Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಕೆಪಿಎಸ್‌ಸಿಗೆ ಬೇಕಾಗಿದ್ದು 1,114 ಮಂದಿ – ಆದ್ರೆ 5 ಸಾವಿರ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ರವಾನೆ!

Public TV
Last updated: January 24, 2021 4:15 pm
Public TV
Share
3 Min Read
kpsc fda leak
SHARE

– ಪ್ರಶ್ನೆ ಪತ್ರಿಕೆ ಲೀಕಾಸುರರಿಗೂ ಜಿಲ್ಲೆಯಲ್ಲಿ ಆಫೀಸ್!
– ಒಂದು ಪ್ರಶ್ನೆ ಪತ್ರಿಕೆ 10 ಲಕ್ಷಕ್ಕೆ ಮಾರಾಟ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ನಡೆಸುವ ಪ್ರಥಮ ದರ್ಜೆ ಸಹಾಯಕ ಪರೀಕ್ಷೆಗಳ(ಎಫ್‌ಡಿಎ) ಪ್ರಶ್ನೆ ಪತ್ರಿಕೆಯನ್ನು 5 ಸಾವಿರ ಮಂದಿಗೆ ತಲುಪಿಸಲು ʼಲೀಕಾಸುರರುʼ ಪ್ಲಾನ್‌ ಮಾಡಿದ್ದ ವಿಚಾರ ಸಿಸಿಬಿ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ.

ಹೌದು, ಈ ಪ್ರಕರಣದ ಹಿಂದೆ ಸದ್ಯಕ್ಕೆ 14 ಮಂದಿಯ ಬಂಧನವಾಗಿದೆ. ಈ ಆರೋಪಿಗಳು ಜಿಲ್ಲೆಗಳಲ್ಲೂ ತಮ್ಮ ಕಾರ್ಯಸ್ಥಾನ ಮಾಡಿಕೊಂಡು ಒಬ್ಬೊಬ್ಬರನ್ನು ನೇಮಕ ಮಾಡಿದ್ದರು. ಬೆಳಗಾವಿ, ರಾಯಚೂರು , ಮೈಸೂರು, ಯಾದಗಿರಿಯಲ್ಲಿ ವ್ಯಕ್ತಿಗಳನ್ನು ನೇಮಕ ಮಾಡಲಾಗಿತ್ತು.

ಬಂಧನಕ್ಕೆ ಒಳಗಾದ ವ್ಯಕ್ತಿಗಳ ಸಂಪರ್ಕದಲ್ಲಿ 500 ಮಂದಿಯ ಅಭ್ಯರ್ಥಿಗಳ ಲಿಂಕ್‌ ಇತ್ತು. ಒಟ್ಟು 5 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ದಿನ ಬೆಳಗಾಗುವುದರ ಒಳಗಡೆ ಯಶಸ್ವಿಯಾಗಿ ತಲುಪಿಸಲು ಮೊದಲೇ ಪ್ಲಾನ್‌ ಸಿದ್ಧವಾಗಿತ್ತು. ಕೆಪಿಎಸ್‌ಸಿ 1,114 ಹುದ್ದೆಗಾಗಿ ಅರ್ಜಿ ಆಹ್ವಾನಿಸಿತ್ತು. ಆದರೆ ಪರೀಕ್ಷೆ ನಡೆಯುವ ಮೊದಲೇ 5 ಸಾವಿರ ಮಂದಿಗೆ ಪ್ರಶ್ನೆ ಪತ್ರಿಕೆ ತಲುಪಿಸಲು ಲೀಕಾಸುರರು ಮುಂದಾಗಿದ್ದರು. ಈ ಮೂಲಕ ಹಲವು ವರ್ಷಗಳಿಂದ ಎಫ್‌ಡಿಎ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ಸಾವಿರಾರು ಮಂದಿಯ ಕನಸಿಗೆ ಈ ಲೀಕಾಸುರರು ಕೊಳ್ಳಿ ಇಟ್ಟು ಭಗ್ನಗೊಳಿಸಿದ್ದಾರೆ.

kpsc fda leake 1

ಪ್ಲಾನ್‌ ಏನಿತ್ತು? ಪ್ರತಿ ಪ್ರಶ್ನೆ ಪತ್ರಿಕೆಗೆ ಬಾರ್‌ ಕೋಡ್‌ ಇರುತ್ತದೆ. ಬಾರ್‌ಕೋಡ್‌ ಇರುವ ಪ್ರಶ್ನೆ ಪತ್ರಿಕೆಯನ್ನು ಬಂಡಲ್‌ನಿಂದ ತೆಗೆದರೆ ಗೊತ್ತಾಗಬಹುದು ಎಂಬ ಕಾರಣಕ್ಕೆ ಅದನ್ನು ತೆಗೆದಿಲ್ಲ. ಬದಲಾಗಿ ಒಟ್ಟು 36 ಪುಟಗಳ ಪ್ರಶ್ನೆ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನ ಪತ್ರಿಕೆಯಿಂದ 86 ಪ್ರಶ್ನೆ,ಕನ್ನಡ ಪತ್ರಿಕೆಯಿಂದ 86 ಪ್ರಶ್ನೆ ಒಟ್ಟು 172 ಪ್ರಶ್ನೆಗಳನ್ನು ಸೋರಿಕೆ ಮಾಡಿ ಬಳಿಕ ಉತ್ತರಗಳನ್ನು ಸಿದ್ಧಮಾಡಿದ್ದರು.

ಮೋಹನ್‌ ನಾಪತ್ತೆ: ಕೆಪಿಎಸ್‌ಸಿಯ ಎಸ್‌ಡಿಎ ನೌಕರ ಮೋಹನ್‌ ಪ್ರಶ್ನೆ ಪತ್ರಿಕೆಯನ್ನು ಪ್ರಮುಖ ಪಾತ್ರವಹಿಸಿದ್ದಾನೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ. ಈತ ಈಗಾಗಲೇ ಬಂಧನವಾಗಿರುವ ಕೋರಮಂಗಲದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಇನ್ಸ್‌ಪೆಕ್ಟರ್‌ ಚಂದ್ರಪ್ಪ, ಎಸ್‌ಡಿಎ ನೌಕರ ರಾಚಪ್ಪನ ಜೊತೆ ಸೇರಿ ಈ ಕೃತ್ಯ ಎಸಗಿದ್ದಾನೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

kpsc fda leak

ವಿಶೇಷ ಏನೆಂದರೆ ಮೋಹನ್‌ ಬೆಳಗಾವಿಯಲ್ಲಿ ಇಂದು ಎಫ್‌ಡಿಎ ಪರೀಕ್ಷೆ ಬರೆಯಬೇಕಿತ್ತು. ಆದರೆ ಚಂದ್ರಪ್ಪ, ರಾಚಪ್ಪ ಬಂಧನಕ್ಕೆ ಒಳಗಾದ ಸುದ್ದಿ ತಿಳಿದು ಮೋಹನ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಬೆಳಗಾವಿಯಿಂದಲೇ ಪರಾರಿಯಾಗಿದ್ದಾನೆ.

14 ಮಂದಿ ಬಂಧನ: ಸಿಸಿಬಿ ಪೊಲೀಸರು ಶನಿವಾರ ಈ ಪ್ರಕರಣದ ಸಂಬಂಧ 6 ಮಂದಿಯನ್ನು ಬಂಧಿಸಿದ್ದರು. ನಿನ್ನೆ ರಾತ್ರಿ ಮತ್ತು ಇಂದು ಒಟ್ಟು 8 ಮಂದಿಯನ್ನು ಬಂದಿಸಿದ್ದು, ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಈ ಪೈಕಿ ಹಲವು ಮಂದಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ ಒಟ್ಟು 36 ಲಕ್ಷ ರೂ. ನಗದು ಹಣವನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ಪೈಕಿ ಕೆಲವರು ಅಭ್ಯರ್ಥಿಗಳಾಗಿರುವುದು ವಿಶೇಷ.

kpsc fda leak

ನಕಲಿ ಚೆಕ್‌: ಆರೋಪಿಗಳು ಪ್ರಶ್ನೆ ಪತ್ರಿಕೆ ಮಾರಾಟಕ್ಕೆ 10 ಲಕ್ಷ ರೂ. ದರ ನಿಗದಿ ಮಾಡಿದ್ದರು. ಆರೋಪಿಗಳ ಪೈಕಿ ಹಣ ನೀಡಲು ಸಾಧ್ಯವಾಗದವರು ಖಾಲಿ ಚೆಕ್‌ಗಳನ್ನು ನೀಡಿದ್ದರು. ಈಗ ಖಾಲಿ ಚೆಕ್‌ಗಳನ್ನು ನೀಡಿದವರ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗುತ್ತಿದ್ದಾರೆ.

ಎಫ್‌ಡಿಎ ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ಕೆಪಿಎಸ್‌ಸಿ ಮೇಲಿದೆ. ಪ್ರಶ್ನೆಪತ್ರಿಕೆ ಸಿದ್ಧಗೊಂಡು, ಪ್ರಿಂಟ್‌ ಮಾಡಿದ ಬಳಿಕ ಪರೀಕ್ಷೆಯ ಹಿಂದಿನ ದಿನ ಜಿಲ್ಲೆಗಳ ಖಜಾನೆಗೆ ಸಾಗಿಸಲಾಗುತ್ತದೆ. ಬಹಳ ರಹಸ್ಯವಾಗಿ ಇರಬೇಕಾದ ಪ್ರಶ್ನೆಗಳು ಆರೋಪಿಗಳಿಗೆ ಸಿಕ್ಕಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

TAGGED:bengaluruccbexamfdaKPSCQuestion Paerಎಫ್‌ಡಿಎ ಪರೀಕ್ಷೆಎಸ್‍ಡಿಎಕೆಪಿಎಸ್‍ಸಿಪ್ರಶ್ನೆಪತ್ರಿಕೆ
Share This Article
Facebook Whatsapp Whatsapp Telegram

Cinema Updates

fish venkat
ಕಿಡ್ನಿ ವೈಫಲ್ಯದಿಂದ ಖ್ಯಾತ ಖಳನಟ ಫಿಶ್ ವೆಂಕಟ್‌ ನಿಧನ
Cinema Latest South cinema Top Stories
Akshay Kumar
ರಿಯಲ್ ಹೀರೋ ಅಕ್ಷಯ್‌ಕುಮಾರ್ ಮಾಡಿದ ಕಾರ್ಯ ಎಲ್ಲರಿಗೂ ಮಾದರಿ
Bollywood Cinema Latest Top Stories
jayam ravi
ಸಿಡಿದೆದ್ದ ಜಯಂ ರವಿ: ಪರಿಹಾರಕ್ಕಾಗಿ 9 ಕೋಟಿ ಬೇಡಿಕೆ
Cinema Latest South cinema Top Stories
Darshan 3
ಸುಪ್ರೀಂ ಟೆನ್ಶನ್‌ ನಡ್ವೆಯೂ ʻಡೆವಿಲ್ʼ ಸಂಭ್ರಮಕ್ಕೆ ಸಜ್ಜಾದ ಡಿಬಾಸ್‌ ಫ್ಯಾನ್ಸ್
Cinema Latest Sandalwood Top Stories
Pavithra Gowda
ಫೋಟೋಶೂಟ್ ಮೂಡ್‌ನಲ್ಲಿ ಪವಿತ್ರಾ ಗೌಡ
Cinema Latest Top Stories

You Might Also Like

POCSO Special Court
Crime

ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

Public TV
By Public TV
19 minutes ago
gujarat cops son
Crime

150 ಕಿಮೀ ಸ್ಪೀಡಲ್ಲಿ ಕಾರು ಚಾಲನೆ – ASI ಪುತ್ರನ ರೇಸ್‌ ಚಟಕ್ಕೆ ಇಬ್ಬರು ಪಾದಚಾರಿಗಳು ಬಲಿ

Public TV
By Public TV
39 minutes ago
basava jaya mruthyunjaya swamiji
Bagalkot

ಪಂಚಮಸಾಲಿ ಪೀಠಕ್ಕೆ ಹೊಸ ಶ್ರೀ? ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?

Public TV
By Public TV
54 minutes ago
Vibhu Bakhru
Bengaluru City

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ಪ್ರಮಾಣ ವಚನ ಸ್ವೀಕಾರ

Public TV
By Public TV
2 hours ago
male mahadeshwara 14
Chamarajanagar

ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

Public TV
By Public TV
2 hours ago
Vijayapura Locked by chain
Crime

ಹಣ ವಾಪಸ್ ಕೊಡದಿದ್ದಕ್ಕೆ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ದರ್ಪ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?