ಬಿಲ್ವಪತ್ರೆ ಗಿಡನೆಟ್ಟು ರಾಮಮಂದಿರ ಶಿಲಾನ್ಯಾಸ ಸಂಭ್ರಮಿಸಿದ ಬಾಳ್ಕುದ್ರು ಸ್ವಾಮೀಜಿ

Public TV
1 Min Read
Balkdru Swamiji

-ಮನೆ ಮನೆಯಲ್ಲಿ ಗಿಡ ನೆಡುವ ಸಂಕಲ್ಪ

ಉಡುಪಿ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಭವ್ಯ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಶಿಲಾನ್ಯಾಸ ಕಾರ್ಯಕ್ರಮ ಮುಗಿದರು ಆನಂತರದ ಸಂಭ್ರಮಾಚರಣೆ ಕಾರ್ಯಕ್ರಮಗಳು ನಿರಂತರವಾಗಿವೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಕುದ್ರು ಮಠದಲ್ಲಿ ರಾಮಮಂದಿರ ಶಿಲಾನ್ಯಾಸ ಸಂಭ್ರಮ ಮುಂದುವರಿದಿದೆ. ಶ್ರೀ ಬಾಳ್ಕುದ್ರು ನೃಸಿಂಹಾಶ್ರಮ ಸ್ವಾಮೀಜಿ ಮಠದ ಆವರಣದಲ್ಲಿ ಬಿಲ್ವ ಪತ್ರೆ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಚರಿಸಿದರು. ಭಜರಂಗದಳದ ಕಾರ್ಯಕರ್ತರು ಮಠಕ್ಕೆ ಆಗಮಿಸಿ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದರು.

Balkdru Swamiji 1

ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಸ್ವಾಮೀಜಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ, ರಾಮಮಂದಿರ ಹಿಂದುಗಳ ಸಂಕೇತ. ಭರತ ಭೂಮಿಯಲ್ಲಿ ಶ್ರೀರಾಮಚಂದ್ರನಿಗೆ ಎಂದೋ ಮಂದಿರ ನಿರ್ಮಾಣ ಆಗಬೇಕಿತ್ತು. ಎಲ್ಲದಕ್ಕೂ ಒಂದು ಕಾಲ ಕೂಡಿ ಬರಬೇಕಿದೆ. ಮಂದಿರ ನಿರ್ಮಾಣದ ಶಿಲಾನ್ಯಾಸ ಪ್ರಧಾನಿಯವರಿಂದ ಇಂದು ನೆರವೇರಿದೆ. ವಿಶ್ವದ ಹಿಂದುಗಳು ಸಂಭ್ರಮಿಸುವ ಹೆಮ್ಮೆಪಡುವ ಕಾರ್ಯಕ್ರಮ ಇಂದು ನಡೆದಿದೆ ಎಂದರು.

ಭಜರಂಗದಳ ಮುಖಂಡರು ಕಾರ್ಯಕರ್ತರು ಮಠದ ಆವರಣದಲ್ಲಿ ಬಿಲ್ವ ಪತ್ರದ ಗಿಡ ನೆಟ್ಟರು. ಪ್ರತಿ ಮನೆಯಲ್ಲಿ ಗಿಡ ನೆಡುವ ಸಂಕಲ್ಪ ಮಾಡಲಾಯ್ತು.

Share This Article
Leave a Comment

Leave a Reply

Your email address will not be published. Required fields are marked *