Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Latest

ಭಾರತದ ಸ್ಥಳೀಯ ದರೋಡೆಕೋರರನ್ನು ಬಳಸಿ ಪಾಕಿಸ್ತಾನದಿಂದ ದಾಳಿಗೆ ಸಂಚು

Public TV
Last updated: August 24, 2020 7:30 pm
Public TV
Share
2 Min Read
terrorist
SHARE

– ಸ್ಥಳೀಯ ಯುವಕರನ್ನೇ ಬಳಸಿ ದಾಳಿಗೆ ಸ್ಕೆಚ್
– ದರೋಡೆಕೋರರಿಗೆ ಟಾಸ್ಕ್ ನೀಡಿ ಕಾರ್ಯಸಾಧನೆ

ನವದೆಹಲಿ: ಎಷ್ಟು ಪ್ಲಾನ್ ಮಾಡಿದರೂ ಭಾರತದಲ್ಲಿ ದಾಳಿ ನಡೆಸಲು ಸಾಧ್ಯವಾಗದೆ ಪಾಪಿ ಪಾಕಿಸ್ತಾನದ ಹತಾಶೆಗೊಂಡಿದೆ. ಹೀಗಾಗಿ ಐಎಸ್‍ಐ(ಇಂಟರ್ ಸರ್ವಿಸ್ ಇಂಟಲಿಜೆನ್ಸ್) ಹಾಗೂ ಇತರ ಸಂಘಟನೆಗಳ ಮೂಲಕ ಇದೀಗ ಭಾರತದ ಸ್ಥಳೀಯ ಯುವಕರನ್ನೇ ಬಳಸಿಕೊಂಡು ದಾಳಿ ನಡೆಸಲು ಸಂಚು ರೂಪಿಸುತ್ತಿವೆ ಎಂಬ ಭಯಾನಕ ಮಾಹಿತಿ ಬಹಿರಂಗವಾಗಿದೆ.

isi

ಇದು ಉಗ್ರ ಸಂಘಟನೆಗಳು ಹಾಗೂ ಪಾಕಿಸ್ತಾನದ ಇತ್ತೀಚಿನ ಟ್ರೆಂಡ್ ಆಗಿದ್ದು, ಭಾರತದಲ್ಲಿನ ಗುಪ್ತಚರ ಸಂಸ್ಥೆಗಳು ಹಾಗೂ ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆದು ಕೃತ್ಯ ಎಸಗಲು ಸಂಚು ರೂಪಿಸಲಾಗುತ್ತಿದೆ. ಭಾರತದಲ್ಲಿ ಹೆಚ್ಚಿನ ಭದ್ರತೆ ಇರುವ ಹಿನ್ನೆಲೆ ಪಾಕಿಸ್ತಾನ ಐಎಸ್‍ಐ ಹಾಗೂ ಇತರ ಉಗ್ರ ಸಂಘಟನೆಗಳು ನೇರವಾಗಿ ದಾಳಿ ನಡೆಸಲು ಆಗುತ್ತಿಲ್ಲ. ಹೀಗಾಗಿ ಭಾರತದಲ್ಲಿ ಯಾವುದೇ ದಾಳಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಸ್ಥಳೀಯ ಯುವಕರನ್ನೇ ಬಳಸಿಕೊಂಡು ಅವರಿಗೇ ಟಾಸ್ಟ್ ನೀಡುತ್ತಿದೆ ಎಂಬ ಭಯಾನಕ ಅಂಶ ಇದೀಗ ಹೊರ ಬಿದ್ದಿದೆ.

terrorists

ಇತ್ತೀಚೆಗೆ ಛತ್ತಿಸ್‍ಗಢದ ಇಂಟಲಿಜೆನ್ಸ್ ಯುನಿಟ್ ಈ ಕುರಿತು ಫುಲ್ ಅಲರ್ಟ್ ಆಗಿದ್ದು, ಟೆರರಿಸ್ಟ್‍ಗಳು ಹಾಗೂ ಹೆಚ್ಚು ಪ್ರಭಾವ, ಸ್ಥಳೀಯ ಸಂಪರ್ಕ ಹೊಂದಿರುವ ದರೋಡೆಕೋರರ ಕುರಿತು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಈ ಕುರಿತು ಕೆಲ ದರೋಡೆಕೋರರ ಹೆಸರನ್ನು ಸಹ ಗುಪ್ತಚರ ದಳ ಉಲ್ಲೇಖಿಸಿದೆ. ಐಎಸ್‍ಐ ಮತ್ತು ಭಯೋತ್ಪಾದಕ ಸಂಘಟನೆಗಳು ಈ ದರೋಡೆಕೋರರೊಂದಿಗೆ ಸಂಪರ್ಕದಲ್ಲಿವೆ. ಅಲ್ಲದೆ ಭಾರತದಲ್ಲಿ ದಾಳಿ ನಡೆಸಲು ಅವರಿಗೆ ಟಾಸ್ಕ್ ನೀಡಲಾಗುತ್ತಿದೆ ಎಂದು ಗುಪ್ತಚರ ದಳ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರಿಗೆ ಎಚ್ಚರಿಸಿದೆ. ಈ ಪೈಕಿ ಕೆಲ ದರೋಡೆಕೋರರನ್ನು ಬಂಧಿಸಲಾಗಿದ್ದು, ಇನ್ನೂ ಕೆಲವರು ಪರಾರಿಯಾಗಿದ್ದಾರೆ ಎಂದು ತಿಳಿಸಿದೆ.

841808 let terrorist baramula

ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ, ಸ್ಥಳೀಯ ದರೋಡೆಕೋರರನ್ನು ಐಎಸ್‍ಐ ಸಂಪರ್ಕಿಸಬಹುದು ಅಥವಾ ಈಗಾಗಲೇ ಅವರ ಸಂಪರ್ಕದಲ್ಲಿರಬಹುದು. ಕೇಂದ್ರ ಗುಪ್ತಚರ ದಳದ ಪಂಜಾಬ್ ಘಟಕ ಕೆಲ ದಿನಗಳ ಹಿಂದೆಯೇ ಈ ಕುರಿತು ಎಚ್ಚರಿಕೆ ನೀಡಿದ್ದು, ಐಎಸ್‍ಐ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳು ಕೆಲ ನಾಯಕರನ್ನು ಟಾರ್ಗೆಟ್ ಮಾಡುವಂತೆ ಐವರು ದರೋಡೆಕೋರರಿಗೆ ಟಾಸ್ಕ್ ನೀಡಿದ್ದು, ಈ ಐವರಲ್ಲಿ ಇಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸಿದ್ದಾರೆ. ಉಳಿದ ಮೂವರನ್ನು ಪಂಜಾಬ್‍ನ ವಿವಿಧ ಜೈಲುಗಳಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ದರೋಡೆಕೋರರು ಹತ್ತಾರು ಕೊಲೆ, ದರೋಡೆ ಹಾಗೂ ಜೈಲುಗಳಲ್ಲಿದ್ದುಕೊಂಡೇ ಸಂಚು ರೂಪಿಸುತ್ತಿದ್ದಾರೆ. ಹೀಗಾಗಿ ಸ್ಥಳೀಯ ದರೋಡೆಕೋರರ ಚಲನವಲನಗಳ ಕುರಿತು ಕಣ್ಣಿಡುವಂತೆ ಸ್ಥಳೀಯ ಪೊಲೀಸರಿಗೆ ತಿಳಿಸಲಾಗಿದೆ. ಅವರು ಜೈಲಿನಲ್ಲಿದ್ದರೂ ನಿಗಾ ವಹಿಸಬೇಕೆಂದು ತಿಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

terrorists

ಈ ತಂತ್ರದ ಹಿಂದಿನ ಕಾರಣವೇನೆಂಬುದನ್ನು ಸಹ ಅಧಿಕಾರಿಗಳು ವಿವರಿಸಿದ್ದು, ಐಎಸ್‍ಐನ ಬೆನ್ನೆಲುಬಾಗಿದ್ದು ಅವರೇ ರಚಿಸಿದ ಸ್ಥಳೀಯ ಗುಂಪು. ಆದರೆ ಇತ್ತೀಚೆಗೆ ಬಹುತೇಕರು ಹೆದರಿಕೊಂಡು ಈ ಕೆಲಸ ಮಾಡುತ್ತಿಲ್ಲ. ಪೊಲೀಸರು ಕೊಲ್ಲುತ್ತಾರೆ ಎಂಬ ಭಯದಿಂದ ಇಂತಹ ಕೆಲಸ ಮಾಡುತ್ತಿಲ್ಲ. ಅಲ್ಲದೆ ಇಂತಹ ಸ್ಥಳೀಯ ಗುಂಪುಗಳನ್ನು ನಿಯಂತ್ರಿಸಲು ಯಾವುದೇ ಕಮಾಂಡರ್‍ಗಳು ಸಹ ಅವರ ಬಳಿ ಇಲ್ಲ. ಆದರೆ ಸ್ಥಳೀಯ ದರೋಡೆಕೋರರಾದರೆ ಸುಲಭವಾಗಿ ತಮಗೆ ಬೇಕಾದ ಪರಿಕರಗಳನ್ನು ಸಂಗ್ರಹಿಸಿ, ಸ್ಥಳೀಯ ಮಟ್ಟದಲ್ಲಿ ದಾಳಿ ನಡೆಸುತ್ತಾರೆ. ಹೀಗಾಗಿ ಭಯೋತ್ಪಾದಕ ಸಂಘಟನೆಗಳು ತಮ್ಮ ಕೃತ್ಯಕ್ಕಾಗಿ ಸ್ಥಳೀಯ ದರೋಡೆಕೋರರನ್ನು ಬಳಸಿಕೊಳ್ಳುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

TAGGED:gangstersintelligenceJammu and KashmirpolicePublic TVಗುಪ್ತಚರ ದಳಜಮ್ಮು ಕಾಶ್ಮೀರದರೋಡೆಕೋರರುಪಬ್ಲಿಕ್ ಟಿವಿಪೊಲೀಸರು
Share This Article
Facebook Whatsapp Whatsapp Telegram

Cinema Updates

shivarajkumar
ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ಕೊನೆಗೂ ಮೌನ ಮುರಿದ ಶಿವಣ್ಣ
9 hours ago
smriti Irani e1500383222701
ಮತ್ತೆ ಬಣ್ಣ ಹಚ್ಚಿದ ಸ್ಮೃತಿ ಇರಾನಿ – 12 ವರ್ಷಗಳ ನಂತರ ಸೀರಿಯಲ್‌ಗೆ ರೀ ಎಂಟ್ರಿ
11 hours ago
darshan 1
‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್
11 hours ago
disha patani 3
ಹಾಲಿವುಡ್‌ನತ್ತ ಹೊರಟ ಬಾಲಿವುಡ್ ಬೋಲ್ಡ್ ಬ್ಯೂಟಿ ದಿಶಾ ಪಟಾನಿ!
13 hours ago

You Might Also Like

Train
Bengaluru City

ಮಳೆ ಅಬ್ಬರ; 5 ತಿಂಗಳು ಬೆಂಗಳೂರು, ಮಂಗಳೂರು ರೈಲು ಸಂಚಾರ ಸ್ಥಗಿತ

Public TV
By Public TV
6 hours ago
D.K Shivakumar 2
Bengaluru City

ದ್ವೇಷ ಭಾಷಣ ಯಾರೇ ಮಾಡಿದ್ರೂ ಕಠಿಣ ಕ್ರಮ – ಸಿಎಂ ಸಿದ್ದರಾಮಯ್ಯ

Public TV
By Public TV
6 hours ago
mahesh joshi
Bengaluru City

ಮಹೇಶ್ ಜೋಶಿಗೆ ರಾಜ್ಯ ಸಚಿವ ಸ್ಥಾನಮಾನ ಸವಲತ್ತು ಹಿಂಪಡೆದ ಸರ್ಕಾರ

Public TV
By Public TV
6 hours ago
CDS Anil Chauhan
Latest

ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್‌ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?

Public TV
By Public TV
7 hours ago
MeghaPramod 2
Bengaluru City

ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್: ಮೇಘಾ ಪ್ರಮೋದ್

Public TV
By Public TV
7 hours ago
Saleem DGP KARNATAKA
Bengaluru City

ಮಂಡ್ಯ ಮಗು ಸಾವಿನ ಬಳಿಕ ಎಚ್ಚೆತ್ತ ಪೊಲೀಸ್‌ ಇಲಾಖೆ – ಕದ್ದು ಮುಚ್ಚಿ ಗಾಡಿ ಹಿಡಿಯದಂತೆ ಡಿಜಿ & ಐಜಿಪಿ ಆದೇಶ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?