ನಶೆಗಾಗಿ ಅವಧಿ ಮುಗಿದ ಕೆಮ್ಮಿನ ಔಷಧಿ ಮಾರುತ್ತಿದ್ದವರ ಬಂಧನ

Public TV
0 Min Read
bij arrest

ವಿಜಯಪುರ: ನಶೆಗಾಗಿ ಅವಧಿ ಮುಗಿದ ಕಾಫ್ ಸಿರಪ್(ಕೆಮ್ಮಿನ ಔಷಧಿ) ಮಾರುತ್ತಿದ್ದ ಇಬ್ಬರನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ಮಹ್ಮದ್ ಸಾದಿಕ್ ಭತಗುಣಕಿ(35), ಮಹ್ಮದ್ ಯುಸೂಫ್ ಕೊತ್ತಲ(35) ಬಂಧಿತರಾಗಿದ್ದು, ಬಂಧಿತರಿಂದ 4,16,696 ರೂ. ಮೌಲ್ಯದ ಔಷಧಿ ಬಾಟಲಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ನಶೆಗಾಗಿ ಯುವಕರಿಗೆ ಅವಧಿ ಮುಗಿದ ಕಾಫ್ ಸಿರಪ್ ಮಾರುತ್ತಿದ್ದರು.

Police Jeep 1 1

ಕೆಮ್ಮು, ಕಫಕ್ಕೆ ಬಳಸುವ ಕಾಫ್ ಸಿರಪ್ ನ್ನು ಅವಧಿ ಮುಗಿದ ಬಳಿಕ ಆರೋಪಿಗಳು ಒಂದೆಡೆ ಸಂಗ್ರಹಿಸಿ ಇಡುತ್ತಿದ್ದರು. ನಂತರ ಬೈಕ್ ಮೇಲೆ ಔಷಧಿ ಇಟ್ಟುಕೊಂಡು ಗುಪ್ತವಾಗಿ ಯುವಕರಿಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *