ಮೈಸೂರು ಮೃಗಾಲಯದಲ್ಲಿ ಪ್ರಾಣಿ ದತ್ತು ಪಡೆದ ದರ್ಶನ್ ಅಭಿಮಾನಿ ದಂಪತಿ

Public TV
2 Min Read
darshan fan 1

ಚಿಕ್ಕಮಗಳೂರು: ಡಿ ಬಾಸ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ ಹಿನ್ನೆಲೆ ನಗರದ ದರ್ಶನ್ ಅಭಿಮಾನಿ ದಂಪತಿ ಮೈಸೂರು ಮೃಗಾಲಯದಲ್ಲಿ ಎರಡು ಎಮೋ ಪಕ್ಷಿ ಹಾಗೂ ಒಂದು ಬಿಳಿ ನವಿಲನ್ನ ದತ್ತು ಪಡೆದಿದ್ದಾರೆ.

ನಗರದ ದಂಟರಮಕ್ಕಿ ಬಡಾವಣೆಯಲ್ಲಿ ನಿವಾಸಿಯಾಗಿರುವ ಸಂದೀಪ್ ದಂಪತಿ ವಾರ್ಷಿಕ ಹತ್ತು ಸಾವಿರದಂತೆ ಎರಡು ಎಮೋ ಪಕ್ಷಿ ಹಾಗೂ ವಾರ್ಷಿಕ ನಾಲ್ಕೂವರೆ ಸಾವಿರಕ್ಕೆ ಒಂದು ಬಿಳಿ ನವಿಲನ್ನ ದತ್ತು ಪಡೆದು ಮೂಕ ಪ್ರಾಣಿಗಳ ನೆರವಿಗೆ ಕೈಜೋಡಿಸಿದ್ದಾರೆ. ದರ್ಶನ್ ಕೇವಲ ಡಿ ಬಾಸ್ ಅಷ್ಟೆ ಅಲ್ಲ. ನಿಸ್ವಾರ್ಥಿ ಕೂಡ. ಪ್ರಾಣಿಗಳನ್ನ ಅವರಷ್ಟು ಪ್ರೀತಿಸುವವರು ಯಾರೂ ಇಲ್ಲ. ಅವರಷ್ಟು ಪರಿಸರ ಪ್ರೇಮವೂ ಯಾರಿಗೂ ಇಲ್ಲ. ಸೆಲಿಬ್ರಿಟಿಯಾಗಿ ಪ್ರಾಣಿ-ಪರಿಸರದ ಬಗ್ಗೆ ಅವರ ಆಸಕ್ತಿ ನಿಜಕ್ಕೂ ಅತ್ಯದ್ಭುತ. ನಾವು ಅವರ ಮಾತಿನಿಂದಲೇ ಪ್ರೇರೇಪಣೆಗೊಂಡು ಇಂತಹ ಪುಣ್ಯದ ಕೆಲಸ ಮುಂದಾಗಿದ್ದೇವೆ ಎಂದು ಸಂದೀಪ್ ಹೇಳಿದ್ದಾರೆ.

darshan fan 2 medium

ಸಂದೀಪ್ ಕೂಡ ಪ್ರಾಣಿ ಪ್ರಿಯ. ತಮ್ಮ ತೋಟದಲ್ಲಿ ಕುದುರೆಯನ್ನ ಸಾಕಿದ್ದರು. ತೀವ್ರ ಅನಾರೋಗ್ಯದಿಂದ ಅದು ಸಾವನ್ನಪ್ಪಿದ ಮೇಲೆ ಸಾಕುವುದನ್ನ ಬಿಟ್ಟಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಬಾರಿ ಕುಟುಂಬದ ಜೊತೆ ಮೈಸೂರು ಮೃಗಾಲಯಕ್ಕೆ ಹೋಗಿ ಬರುತ್ತಾರೆ. ದರ್ಶನ್ ಮಾತಿಗೆ ರಾಜ್ಯಾದ್ಯಂತ ಸಾವಿರಾರು ಅಭಿಮಾನಿಗಳು ಪ್ರಾಣಿಪಕ್ಷಿಗಳನ್ನ ದತ್ತು ಪಡೆದಿದ್ದಾರೆ. ಅವರ ಅಭಿಮಾನಿಯಾಗಿ ಪ್ರಾಣಿ ಪಕ್ಷಿಗಳಿಗೆ ನಮ್ಮದೊಂದು ಕಿರುಕಾಣಿಕೆ ಎಂದು ನಾವು ದತ್ತು ಪಡೆದಿದ್ದೇವೆ ಎಂದರು.

darshan fan 3 medium

ಮೈಸೂರು ಮೃಗಾಲಯದಲ್ಲಿ ನಾವೇ ನೋಡಿ ಬಂದಿರುವ ಪ್ರಾಣಿಗಳು ಈಗ ಸಂಕಷ್ಟದಲ್ಲಿದೆ. ಕೊರೊನಾದಿಂದ ಮೃಗಾಲಯಕ್ಕೆ ಬರುವವರ ಸಂಖ್ಯೆ ಕೂಡ ಕಡಿಮೆ ಇದೆ. ಪ್ರಾಣಿ-ಪಕ್ಷಿಗಳ ನಿರ್ವಹಣೆ ಕೂಡ ಕಷ್ಟವಾಗಿದೆ. ಹಾಗಾಗಿ, ನಾವು ಕೆಲ ಪಕ್ಷಿಗಳನ್ನ ದತ್ತು ಪಡೆದಿದ್ದೇವೆ. ಮುಂದಿನ ವರ್ಷ ದೊಡ್ಡ ಪ್ರಮಾಣದಲ್ಲಿ ದತ್ತು ಪಡೆಯಲು ತೀರ್ಮಾನಿಸಿದ್ದಾರೆ. ಇದನ್ನು ಓದಿ: ಗುಡೇಕೋಟೆ ದೇವಸ್ಥಾನದಲ್ಲಿ ಕರಡಿಗಳ ಹಿಂಡು ಪ್ರತ್ಯಕ್ಷ

ಈ ವರ್ಷ ಮೂರು ಪಕ್ಷಿಗಳ ದತ್ತು ಪಡೆದಿರುವ ಸಂದೀಪ್ ಕುಟುಂಬ. ಮುಂದಿನ ವರ್ಷ ಹುಲಿ, ಆನೆಯನ್ನ ದತ್ತು ಪಡೆಯಲು ನಿರ್ಧರಿಸಿದ್ದಾರೆ. ಒಂದು ಹುಲಿಗೆ ವರ್ಷಕ್ಕೆ ಒಂದು ಲಕ್ಷ. ಒಂದು ಆನೆಗೆ ಒಂದು ವರ್ಷಕ್ಕೆ ಒಂದು ಲಕ್ಷದ ಎಪ್ಪತ್ತೈದು ಸಾವಿರ. ಮುಂದಿನ ವರ್ಷ ಹುಲಿ-ಆನೆಯನ್ನ ದತ್ತು ಪಡೆಯಲು ನಿರ್ಧರಿಸಿದ್ದಾರೆ. ಹೀಗೆ ದತ್ತು ಪಡೆಯುವುದರಿಂದ ಟ್ಯಾಕ್ಸ್ ಕೂಡ ಕಡಿಮೆಯಾಗಲಿದ್ದು, ವರ್ಷಕ್ಕೆ ಐದು ಜನಕ್ಕೆ ಎರಡು ಬಾರಿ ಫ್ರೀ ಪಾಸ್ ಕೂಡ ಸಿಗಲಿದೆ. ಜೊತೆಗೆ, ಸರ್ಟಿಫಿಕೇಟ್ ನೀಡುತ್ತಾರೆ. ಅದಕ್ಕೆಲ್ಲಾಕ್ಕಿಂತ ಮಿಗಿಲಾಗಿ ಸಂಕಷ್ಟದ ಸಮಯದಲ್ಲಿ ಹೀಗೆ ಪ್ರಾಣಿಗಳನ್ನ ದತ್ತು ಪಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಸಂದೀಪ್ ಕುಟುಂಬಸ್ಥರು ತಿಳಿಸಿದ್ದಾರೆ.

darshan fan 4 medium

ಸಂದೀಪ್ ಅವರ ಸ್ನೇಹಿತರು ಕೂಡ ಮುಂದಿನ ವರ್ಷ ಹುಲಿ-ಆನೆಯನ್ನ ದತ್ತು ಪಡೆಯುವಾಗ ನಾವು ಅವರ ನೆರವಿಗೆ ನಿಲ್ಲುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.’ ಇದನ್ನು ಓದಿ: ಸದಾ ನೆನಪಿನಲ್ಲಿಯೇ ಇರ್ತಿಯಾ ಗೆಳೆಯ: ಚಿರು ನೆನೆದ ದಚ್ಚು

Share This Article
Leave a Comment

Leave a Reply

Your email address will not be published. Required fields are marked *