Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಾಲಗಾರರ ಕಿರುಕುಳದಿಂದ ಬೇಸತ್ತು ಫ್ಯಾನಿಗೆ ನೇಣು ಬಿಗಿದುಕೊಂಡ ಯುವಕ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಸಾಲಗಾರರ ಕಿರುಕುಳದಿಂದ ಬೇಸತ್ತು ಫ್ಯಾನಿಗೆ ನೇಣು ಬಿಗಿದುಕೊಂಡ ಯುವಕ!

Crime

ಸಾಲಗಾರರ ಕಿರುಕುಳದಿಂದ ಬೇಸತ್ತು ಫ್ಯಾನಿಗೆ ನೇಣು ಬಿಗಿದುಕೊಂಡ ಯುವಕ!

Public TV
Last updated: January 11, 2021 11:35 am
Public TV
Share
3 Min Read
HARISH
SHARE

– ಆನ್‍ಲೈನ್ ಮೂಲಕ ಸಾಲ ಮಾಡಿದ್ದ ಹರೀಶ್

ನವದೆಹಲಿ: ಸಾಲ ಮರುಪಾವತಿಸುವಂತೆ ಕಿರಿಕುಳ ನೀಡಿದ್ದರಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ ದ್ವಾರಕಾ ಪ್ರದೇಶದಲ್ಲಿ ನಡೆದಿದೆ.

ಮೃತ ಯುವಕನನ್ನು ಹರೀಶ್(25) ಎಂದು ಗುರುತಿಸಲಾಗಿದೆ. ಈತ ಮನೆಯೊಳಗಡೆ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Money

ಹರೀಶ್ ಆ್ಯಪ್ ಮೂಲಕ ಸಾಲ ಪಡೆದುಕೊಂಡಿದ್ದನು. ಅದರಲ್ಲಿ ಸ್ವಲ್ಪ ಸಾಲ ಮರುಪಾವತಿ ಮಾಡಲು ಬಾಕಿ ಉಳಿದಿತ್ತು. ಆದರೆ ಈ ಹಣವನನ್ನು ವಾಪಸ್ ಮಾಡುವಂತೆ ಹರೀಶ್ ಗೆ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಮನನೊಂದ ಹರೀಶ್ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ.

ಅಜ್ಜಿ ಅಂಗಡಿಗೆ ಹೋಗಿ ಹಾಲು ತೆಗೆದುಕೊಂಡು ಮನೆಗೆ ವಾಪಸ್ಸಾದಾಗ ಹರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಎಂದಿನಂತೆ ಹಾಲು ತೆಗೆದುಕೊಂಡು ಬಂದು ಅಜ್ಜಿ ಮನೆ ಬಾಗಿಲು ಬಡಿದಿದ್ದಾರೆ. ಆದರೆ ಮನೆಯಲ್ಲಿಯೇ ಇದ್ದ ಹರೀಶ್ ಒಳಗಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಗಾಬರಿಗೊಂಡ ಅಜ್ಜಿ ಮನೆ ಕಿಟಿಕಿಯಿಂದ ಒಳಗಡೆ ಇಣುಕಿದ್ದಾರೆ. ಈ ವೇಳೆ ಹರೀಶ್ ಫ್ಯಾನಿಗೆ ನೇಣು ಬಿಗಿದುಕೊಳ್ಳುತ್ತಿದ್ದನು. ಕೂಡಲೇ ಅಜ್ಜಿ ಸ್ಥಳೀಯ ನಿವಾಸಿಗಳನ್ನು ಕೂಗಿ ಕರೆದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ನೆರೆಮನೆಯವರು, ಹರೀಶ್ ನನ್ನು ಕುಣಿಕೆಯಿಂದ ಬಿಡಿಸಿ ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಹರೀಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

harish 1

ಇತ್ತ ಘಟನೆ ನಡೆದ ತಕ್ಷಣ ಪೊಲೀಸರಿಗೆ ಕೂಡ ಮಾಹಿತಿ ರವಾನಿಸಲಾಯಿತು. ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ದೌಡಾಯಿಸಿ ಕುಟುಂಬದ ಸದ್ಯರ ಹೇಳಿಕೆಗಳನ್ನು ಪಡೆದು ಅಸಹಜ ಸಾವು ಎಂದು ಪರಿಗಣಿಸಿ, ತನಿಖೆ ಆರಂಭಿಸಿತು.

ನವೆಂಬರ್ 25ರಂದು ಹರೀಶ್ ಗೆ ಹಲವಾರು ನಂಬರ್ ಗಳಿಂದ ಕರೆಗಳ ಮೇಲೆ ಕರೆಗಳು ಬರುತ್ತಿದ್ದವು. ಹರೀಶ್ 6 ಸಾವಿರ ಸಾಲ ಮಾಡಿದ್ದು, ಅದರಲ್ಲಿ ಮೂರು ಸಾವಿರ ವಾಪಸ್ ಹಿಂದಿರುಗಿಸಿರಲಿಲ್ಲ ಎಂದು ಹರೀಶ್ ಸಹೋದರಿ ಸೋಮ ಹೇಳಿದ್ದಾರೆ ಅಂತ ದ್ವಾರಕಾ ಡಿಸಿಪಿ ಸಂತೋಷ್ ಮೀನಾ ತಿಳಿಸಿದ್ದಾರೆ.

Money 1 1

ಹರೀಶ್ ಆತ್ಮಹತ್ಯೆಗೆ ಶರಣಾಗುವ ದಿನ ಬೆಳಗ್ಗೆ ಸಹೋದರಿ ಆತನಿಗೆ ಕರೆ ಮಾಡಿ ಮಾತನಾಡಿದ್ದರು. ಅಲ್ಲದೆ ಭೇಟಿ ಕೂಡ ಮಾಡಿದ್ದರು. ಹರೀಶ್ ಎಂದಿನಂತೆ ಅಂದು ಕೂಡ ಅಂಗಡಿಗೆ ಹೋಗಿದ್ದನು. ಉಳಿದ ದಿನಗಳಲ್ಲಿ ಸಂಜೆ ತಡವಾಗಿ ಬರುತ್ತಿದ್ದ ಆತ ಅಂದು ಮಾತ್ರ ಕೇವಲ ಒಂದೇ ಗಂಟೆಯಲ್ಲಿ ಮನೆಗೆ ವಾಪಸ್ಸಾಗಿದ್ದನು. ಈ ವೇಳೆ ಏನಿವತ್ತು ಬೇಗ ಬಂದಿದ್ದೀಯಾ ಅಂತ ಕೇಳಿದೆ. ಆತ ಏನೂ ಹೇಳದೆ ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡನು.

ಇದಾದ ಬಳಿಕ ಸಹೋದರಿ ಆಫೀಸಿಗೆ ತೆರಳಿದರು. ಅದೇ ದಿನ ಸಂಜೆ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹರೀಶ್ ಸಾಲ ಮರುಪಾವತಿಸದಿರುವ ಬಗ್ಗೆ ಅನೇಕ ಸಂಬಂಧಿಕರು ಕೂಡ ದೂರವಾಣಿ ಕರೆಗಳ ಮೂಲಕ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ. ವಾಸ್ತವವಾಗಿ ಹೃಈಸ್ ಆನ್ ಲೈನ್ ಮೂಲಕ ಸಾಲ ಪಡೆದಿದ್ದಾನೋ, ಇಲ್ಲವೋ ಎಂಬುದು ಕುಟುಂಬದ ಸದಸ್ಯರಿಗೆ ತಿಳಿಯುವುದಕ್ಕೂ ಮುನ್ನವೇ ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

harish 2

ವಾಟ್ಸಪ್ ಗ್ರೂಪ್ ಗೆ ಹರೀಶ್ ನಂದಕಿಶೋರ್ ಫ್ರಾಡ್ ಎಂದು ಹೆಸರಿಡಲಾಗಿತ್ತು. ಈ ಗ್ರೂಪಲ್ಲಿ ಹರೀಶ್ ನ ಕೆಲ ಸಂಬಂಧಿಕರನ್ನು ಕೂಡ ಸೇರಿಸಲಾಗಿತ್ತು. ಇಷ್ಟು ಮಾತ್ರವಲ್ಲದೆ ಇನ್ನೂ ಕೆಲ ಸಂಬಂಧಿಕರನ್ನು ಸೇರಿಸುವುದಾಗಿ ಬೆದರಿಕೆ ಕೂಡ ಹಾಕಲಾಗಿತ್ತು. ಇದರಿಂದ ಬೇಸತ್ತು ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಹರೀಶ್ ಸಾವಿನ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಸಾಲ ಪಡೆದಿರುವ ಬಗ್ಗೆ ಮಾಹಿತಿ ಇದ್ದು, ಈ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಒಟ್ಟಿನಲ್ಲಿ ಆನ್ ಲೈನ್ ಮೂಲಕ ಸಾಲ ಪಡೆಯುವುದನ್ನು ತಪ್ಪಿಸಬೇಕು ಎಂದು ಸೈಬರ್ ತಜ್ಞರು ಹೇಳಿದ್ದಾರೆ.

Money 2

TAGGED:harishnewdelhiPublic TVsuicideಆತ್ಮಹತ್ಯೆನವದೆಹಲಿಪಬ್ಲಿಕ್ ಟಿವಿಹರೀಶ್
Share This Article
Facebook Whatsapp Whatsapp Telegram

Cinema news

aindrita ray garbage issue
ಕಸದ ಸಮಸ್ಯೆಗೆ ನಟಿ ಐಂದ್ರಿತಾ ರೈ ಬೇಸರ – ಜಿಬಿಎಗೂ ಕರೆ ಮಾಡಿದ್ರೂ ನೋ ರೆಸ್ಪಾನ್ಸ್
Cinema Latest Sandalwood Top Stories
Rachita Ram 3
ಲ್ಯಾಂಡ್ ಲಾರ್ಡ್ ಚಿತ್ರದ `ನಿಂಗವ್ವ ನಿಂಗವ್ವ’ ಸಾಂಗ್ ರಿಲೀಸ್
Cinema Latest Sandalwood Top Stories
Darshan Pavithra
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಭೇಟಿಗೆ ಪವಿತ್ರಗೌಡ ಶತಪ್ರಯತ್ನ – ನಯವಾಗೇ ನಿರಾಕರಿಸಿದ ದರ್ಶನ್!
Bengaluru City Cinema Crime Latest Top Stories
Nagachaitanya Shobitha Wedding
ಸಮಂತಾಗೂ ಮುನ್ನ ಗುಡ್‌ನ್ಯೂಸ್ ಕೊಡಲು ಸಜ್ಜಾದ್ರಾ ಮಾಜಿ ಪತಿ?
Cinema Latest South cinema Top Stories

You Might Also Like

DK Shivakumar 1
Belgaum

ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿರೋದ್ರಲ್ಲಿ, ಎಲ್ಲ ಸೇರಿರೋದ್ರಲ್ಲಿ ತಪ್ಪೇನಿದೆ: ಡಿಕೆಶಿ ಮರುಪ್ರಶ್ನೆ

Public TV
By Public TV
2 minutes ago
Urea
Bengaluru City

ಬೆಂಗಳೂರಲ್ಲಿ ಜಪ್ತಿಯಾದ 1,90,000 ಕೆಜಿ ಯೂರಿಯಾ ಕೇರಳದ್ದಲ್ಲ, ಕರ್ನಾಟಕದ್ದೇ – ವರದಿ ಹೇಳೋದೇನು?

Public TV
By Public TV
36 minutes ago
donald trump 1
Latest

ಬ್ರೌನ್ ವಿವಿ, MIT ಗುಂಡಿನ ದಾಳಿ ಬೆನ್ನಲ್ಲೇ ಗ್ರೀನ್ ಕಾರ್ಡ್ ಲಾಟರಿ ಸ್ಥಗಿತಗೊಳಿಸಿದ ಟ್ರಂಪ್‌

Public TV
By Public TV
55 minutes ago
Delhi Man Shot Dead Over Family Fight 69 Bullets Found Inside Body
Crime

ಎರಡು ಕುಟುಂಬಗಳ ನಡುವೆ ಕಲಹ – ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ, ಮೃತದೇಹದಲ್ಲಿ 69 ಬುಲೆಟ್ ಪತ್ತೆ

Public TV
By Public TV
57 minutes ago
DK Shivakumar and siddaramaiah 2
Belgaum

2.5 ವರ್ಷ ಅಂತ ಹೇಳೇ ಇಲ್ಲ, 5 ವರ್ಷಕ್ಕೆ ಆಯ್ಕೆ ಆಗಿದ್ದೇನೆ – ಹೈಕಮಾಂಡ್‌ ನನ್ನ ಪರ ಇದೆ: ಸಿದ್ದರಾಮಯ್ಯ

Public TV
By Public TV
1 hour ago
tiger murder case bail
Chamarajanagar

ಮಲೆ ಮಹದೇಶ್ವರ ವನ್ಯಧಾಮದಲ್ಲಿ ದೈತ್ಯ ಹುಲಿ ಹತ್ಯೆ ಕೇಸ್‌ – ಆರೋಪಿಗಳಿಗೆ ಜಾಮೀನು ಮಂಜೂರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?