಕಿ ಕೊರೊನಾ ಟಫ್ ರೂಲ್ಸ್ ಜಾರಿಯಾದರೂ ನಾವು ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸುವುದಿಲ್ಲ. ನಾವು ಜನರನ್ನು ಉಳಿಸುವ ಕೆಲಸವನ್ನೂ ಮಾಡುತ್ತೇವೆ. ಪಾದಯಾತ್ರೆಯಿಂದ ಯಾರಿಗೂ ತೊಂದರೆಯಾಗಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಾಪ್ ದುಬಾರಿ ಬಜೆಟ್ ಸಿನಿಮಾಗಳಿಗೆ ಕೋವಿಡ್ ಶಾಕ್ – ರಿಲೀಸ್ ಡೇಟ್ ಮುಂದಕ್ಕೆ
ಪಾದಯಾತ್ರೆ ನಿಲ್ಲಿಸಲು ಟಫ್ ರೂಲ್ಸ್ ತಂದಿದ್ದಾರಾ? ಅದೆಲ್ಲ ನನಗೆ ಗೊತ್ತಿಲ್ಲ. ಆದರೆ ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.
144 ಸೆಕ್ಷನ್ ಜಾರಿಯಿದ್ದರೆ 5ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ನಾವು ನಾಲ್ಕು ಜನ ನಡೆಯುತ್ತೇವೆ. ಜನರಿಗೆ ಪಾದಯಾತ್ರೆಗೆ ಬರಲು ಮನವಿ ಮಾಡಿದ್ದೇವೆ. ಬಂದವರಿಗೆ ಮಾಸ್ಕ್, ಸ್ಯಾನಿಟೈಸ್, ಗ್ಲೌಸ್ ಹಾಕಿಸುತ್ತೇವೆ. ನಿಯಮಮಾನುಸಾರ ಮಾಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕೊರೊನಾ ಸೋಂಕಿತ ಆಸ್ಪತ್ರೆಯಿಂದ ಎಸ್ಕೇಪ್