ಕಾಂಗ್ರೆಸ್ ನಾಯಕರಿಗೆ ಈಗ ಜ್ಞಾನೋದಯ ಆಗಿದೆಯಾ?- ಡಿಕೆಶಿಗೆ ಎಚ್‍ಡಿಕೆ ಪರೋಕ್ಷ ಟಾಂಗ್

Public TV
2 Min Read
DKSHI HDK

– ಜಾತಿ ರಾಜಕಾರಣವನ್ನು ಕಾಂಗ್ರೆಸ್‍ನವರು ಗುತ್ತಿಗೆ ಪಡೆದಿದ್ದಾರಾ?

ಬೆಂಗಳೂರು: ಆರ್.ಆರ್.ನಗರ ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಕುರಿತಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸಭೆಯನ್ನು ಇಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ನಡೆಸಿ, ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ನಡೆಸಿದರು. ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

HDK

ಜೆಡಿಎಸ್ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ, ಕ್ಷೇತ್ರದಲ್ಲಿ ಎಫ್‍ಐಆರ್ ದಾಖಲು ಮಾಡುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಆದರೆ ಅವರಿಗೆ ಈಗ ಜ್ಞಾನೋದಯ ಆಗಿದೆಯಾ? ಈ ಸಂಸ್ಕೃತಿ ಯಾವಾಗ ಆರಂಭವಾಯಿತು ಎಂತಾ ಎಲ್ಲರಿಗೂ ಗೊತ್ತಿದೆ. ಇವತ್ತು ಜಾತಿ ರಾಜಕಾರಣ ಮಾಡಲು ಕಾಂಗ್ರೆಸ್ ನಾಯಕರು ಹೊರಟಿದ್ದಾರೆ. ಜಾತಿ ರಾಜಕಾರಣವನ್ನು ಇವರು ಗುತ್ತಿಗೆ ಪಡೆದಿದ್ದಾರಾ? ಅಧಿಕಾರ ಇದ್ದಾಗ ಕ್ರಮ ತೆಗೆದುಕೊಳ್ಳದೆ ಈಗ ನಮ್ಮ ಜಾತಿಯವರಿಗೆ ಕಿರುಕುಳ ಅಂತಾರೆ ಎಂದು ಕಿಡಿಕಾರಿದರು.

DK SHIVAKUMAr 2

ಕಾಂಗ್ರೆಸ್ ನಾಯಕರು ನೇರ ರಾಜಕಾರಣ ಮಾಡಿ, ತಿರುಚಿ ರಾಜಕಾರಣ ಮಾಡಬೇಡಿ. ಎಪ್.ಐ.ಆರ್ ದಬ್ಬಾಳಿಕೆ, ಅಧಿಕಾರಿ ಸಸ್ಪೆಂಡ್ ಮಾಡುವವರೆಗೂ ಬಿಡಲ್ಲ ಎಂದು ಹೇಳುತ್ತಿದ್ದೀರಿ. ಆದರೆ ಇಲ್ಲಿರುವ ಜನರೇನು ದಡ್ಡರಲ್ಲಾ, ಚುನಾವಣೆ ಇದೆ. ಜನ ಇದೆಲ್ಲವನ್ನು ಯೋಚನೆ ಮಾಡುತ್ತಾರೆ. ಆದರೆ ಈಗ ಅವರು ಯಾಕೆ ಈ ಮಾತು ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಈ ಸಂಸ್ಕೃತಿ ಮೊದಲಿನಿಂದಲೂ ಈ ರೀತಿ ಬಂದಿತ್ತಾ? ಈ ಸಂಸ್ಕೃತಿ ಬರಲು ಪ್ರೇರಕರು ಯಾರು? ಆರ್.ಆರ್ ನಗರದಲ್ಲಿ ಅಧಿಕಾರಿಗಳ ದುರುಪಯೋಗ ಮಾಡಿಕೊಂಡು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಆಗಿದೆ ಅಂದರೆ ಹೇಗೆ? ಈ ರೀತಿಯ ವಾತಾವರಣ ಯಾರಿಂದ ಸೃಷ್ಟಿ ಆಯ್ತು ಎಂಬುದನ್ನು ಸ್ಪಷ್ಟ ಪಡಿಸಲಿ. ಇದನ್ನು ಸ್ವಲ್ಪ ಜನತೆ ಮುಂದೆ ಇಡಬೇಕು ಎಂದು ಆಗ್ರಹಿಸಿದರು.

RR Nagar

ಅಧಿಕಾರಿಗಳಿಗೆ ಬೆದರಿಸೋ ಸಂಸ್ಕೃತಿ, ಕಾರ್ಯಕರ್ತರ ವಿರುದ್ಧ ಎಫ್‍ಐಆರ್ ಹಾಕೋ ಸಂಸ್ಕೃತಿ ಬಂದಿದ್ದೇ ಕಾಂಗ್ರೆಸ್ ನಾಯಕರಿಂದ. ಇವಾಗ ಜಾತಿ ಹೆಸರಲ್ಲಿ ರಾಜಕಾರಣ ಮಾಡಲು ಹೊರಟಿದ್ದೀರಿ. ಹಿಂದೆ ಜಾತಿ ಮೇಲೆ ದಬ್ಬಾಳಿಕೆ ಆದಾಗ ಯಾಕೆ ಮಾತಾಡಿಲ್ಲ? ಪ್ರಾರಂಭಿಕ ಹಂತದಲ್ಲಿ ಇದನ್ನು ಚಿವುಟಿದ್ದರೆ ಇವತ್ತು ಅದು ಬರುತ್ತಿರಲಿಲ್ಲ. ಗಾಜಿನ ಮನೆಯಲ್ಲಿ ಕುಳಿತವರು ಯಾರು? ಗಾಜಿನ ಮನೆ ಮೇಲೆ ಕಲ್ಲು ಎಸೆಯುವ ಕೆಲಸ ಮಾಡಿದವರು ಯಾರು ಎಂದು ಪ್ರಶ್ನಿಸುವ ಮೂಲಕ ಡಿಕೆ ಶಿವಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡದೇ ಪರೋಕ್ಷವಾಗಿ ಎಚ್‍ಡಿಕೆ ತಿರುಗೇಟು ನೀಡಿದರು.

hanumanthrayappa and kusuma kppc office

ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಆಗುತ್ತಿದಂತೆ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದ ಡಿಕೆ ಶಿವಕುಮಾರ್ ಅವರು, ಪಕ್ಷದ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಿದ್ದರು. ಈ ವೇಳೆ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಅನಗತ್ಯವಾಗಿ ಎಫ್‍ಐಆರ್ ದಾಖಲು ಮಾಡಲಾಗುತ್ತಿದೆ. ಆದರೆ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಅಧಿಕಾರಿಗಳು ದಬ್ಬಾಳಿಕೆ ಮಾಡಿದರೇ ಸಹಿಸಿಕೊಂಡು ಇರುವುದಿಲ್ಲ. ಕಾರ್ಯಕರ್ತರಿಗೆ ಕಿರುಕುಳ ನೀಡುವ ಅಧಿಕಾರಿಗಳ ಸಸ್ಪೆಂಡ್ ಮಾಡುವವರೆಗೂ ಬಿಡಲ್ಲ ಎಂದು ಬಹಿರಂಗ ಎಚ್ಚರಿಕೆಯನ್ನು ಡಿಕೆಶಿ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *