ಅಯೋಧ್ಯೆಗೆ ಅಂದು ಹೇಳ್ದೆ ಹೋಗಿದ್ದೆ, ಇಂದು ಹೋಗಲ್ವಾ ಅಂದ್ರು ಅಪ್ಪ : ಸಿ.ಟಿ.ರವಿ

Public TV
3 Min Read
c t ravi 3

-“ಸೂಸೈಡ್ ಸ್ಕ್ವಾಡ್‍ಗೆ ಸೇರಿಸಿಕೊಳ್ಳಿ ಎಂದು ನಾನು-ಸುನಿಲ್ ಕೇಳಿದ್ವಿ”

ಚಿಕ್ಕಮಗಳೂರು: ಆವತ್ತು ದೋಬಿ ಅಂಗಡಿಯಲ್ಲಿದ್ದ ಬಟ್ಟೆಯನ್ನ ಹಾಗೇ ಬ್ಯಾಗಿಗೆ ತುಂಬಿಕೊಂಡು, ರಾಧಾಕೃಷ್ಣ ಕಾಮತ್ ಬಳಿ ಹಣ ಇಸ್ಕೊಂಡು ಹೇಳ್ದೆ-ಕೇಳ್ದೆ ಅಯೋಧ್ಯೆಗೆ ಹೋಗಿದ್ದಲ್ಲಾ ಇವತ್ತು ಹೋಗಲ್ವಾ ಎಂದು ಸಚಿವ ಸಿ.ಟಿ.ರವಿ ಅವರಿಗೆ ಅವರ ತಂದೆ ಪ್ರಶ್ನೆ ಮಾಡಿದ್ದಾರೆ. ಈ ವಿಷಯವನ್ನ ಸ್ವತಃ ಸಿ.ಟಿ.ರವಿಯವರೇ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

c t ravi 1

ಇಂದು ಅವರ ಮನೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕುರಿತಂತೆ ಮಾತನಾಡಿದ ಅವರು, ಅವತ್ತು ಅಪ್ಪನ ಬಳಿ ಹಣ ಕೇಳಿದ್ದರೆ ಹೋಗಲು ಬಿಡುತ್ತಿರಲಿಲ್ಲ ಎಂಬ ಭಯ ಇತ್ತು. ಅದಕ್ಕೆ ಅಪ್ಪನಿಗೆ ಹೇಳದೆ ರಾಧಾಕೃಷ್ಣ ಕಾಮತ್ ಬಳಿ ಹಣ ಪಡೆದು ಹೇಳ್ದೆ-ಕೇಳ್ದೆ ಹೋಗಿದ್ದೆ. ಈಗ ಅಪ್ಪ ಅವತ್ತು ಹೇಳ್ದೆ ಹೋಗಿದ್ದಲ್ಲಪ್ಪಾ, ಇವತ್ತು ಹೋಗಲ್ವ ಎಂದು ಕೇಳಿದ್ದಾರೆ ಎಂದರು. ಈಗ ಸಂದರ್ಭದ ಕಾರಣ ಹೋಗಲು ಆಗುತ್ತಿಲ್ಲ. ಆದರೆ ಮಂದಿರ ನಿರ್ಮಾಣದ ವೇಳೆಗೆ ಹೋಗೇ ಹೋಗ್ತೀನಿ ಎಂದರು. ಮಂದಿರ ನಿರ್ಮಾಣಕ್ಕೆ ನನ್ನ ಕೈಲಾದ ಸೇವೆಯನ್ನೂ ಮಾಡ್ತೀನಿ ಎಂದಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣದ ಬಳಿಕ ಕುಟುಂಬ ಸಮೇತ ಹಾಗೂ ಪರಿವಾರದ ಕಾರ್ಯಕರ್ತರ ಜೊತೆ ಹೋಗಿ ರಾಮನ ದರ್ಶನ ಪಡೆಯುತ್ತೇನೆ ಎಂದರು.

c t ravi 2

ಅವಶೇಷಗಳನ್ನ ಪಂಚೆಯಲ್ಲಿ ಕಟ್ಟಿಕೊಂಡಿದ್ದೆ: ಉಮಾಭಾರತಿ, ಅಡ್ವಾಣಿ ಭಾಷಣದ ವೇಳೆ ಎಲ್ಲರೂ ಕಳಂಕಿತ ಕಟ್ಟಡದತ್ತ ಕೂಗಿಕೊಂಡು ನೋಡುತ್ತಿದ್ದರು. ನಾಲ್ಕೈದು ಜನ ಗುಂಬಜ್ ಮೇಲೆ ಹತ್ತಿದ್ದರು. ಜನ ಆಕಡೆಯೇ ಓಡುತ್ತಿದ್ದರು. ನಾವು ಹೋಗಲು ಹೊರಟಾಗ ಕಾನ ರಾಮಸ್ವಾಮಿಯವರು ಬೇಡ ಎಂದು ತಡೆಯುತ್ತಿದ್ದರು. ನಾವು ಬಂದಿರೋ ಕೆಲಸವೇ ಬೇರೆ ಎಂದು ಅವರ ಮಾತನ್ನ ಧಿಕ್ಕರಿಸಿ ಹೋಗಿ ಕಳಂಕಿತ ಕಟ್ಟಡವನ್ನ ಉರುಳಿಸೋದ್ರಲ್ಲಿ ನಮ್ಮದ್ದು ಅಳಿಲು ಸೇವೆ ಇತ್ತು. ಅದೇ ಜೀವನದ ಸಾರ್ಥಕತೆಯ ಕ್ಷಣ ಎಂದರು. ಅವಶೇಷಗಳನ್ನ ಪಂಚೆಯಲ್ಲಿ ಕಟ್ಟಿಕೊಂಡಿದ್ದೆ. ಆದರೆ ಫೈಜಿಯಾಬಾದ್‍ಗೆ ಬರಬೇಕಾದ್ರೆ ಯಾರೂ ಏನನ್ನೂ ತೆಗೆದುಕೊಂಡು ಹೋಗಬಾರದೆಂಬ ಸೂಚನೆ ಮೇರೆಗೆ ಅವಶೇಷಗಳನ್ನ ಅಲ್ಲೇ ಬಿಟ್ಟು ಬಂದೆವು. ಡಿಸೆಂಬರ್ 6ರಂದು ವಿವಾದಿತ ಕಟ್ಟಡ ಧ್ವಂಸವಾಯ್ತು. ನಾವು 3ನೇ ತಾರೀಖಿನಂದೇ ಅಲ್ಲಿ ಇದ್ದೇವೆ ಎಂದರು. ಯಾರು ಯಾವ ಸಂಸ್ಕೃತಿಯ ನಾಶಕ್ಕೆ ಬಯಸಿದ್ರೋ ಆ ಸಂಸ್ಕೃತಿಯ ನಾಶ ಸಾಧ್ಯವಿಲ್ಲ. ನಮ್ಮದು ಮೃತ್ಯುಂಜಯ ಸಮಾಜ. ನಾವು ಯಾರ ನಾಶವನ್ನ ಬಯಸಲ್ಲ. ಹಾಗೇ ನಮ್ಮ ನಾಶವನ್ನ ಒಪ್ಪಿಕೊಳ್ಳುವರಲ್ಲ ಎಂಬ ಸಂದೇಶ ಕೊಟ್ಟೆವು ಎಂದರು.

c t ravi

ಐದು ಶತಮಾನಗಳ ಹೋರಾಟ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬ ಹೋರಾಟ ಸುಮಾರು ಐದು ಶತಮಾನಗಳದ್ದು. 1947ರ ನಂತರ ಹೋರಾಟದ ರೂಪುರೇಷೆ ಬದಲಾಗಿದೆ. ಐದು ಶತಮಾನಗಳಿಂದ ಈ ಹೋರಾಟದಲ್ಲಿ ಪಾಲ್ಗೊಂಡು ಲಕ್ಷಾಂತರ ಜನರ ಬಲಿದಾನವಾಗಿದೆ. ರಾಮನಿಗಾಗಿ ನೂರಾರು ಯುದ್ಧಗಳೇ ನಡೆದಿವೆ. ಐದು ಶತಮಾನಗಳ ಹೋರಾಟಕ್ಕೆ ಇಂದು ಫಲ ಸಿಕ್ಕಿದ್ದು ಕೋಟ್ಯಾಂತರ ಮನೆ-ಮನಗಳಲ್ಲಿ ಇಂದು ಹಬ್ಬದ ವಾತಾವರಣ ಎಂದು ಸಚಿವ ಸಿ.ಟಿ.ರವಿ ಹರ್ಷ ವ್ಯಕ್ತಪಡಿಸಿದರು. 1526ರಲ್ಲಿ ಬಾಬಾರ್ ಸೇನಾಧಿಪತಿ ಮೀರ್ಬಾಖಿ ಭವ್ಯವಾದ ಮಂದಿರವನ್ನ ಧ್ವಂಸ ಮಾಡಿ, ಆ ಧ್ವಂಸದ ಅವಶೇಷಗಳಿಂದಲೇ ಅದೇ ಅದೇ ಅಡಿಪಾಯ ಬಳಸಿಕೊಂಡು ಗುಂಬಜ್ ಕಟ್ಟುತ್ತಾನೆ. 80ರ ದಶಕದಲ್ಲಿ ಅದನ್ನ ಬಾಬ್ರಿ ಮಸೀದಿ ಎಂದು ಕರೆಯುತ್ತಾರೆ. ಅದಕ್ಕಿಂತ ಮೊದಲು ಅದಕ್ಕೆ ಜನ್ಮಸ್ಥಾನ್ ಮಸೀದಿ ಎಂದು ಕರೆಯುತ್ತಿದ್ದರು. ಅಂದರೆ, ರಾಮಜನ್ಮ ಸ್ಥಾನದಲ್ಲಿ ಕಟ್ಟಿದ ಮಸೀದಿ ಎಂಬುದು ಅದರ ತಾತ್ಪಾರ್ಯ ಎಂದರು. ಅವರಿಗೆ ಸಾಮ್ರಾಜ್ಯ ವಿಸ್ತರಣೆ ಉದ್ದೇಶ ಆಗಿರಲಿಲ್ಲ. ಸಂಸ್ಕೃತಿಯ ನಾಶದ ಉದ್ದೇಶವೂ ಇತ್ತು. ಹಾಗಾಗೇ, ಭಾರತದ ಪ್ರತೀಕವಾಗಿ ರಾಮನ ಜನ್ಮಸ್ಥಾನವನ್ನ ಧ್ವಂಸ ಮಾಡಿದರು.

AYODHYA 2

ಲಕ್ಷಾಂತರ ಯುವಕರು ಹಿಂದುತ್ವದತ್ತ ಆಕರ್ಷಿತರಾದರು : ನನ್ನಂತ ಲಕ್ಷಾಂತರ ಯುವಕರು ಹಿಂದುತ್ವದ ಕಡೆ ಆಕರ್ಷಿತರಾಗಲು ರಾಮಜನ್ಮಭೂಮಿ ಆಂದೋಲನ ಒಂದು ಕಾರಣ. ಆರಂಭದಲ್ಲಿ ನಡೆದ ಇಟ್ಟಿಗೆ ಪೂಜೆ, ಶಿಲಾ ಪೂಜೆ, ರಾಮಜ್ಯೋತಿ ಯಾತ್ರೆ, ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆವರೆಗೆ ಹೊರಟ ರಥಯಾತ್ರೆ ಇರಬಹುದು. ಇವೆಲ್ಲಾ ನನ್ನಂತ ಯುವಕರಿಗೆ ಯಾರೂ ಹೇಳದೆ-ಕೇಳದ ಆಂದೋಲನದಲ್ಲಿ ಪಾಲ್ಗೊಳ್ಳಲು ಪ್ರೇರೇಪಣೆ ಕೊಡ್ತು. ನಾನು 90ರ ಕರಸೇವೆಯಲ್ಲಿ ತಲುಪಲು ಆಗಲಿಲ್ಲ. 92ರಲ್ಲಿ ನಾನು, ಅಂದಿನ ಕಾರ್ಕಳ ಬಜರಂಗದಳ ಮುಖಂಡ ಸುನಿಲ್ ಕುಮಾರ್, ಬಾಳಿಗರು, ವಕೀಲ ಕಾನ ರಾಮಸ್ವಾಮಿ ಜೊತೆ ಕರಸೇವೆಯಲ್ಲಿ ಪಾಲ್ಗೊಳ್ಳೊವ ಭಾಗ್ಯ ಸಿಕ್ತು. ಕಳಂಕಿತ ಕಟ್ಟಡವನ್ನ ಉರುಳಿಸಿ, ಅಲ್ಲಿಂದ ಕಳಂಕವನ್ನ ತೊಡೆದು ಹಾಕೋ ಕಾರ್ಯದಲ್ಲಿ ನಾನು ಭಾಗಿಯಾದೆ ಅನ್ನೋದು ನನಗೆ ಸಂತೃಪ್ತಿಯ ಕ್ಷಣ, ಕೊವೀಡ್ ಇಲ್ಲದಿದ್ರೆ ನಾನೂ ಭಾಗಿಯಾಗುತ್ತಿದೆ ಎಂದರು.

Lord Rama statue in Ayodhya 1 768x576 1

ಹಿರಿಯೂರು ಕೃಷ್ಣಮೂರ್ತಿಯನ್ನ ಸ್ಮರಿಸಿದ ಸಿ.ಟಿ.ರವಿ : ಹಿರಿಯೂರು ಕೃಷ್ಣಮೂರ್ತಿ ನಮ್ಮೊಂದಿಗಿಲ್ಲ. ಕೃಷ್ಣಮೂರ್ತಿ ಹಾಗೂ ಕಲ್ಲಡ್ಕ ಪ್ರಭಾಕರ್ ಭಟ್ ಬಳಿ ನಾನು-ಸುನಿಲ್ ಸೂಸೈಡ್ ಸ್ಕ್ವಾಡ್ ಮಾಡುತ್ತಾರೆಂದು ಸುದ್ದಿ ಇತ್ತು. ಅಲ್ಲಿಗೆ ಸೇರಿಸಿಕೊಳ್ಳಿ ಎಂದು ಕೇಳಿದ್ವಿ. ಸುನಿಲ್‍ಗೆ 20ರ ಒಳಗಿನ ವಯಸ್ಸು. ನನಗೆ ಮನೆಯಲ್ಲಿ ಹೇಳಿ ಬಂದಿದ್ದೀಯಾ ಎಂದರು. ನಾನು ಇಲ್ಲ ಎಂದಿದ್ದೆ. ಅದಕ್ಕೆ ನಿಮಗೆ ಕೊಟ್ಟ ಕೆಲಸ ಮಾಡಿ ಎಂದಿದ್ದರು. ನಮಗೆ ಸರಯು ನದಿಯಿಂದ ಮರಳು ತರಲು ಸೂಚಿಸಿದ್ದರು. ನಾವು ಬಂದಿರೋ ಕೆಲಸವೇ ಬೇರೆ. ಸರಯು ನದಿಯಲ್ಲಿ ಮರಳು ತನ್ನಿ ಎಂದು ಹೇಳ್ತಾರೆಂದು ಗೊಣಗುತ್ತಲೇ ಮರಳು ತಂದಿದ್ದೇವು ಎಂದರು.

Share This Article
Leave a Comment

Leave a Reply

Your email address will not be published. Required fields are marked *