– ಶೇ.1.26ಕ್ಕಿಳಿದ ಸೋಂಕು ಹರಡುವಿಕೆ ಪ್ರಮಾಣ
ಬೆಂಗಳೂರು: ರಾಜ್ಯದಲ್ಲಿ 1,386 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 3,204 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಪ್ರಮಾಣ ಶೇ.1.26ಕ್ಕೆ ಇಳಿದಿದೆ. ಎಂಟು ಜಿಲ್ಲೆಗಳಲ್ಲಿ ಕೊರೊನಾ ಸಂಖ್ಯೆ ಒಂದಂಕಿಗೆ ಇಳಿದ್ರೆ, ಏಳು ಜಿಲ್ಲೆಗಳಲ್ಲಿ ಮರಣ ಸಂಖ್ಯೆ ಶೂನ್ಯ ಸುತ್ತಿದೆ.
ಮಹಾಮಾರಿಯ ಮರಣ ನರ್ತನ ಮುಂದುವರಿದಿದ್ದು, ಇಂದು 61 ಜನರನ್ನು ಬಲಿ ಪಡೆದುಕೊಂಡಿದೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟವರ ಶೇಕಾಡಾವಾರು ಪ್ರಮಾಣ 4.40ರಷ್ಟಿದೆ. ಸದ್ಯ ರಾಜ್ಯದಲ್ಲಿ 34,585 ಸಕ್ರಿಯ ಪ್ರಕರಣಗಳಿದ್ದು, ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೂ 28,72,684 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 35,896 ಮಂದಿ ಸಾವನ್ನಪ್ಪಿದ್ದಾರೆ.
ರಾಜಧಾನಿಯಲ್ಲೂ ಮಹಾಮಾರಿ ಅಬ್ಬರ ತಗ್ಗಿದ್ದು, ಇಂದು 319 ಜನರು ಸೋಂಕಿಗೆ ತುತ್ತಾಗಿದ್ದಾರೆ. ಇವತ್ತು ಒಂಬತ್ತು ಮಂದಿ ಸಾವನ್ನಪ್ಪಿದ್ದು, ಬೆಂಗಳೂರು ನಗರದಲ್ಲಿ 12,985 ಸಕ್ರಿಯ ಪ್ರಕರಣಗಳಿವೆ. ಇಂದು ರಾಜ್ಯದಲ್ಲಿ 1,09,399 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತು.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 3, ಬಳ್ಳಾರಿ 10, ಬೆಳಗಾವಿ 32, ಬೆಂಗಳೂರು ಗ್ರಾಮಾಂತರ 47, ಬೆಂಗಳೂರು ನಗರ 319, ಬೀದರ್ 5, ಚಾಮರಾಜನಗರ 24, ಚಿಕ್ಕಬಳ್ಳಾಪುರ 9, ಚಿಕ್ಕಮಗಳೂರು 46, ಚಿತ್ರದುರ್ಗ 13, ದಕ್ಷಿಣ ಕನ್ನಡ 126, ದಾವಣಗೆರೆ 15, ಧಾರವಾಡ 16, ಗದಗ 5, ಹಾಸನ 108, ಹಾವೇರಿ 5, ಕಲಬುರಗಿ 16, ಕೊಡಗು 73, ಕೋಲಾರ 31, ಕೊಪ್ಪಳ 3, ಮಂಡ್ಯ 44, ಮೈಸೂರು 177, ರಾಯಚೂರು 1, ರಾಮನಗರ 14, ಶಿವಮೊಗ್ಗ 68, ತುಮಕೂರು 69, ಉಡುಪಿ 66, ಉತ್ತರ ಕನ್ನಡ 32, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 5 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.