ತಿರುವನಂತಪುರಂ: ವಿವಾದಿತ ಭಾಷಣಗಳ ಮೂಲಕವೇ ಗುರುತಿಸಿಕೊಂಡಿರುವ ಕೇರಳದ ಮುಸ್ಲಿಂ ಧರ್ಮಗುರು ಮುಜಾಹಿದ್ ಬಲುಸ್ಸೆರಿ, ಇದೀಗ ಮತ್ತೆ ಅಂತಹದ್ದೇ ವಿವಾದಿತ ಹೇಳಿಕೆ ನೀಡುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮುಂದಿನ 10 ವರ್ಷದೊಳಗೆ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿಸುವುದಾಗಿ ಹೇಳಿದ್ದಾರೆ.
ಈ ಕುರಿತು ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋದಲ್ಲಿ ಮುಸ್ಲಿ ಧರ್ಮ ಪ್ರಚಾರಕ ಮುಜಾಹಿದ್ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಜನರಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಕೇರಳಕ್ಕೆ ‘ಕ್ಯಾಲಿಫೇಟ್’ ಎಂದು ಹೆಸರಿಡುವುದಾಗಿ ತಿಳಿಸಿದ್ದಾನೆ. ಕೇರಳವನ್ನು ಕ್ಯಾಲಿಫೇಟ್ ಆಗಿ ಪರಿವರ್ತಿಸುತ್ತೇವೆ. ಕೇರಳದ ಎಲ್ಲ ಮುಸ್ಲಿಮರನ್ನು ಶುಕ್ರವಾರದಂದು ಮುಜಾಹಿದ್ ಮಸೀದಿಗಳಿಗೆ ಕಳುಹಿಸಿ. 10 ವರ್ಷದೊಳಗೆ ಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಬಹುದು ಎಂದು ಹೇಳಿದ್ದಾರೆ.
ನಮ್ಮದು ಇಲ್ಲಿ ಕೆಲಸವಿದೆ. ಕೇರಳದ ಇತರ ಮುಸ್ಲಿಂ ಧಾರ್ಮಿಕ ಶಾಖೆಗಳನ್ನು ಮುಚ್ಚಿ ಮುಜಾಹಿದ್ಗಳ ಅಡಿಯಲ್ಲಿ ತಂದರೆ ಇನ್ನು 10 ವರ್ಷಗಳಲ್ಲಿ ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸಬಹುದು. ಒಬ್ಬ ಮನುಷ್ಯ ನೈತಿಕವಾಗಿ ಪರಿಪೂರ್ಣನಾಗಬಹುದು. ಆದರೆ ಇತರೆ ದೇವರನ್ನು ಆರಾಧಿಸಿದರೆ ಆತ ಸ್ವರ್ಗವನ್ನು ನಿರಾಕರಿಸುತ್ತಾನೆ.
ಗುರುವಾಯೂರಪ್ಪ ನನ್ನನ್ನು ಉಳಿಸಿ ಎಂಬುದು ಶಿರ್ಕ್ ಮತ್ತು ವ್ಯಭಿಚಾರ, ಸಲಿಂಗಕಾಮ ಅಥವಾ ಬಡ್ಡಿಗಾಗಿ ಸಾಲ ನೀಡುವುದಕ್ಕಿಂತ ದೊಡ್ಡ ಪಾಪ. ಇದರಿಂದಾಗಿ ವ್ಯಕ್ತಿ ನರಕಕ್ಕೆ ಹೋಗುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಅಲ್ಲದೆ ಈ ಹಿಂದಿನ ವಿಡಿಯೋದಲ್ಲಿ ಸಹ ಇದೇ ರೀತಿ ವಿವಾದಾತ್ಮವಾಗಿ ಮಾತನಾಡಿರುವ ಮುಜಾಹಿದ್, ಹಿಂದೂ ದೇವಸ್ಥಾನಗಳನ್ನು ವೇಶ್ಯಾಗೃಹಕ್ಕೆ ಹೋಲಿಸಿದ್ದಾರೆ. ನೀವು ಹಿಂದೂ ದೇವಸ್ಥಾನ ಹಾಗೂ ಹಬ್ಬಗಳಿಗೆ ದಾನ ನೀಡಿದರೆ ಶಿರ್ಕ್ನ್ನು ಪ್ರೋತ್ಸಾಹಿಸಿದಂತೆ. ಇದರು ಅತ್ಯಂತ ದೊಡ್ಡ ಪಾಪ. ನೀವು ವೇಶ್ಯಾಗೃಹ ಅಥವಾ ಪಬ್ಗೆ ಹಣವನ್ನು ದಾನ ನೀಡುವುದಿಲ್ಲ ತಾನೇ ಎಂದು ಮುಜಾಹಿದ್ ತಮ್ಮ ವಿಡಿಯೋದಲ್ಲಿ ಪ್ರಶ್ನಿಸಿದ್ದರು.