ಜುಲೈ 10ರಂದು ತುಳುನಾಡ್ದ ಕಟ್ಟು ಕಟ್ಟಲೆ ವಿಚಾರಗೋಷ್ಠಿ

Public TV
1 Min Read
MNG 3

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ವಿಶ್ವದ ಎಲ್ಲಾ ತುಳು ಕೂಟ-ಸಂಘಟನೆಯ ಒಟ್ಟು ಕೂಡುವಿಕೆಯಲ್ಲಿ ‘ತುಳುನಾಡ್ದ ಕಟ್ಟು ಕಟ್ಟಲೆ’ ಎಂಬ ವಿಷಯದಲ್ಲಿ ಪ್ರಪ್ರಥಮವಾಗಿ ಅಂತರ್ಜಾಲ ತುಳು ವಿಚಾರಗೋಷ್ಠಿ ನಡೆಯಲಿದೆ.

ಜುಲೈ 10ರಂದು ಸಂಜೆ 7 ಗಂಟೆಗೆ ಈ ಕಾರ್ಯಕ್ರಮವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಎಲ್ಲಾ ತುಳು ಕೂಟ-ಸಂಘಟನೆಯ ಪ್ರಮುಖರಿಂದ ಅಭಿಪ್ರಾಯ ಮಂಡನೆ ನಡೆಯಲಿದೆ.

43ec312c d5a7 4cd1 8d3e 3aac682bcd55 medium

ಸಾಹಿತಿ ಮತ್ತು ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ.ಕತ್ತಲ್‍ಸಾರ್ ವಹಿಸಲಿದ್ದಾರೆ. ಇದನ್ನೂ ಓದಿ: ಸುಮಲತಾರಿಗೆ ರಾಜಕಾರಣದಲ್ಲಿ ಅನುಭವದ ಕೊರತೆ ಇದೆ: ನಿಖಿಲ್

Share This Article
Leave a Comment

Leave a Reply

Your email address will not be published. Required fields are marked *